ವೈಲೆಂಟ್ ಸಿದ್ದರಾಮಯ್ಯ ಏಕಾಏಕಿ ಸೈಲೆಂಟ್; ರಾಜ್ಯದಲ್ಲಿ ಕುಗ್ಗಿ ಹೋಯ್ತಾ 'ಹುಲಿಯಾ' ಪವರ್? ಪಟ್ಟದ ಟಗರಿನ ತಂತ್ರವೇನು?

ವೈಲೆಂಟ್ ಸಿದ್ದರಾಮಯ್ಯ ಏಕಾಏಕಿ ಸೈಲೆಂಟ್; ರಾಜ್ಯದಲ್ಲಿ ಕುಗ್ಗಿ ಹೋಯ್ತಾ 'ಹುಲಿಯಾ' ಪವರ್? ಪಟ್ಟದ ಟಗರಿನ ತಂತ್ರವೇನು?

Published : Oct 06, 2025, 07:53 PM IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ ಅವರ ರಾಜಕೀಯ ಶೈಲಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಹಿಂದೆ 'ಹುಲಿಯಾ' ಎಂದೇ ಖ್ಯಾತರಾಗಿದ್ದ ಅವರ ದಿಟ್ಟತನ ಈಗ ಮಂಕಾಗಿದ್ದು, ಈ ಮೌನದ ಹಿಂದೆ ರಾಜಕೀಯ ಒತ್ತಡ, ಹೈಕಮಾಂಡ್ ಹಸ್ತಕ್ಷೇಪ ಅಥವಾ ಹೊಸ ವ್ಯೂಹಗಾರಿಕೆ ಇದೆಯೇ ಎಂಬ ಚರ್ಚೆ ಶುರುವಾಗಿದೆ.

ಬೆಂಗಳೂರು: ರಾಜಕೀಯ ಅಖಾಡದಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವ ಮತ್ತು ದಿಟ್ಟ ನಡೆಗಳಿಂದ 'ಒಂಟಿ ಸಲಗ', 'ಟಗರು', 'ಹುಲಿಯಾ' ಎಂದೇ ಗುರುತಿಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎರಡನೇ ಅವಧಿಯಲ್ಲಿ ನಿಜಕ್ಕೂ ಬದಲಾಗಿದ್ದಾರೆಯೇ? ಹಿಂದೆ ಕಂಡ ಸಿಡಿಗುಂಡಿನಂತಹ ಶಕ್ತಿ ಮತ್ತು ಏಕಾಂಗಿ ನಿರ್ಧಾರಗಳು ಈಗ ಮಂಕಾಗಿವೆಯೇ? ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಈ ಪ್ರಶ್ನೆಗಳಿಗೆ ಉತ್ತರ ಹುಡುಕುವಂತೆ ಮಾಡಿವೆ.

ಪಟ್ಟದ ಪೈಪೋಟಿ, ಕುಗ್ಗಿದ್ಯಾ 'ಹುಲಿಯಾ' ಪವರ್?
ಸಿದ್ದರಾಮಯ್ಯ ಅವರ ರಾಜಕೀಯ ಶೈಲಿಯು ಸದಾ ನೇರ, ನಿಷ್ಠುರ ಮತ್ತು ನಿರ್ಭೀತವಾಗಿರುತ್ತಿತ್ತು. ಆದರೆ, ಮುಖ್ಯಮಂತ್ರಿ ಸ್ಥಾನದ ಪೈಪೋಟಿ ಮತ್ತು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎದುರಾದ ಒತ್ತಡಗಳು ಈ 'ಒಂಟಿ ಸಲಗ'ಕ್ಕೆ ಅಂಕುಶ ಹಾಕಿದಂತೆ ಕಾಣಿಸುತ್ತಿದೆ.

ಸಂಕಷ್ಟ ಮತ್ತು ಒತ್ತಡ: ಸಿದ್ದರಾಮಯ್ಯ ಅವರು ಈ ಅವಧಿಯಲ್ಲಿ ತಮ್ಮ ಆಡಳಿತದ ಜೊತೆಗೆ ಆಂತರಿಕ ರಾಜಕೀಯ ಒತ್ತಡಗಳನ್ನು ಸಮರ್ಥವಾಗಿ ನಿರ್ವಹಿಸಬೇಕಾದ ಸಂಕಷ್ಟ ಎದುರಿಸಿದ್ದಾರೆ. ವಿರೋಧ ಪಕ್ಷಗಳಿಂದ ಮಾತ್ರವಲ್ಲದೆ, ಸ್ವಪಕ್ಷದೊಳಗಿನ ಮಹತ್ವಾಕಾಂಕ್ಷೆಗಳ ಪೈಪೋಟಿ ಅವರಿಗೆ ಸವಾಲಾಗಿದೆ.

ಹೈಕಮಾಂಡ್ ಹಸ್ತಕ್ಷೇಪ: ಅಧಿಕಾರದ ಹುಕುಂ ಮಾಡುವ ಅಧಿಕಾರವು ಹಿಂದೆ ಸಿದ್ದರಾಮಯ್ಯ ಅವರ ಕೈಯಲ್ಲಿ ಕೇಂದ್ರೀಕೃತವಾಗಿರುತ್ತಿತ್ತು. ಆದರೆ, ಈಗ ಬದಲಾದ ರಾಜಕೀಯ ಚಿತ್ರಣದಲ್ಲಿ ಆ ಅಧಿಕಾರ ಹೆಚ್ಚು ಮಟ್ಟಿಗೆ ಹೈಕಮಾಂಡ್ ಕೈ ಸೇರಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಅವರ ಸ್ವಾಭಾವಿಕ ವರ್ಚಸ್ಸಿನ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.

ಹಾಗಾಗಿ, ಆಪ್ತರ ವಲಯದಲ್ಲಿ ಕೂಡ 'ಬೆಂಕಿ ಮತ್ತು ಬಿರುಗಾಳಿ' ಎಬ್ಬಿಸುತ್ತಿದ್ದ ಸಿದ್ದರಾಮಯ್ಯ ನಿಜಕ್ಕೂ ಬದಲಾದರಾ? ಎಂಬ ಚರ್ಚೆಗಳು ನಡೆಯುತ್ತಿವೆ.

ಸಿದ್ದು ಸೈಲೆಂಟ್‌ ಹಿಂದಿನ ರಹಸ್ಯ ಮತ್ತು ವ್ಯೂಹ:

ಸಿದ್ದರಾಮಯ್ಯ ಅವರು ಈ ಹಿಂದೆ ಮಾಧ್ಯಮಗಳ ಎದುರು ಮತ್ತು ರಾಜಕೀಯ ವೇದಿಕೆಗಳಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಅವರು ತುಸು ಸೈಲೆಂಟ್ ಆಗಿದ್ದಾರೆ. ಈ ಸೈಲೆಂಟನ್ನು ಕೆಲವರು ಅವರ ದೌರ್ಬಲ್ಯ (Weakness) ಎಂದು ಪರಿಗಣಿಸಬಹುದು, ಆದರೆ ಅದು ಸಂಪೂರ್ಣ ಸತ್ಯವಲ್ಲ.

ಸೈಲೆಂಟಿನ ಹಿಂದಿನ ರಹಸ್ಯ:

  • ರಾಜಕೀಯ ವ್ಯೂಹ: ಸಿದ್ದರಾಮಯ್ಯ ಅವರ ಸೈಲೆಂಟ್ ನಡೆ ಕೇವಲ ಕುಗ್ಗುವಿಕೆ ಮಾತ್ರವಲ್ಲ, ಬದಲಿಗೆ ಒಂದು ಹೊಸ ರಾಜಕೀಯ ವ್ಯೂಹದ ಭಾಗವಾಗಿರಬಹುದು. ಮೌನವಾಗಿರುವುದು ರಾಜಕೀಯ ತಂತ್ರದ ಒಂದು ಪ್ರಮುಖ ಭಾಗವಾಗಿದ್ದು, ತಮ್ಮ ವಿರುದ್ಧದ ಪೈಪೋಟಿದಾರರ ನಡೆಯನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ಸೂಕ್ತ ಸಮಯದಲ್ಲಿ ಪ್ರತ್ಯುತ್ತರ ನೀಡಲು ಈ ಮೌನವನ್ನು ಅಸ್ತ್ರವಾಗಿ ಬಳಸುತ್ತಿರಬಹುದು.
    ಅಧಿಕಾರದ ಬಂಧನ: ಎರಡನೇ ಬಾರಿ ಪಟ್ಟವನ್ನು ಹಿಡಿದಿರುವುದು ಮತ್ತು ರಾಜಕೀಯ ಸಮೀಕರಣಗಳು ಬದಲಾಗಿರುವುದು, ಅವರನ್ನು ಹೆಚ್ಚು ಜಾಗರೂಕರನ್ನಾಗಿ ಮಾಡಿದೆ. ಒಂದು ನಿರ್ದಿಷ್ಟ ವ್ಯೂಹದಲ್ಲಿ ಬಂಧಿಯಾದಂತೆ ಕಾಣುತ್ತಿರಬಹುದು. ಅವರ ಬದಲಾವಣೆಯು ಸ್ವ ಇಚ್ಛೆಯಿಂದಲ್ಲ, ಬದಲಾಗಿ ಬದಲಾದ ರಾಜಕೀಯ ಅನಿವಾರ್ಯತೆಯಿಂದ ಬಂದಿರುವ ಮೌನ ಎಂದು ವಿಶ್ಲೇಷಿಸಲಾಗುತ್ತಿದೆ.

ಒಟ್ಟಿನಲ್ಲಿ, ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಮತ್ತು ಶೈಲಿ ಬದಲ್ ಗಯಾ ಆಗಿದ್ದು, ಈ ಬದಲಾವಣೆ ತಾತ್ಕಾಲಿಕವೇ ಅಥವಾ ದೀರ್ಘಕಾಲೀನವೇ ಎಂಬುದನ್ನು ಕಾಲವೇ ನಿರ್ಧರಿಸಲಿದೆ. 'ಹುಲಿಯಾ' ಯಾವಾಗ, ಯಾವ ಸಮಯದಲ್ಲಿ ಮತ್ತೆ ಘರ್ಜಿಸುತ್ತಾನೆ ಎಂಬ ಕುತೂಹಲ ಎಲ್ಲರಲ್ಲಿದೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more