Weekend Curfew : ವೀಕೆಂಡ್ ಕರ್ಫ್ಯೂ ನಡುವೆಯೇ ಉಡುಪಿ ಕೃಷ್ಣಮಠದಲ್ಲಿ ಚೂರ್ಣೋತ್ಸವ

Weekend Curfew : ವೀಕೆಂಡ್ ಕರ್ಫ್ಯೂ ನಡುವೆಯೇ ಉಡುಪಿ ಕೃಷ್ಣಮಠದಲ್ಲಿ ಚೂರ್ಣೋತ್ಸವ

Suvarna News   | Asianet News
Published : Jan 15, 2022, 09:20 PM IST

ಪ್ರತಿ ಸಂಕ್ರಾತಿಯಂದು ನಡೆಯುವ ಚೂರ್ಣೋತ್ಸವ
ವೀಕೆಂಡ್ ಕರ್ಫ್ಯೂ ನಡುವೆಯೇ ಕೃಷ್ಣಮಠದಲ್ಲಿ ನಡೆದ ಸಂಭ್ರಮ
ಸರಳವಾಗಿ ನಡೆದ ಚೂರ್ಣೋತ್ಸವ ಕಾರ್ಯಕ್ರಮ
 

ಬೆಂಗಳೂರು (ಜ. 15): ವೀಕೆಂಡ್ ಕರ್ಫ್ಯೂ ನಡುವೆಯೂ ಉಡುಪಿಯ (Udupi) ಕೃಷ್ಣಮಠದಲ್ಲಿ (Krishna Mutt) ಪ್ರತಿ ಸಂಕ್ರಾಂತಿಯಂದು ನಡೆಯುವ ಚೂರ್ಣೋತ್ಸವ (Churnotsava)ಜಾತ್ರೆ ಬಹಳ ಸರಳವಾಗಿ ನೆರವೇರಿತು. ಬಹಳ ಸಂಭ್ರಮದಲ್ಲಿ ಪ್ರತಿ ವರ್ಷ ಈ ಜಾತ್ರೆ ನಡೆಯುತ್ತಿತ್ತಾದರೂ, ವೀಕೆಂಡ್ ಕರ್ಫ್ಯೂ ಕಾರಣದಿಂದಾಗಿ ಈ ಬಾರಿ ಬಹಳ ಸರಳವಾಗಿ ನಡೆದಿದೆ.ಸುಮಾರು 30 ನಿಮಿಷಗಳ ಕಾಲ ಕೃಷ್ಣಮಠದಲ್ಲಿ ಕಾರ್ಯಕ್ರಮ ನಡೆದಿದ್ದು, ಕೇವಲ ಸಾಂಪ್ರದಾಯಿಕ ಆಚರಣೆಗಳನ್ನು ಮಾತ್ರವೇ ಈ ಬಾರಿ ಮಾಡಲಾಯಿತು.

Weekend Curfew : ವ್ಯಾಪಾರ-ವಹಿವಾಟು ಇಲ್ಲದೆ ವ್ಯಾಪಾರಸ್ಥರು ಕಂಗಾಲು
ಕೊರೋನಾ ನಿಯಮಗಳ ಹಿನ್ನೆಲೆಯಲ್ಲಿ ಸರಳವಾಗಿ ಜಾತ್ರೆ ನಡೆಯಿತು. ಸರಳ ಆಚರಣೆ ನಡುವೆಯೂ ಸಹ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಪ್ರಸಂಗಗಳು ನಡೆದವು. ರಥ ಎಳೆಯುವಾಗ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ. ಕಳೆದ 800 ವರ್ಷಗಳಿಂದ ಯಾವೆಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಕೃಷ್ಣಮಠ ಪಾಲಿಸಿಕೊಂಡು ಬಂದಿದೆಯೋ ಅಂಥ ರಿವಾಜುಗಳನ್ನು ಮಾತ್ರವೇ ಈ ಬಾರಿ ನಡೆಸಲಾಯಿತು. ಸಾಮಾನ್ಯವಾಗಿ 10 ರಿಂದ 20 ಸಾವಿರ ಜನರು ಈ ಜಾತ್ರೆಗೆ ಸೇರುತ್ತಿದ್ದರು. ಆದರೆ, ಜಿಲ್ಲಾಧಿಕಾರಿಯ ಸೂಚನೆ ಅನ್ವಯ ಈ ಬಾರಿ ಅತೀ ಕಡಿಮೆ ಜನರ ನಡುವೆ ಚೂರ್ಣೋತ್ಸವ ನಡೆಸಲಾಗಿದೆ.

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
26:49ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
Read more