ಬೆಂಗಳೂರು ಗಲಭೆ: ಗಲಾಟೆ ನಂತರ ಎಸ್ಕೇಪ್ ಆಗಿದ್ದ ಖಲೀಂ ಅರೆಸ್ಟ್‌!

Aug 14, 2020, 10:06 AM IST

ಬೆಂಗಳೂರು (ಆ. 14): ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗವಾರ ಕಾರ್ಪೋರೇಟರ್‌ ಪತಿ ಖಲೀಂ ಅರೆಸ್ಟ್‌ ಅಗಿದ್ದಾರೆ. ಈತ ಗಲಭೆಗೂ ಮುನ್ನ ಪೊಲೀಸ್‌ ಠಾಣೆ ಎದುರು ಬಂದು ಪ್ರಚೋದನಕಾರಿಯಾಗಿ ಮಾತನಾಡಿದ್ದ. ಗಲಭೆ ಶುರುವಾದ ಬಳಿಕ ಎಸ್ಕೇಪ್ ಆಗಿದ್ದ. ಬಳಿಕ ಪೊಲೀಸರಿಗೆ ಸಹಕರಿಸುವಂತೆ ನಾಟಕವಾಡಿದ್ದ.ಈತ ಬಿಬಿಎಂಪಿ ಸದಸ್ಯೆ ಇರ್ಷಾದ್ ಬೇಗಂ ಪತಿ. ಈ ಗಲಭೆಯಲ್ಲಿ ಖಲೀಂ ಪಾತ್ರ ಇರುವುದು ಖಚಿತವಾಗಿದ್ದು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. 

ಗಲಭೆಗೆ ಪಕ್ಕಾ ಪ್ಲಾನ್, ಪಕ್ಕಾ ಸಿದ್ಧತೆ; ಗಲಭೆಗೆ ಪ್ರಚೋದನೆ ಕೊಟ್ಟನಾ ಆ ನಾಯಕ.?