ಬೆಳಗಾವಿ (Belagavi) ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತದ ಅಪಸ್ವರ ಎದ್ದಿದೆ. ಗುಂಪುಗಾರಿಕೆ ವಿರುದ್ಧ ಶಾಸಕ ದುರ್ಯೋಧನ ಐಹೊಳೆ (Duryodhana Aihole) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜ. 26): ಬೆಳಗಾವಿ (Belagavi) ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತದ ಅಪಸ್ವರ ಎದ್ದಿದೆ. ಗುಂಪುಗಾರಿಕೆ ವಿರುದ್ಧ ಶಾಸಕ ದುರ್ಯೋಧನ ಐಹೊಳೆ (Duryodhana Aihole) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಿನ್ನಮತದ ಬಗ್ಗೆ ವರಿಷ್ಠರ ಗಮನಕ್ಕೆ ತರುತ್ತೇನೆ. ಪಕ್ಷಕ್ಕೆ ಹೊಡೆತ ಬೀಳುವ ಮುನ್ನವೇ ಭಿನ್ನಮತ ತಣಿಸಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.
'ಚುನಾವಣೆ ಹತ್ತಿರ ಇದ್ದಾಗ ಜವಾಬ್ದಾರಿ ಕೊಟ್ಟರೆ ಕೆಲಸ ಮಾಡಲು ಕಷ್ಟವಾಗುತ್ತದೆ. ಮುಂಚಿತವಾಗಿ ಕೊಟ್ಟರೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಬಹುದು. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ' ಎಂದು ದುರ್ಯೋಧನ ಐಹೊಳೆ ಹೇಳಿದ್ದಾರೆ.