Belagavi: ಬಿಜೆಪಿ ಭಿನ್ನಮತದ ವಿರುದ್ಧ ಶಾಸಕ ದುರ್ಯೋಧನ ಐಹೊಳೆ ಸಿಎಂಗೆ ಮನವಿ

Jan 26, 2022, 6:09 PM IST

ಬೆಂಗಳೂರು (ಜ. 26): ಬೆಳಗಾವಿ (Belagavi) ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತದ ಅಪಸ್ವರ ಎದ್ದಿದೆ. ಗುಂಪುಗಾರಿಕೆ ವಿರುದ್ಧ ಶಾಸಕ ದುರ್ಯೋಧನ ಐಹೊಳೆ (Duryodhana Aihole) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಿನ್ನಮತದ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇನೆ. ಪಕ್ಷಕ್ಕೆ ಹೊಡೆತ ಬೀಳುವ ಮುನ್ನವೇ ಭಿನ್ನಮತ ತಣಿಸಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ. 

Karnataka Politics: ಸಂಪರ್ಕದಲ್ಲಿರುವವರ ಪಟ್ಟಿ ಬಿಡುಗಡೆ ಮಾಡಲಿ, ಕಾಂಗ್ರೆಸ್‌ಗೆ ಸುಧಾಕರ್ ಸವಾಲು

'ಚುನಾವಣೆ ಹತ್ತಿರ ಇದ್ದಾಗ ಜವಾಬ್ದಾರಿ ಕೊಟ್ಟರೆ ಕೆಲಸ ಮಾಡಲು ಕಷ್ಟವಾಗುತ್ತದೆ. ಮುಂಚಿತವಾಗಿ ಕೊಟ್ಟರೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಬಹುದು. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ' ಎಂದು ದುರ್ಯೋಧನ ಐಹೊಳೆ ಹೇಳಿದ್ದಾರೆ.