ದರ್ಶನ್‌​ SLP ಖೆಡ್ಡಾ, ಶಿಕ್ಷೆ ಕೊಡಿಸೋಕೆ ಖಾಕಿ ಸಿದ್ಧ! ಬೇಲ್ ರದ್ದತಿಗೆ 5 ಕಾರಣಗಳ ಪಟ್ಟಿ ರೆಡಿ

ದರ್ಶನ್‌​ SLP ಖೆಡ್ಡಾ, ಶಿಕ್ಷೆ ಕೊಡಿಸೋಕೆ ಖಾಕಿ ಸಿದ್ಧ! ಬೇಲ್ ರದ್ದತಿಗೆ 5 ಕಾರಣಗಳ ಪಟ್ಟಿ ರೆಡಿ

Published : Jan 09, 2025, 06:55 PM IST

ದರ್ಶನ್, ಪವಿತ್ರಾ ಗೌಡ ಸೇರಿ 7 ಜನ ಆರೋಪಿಗಳ ಬೇಲ್ ರದ್ದು ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ದರ್ಶನ್ ವಿರುದ್ಧ ಎಸ್‌ಎಲ್‌ಪಿ ಅರ್ಜಿ ಸಲ್ಲಿಕೆಯಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಬೇಲ್ ರದ್ದು ಮಾಡುವಂತೆ ಪ್ರಾಸಿಕ್ಯೂಶನ್ ವಾದ ಮಂಡಿಸಲಿದೆ.

ದರ್ಶನ್‌ಗೆ ಹೈಕೋರ್ಟ್ ಕೊಟ್ಟಿರೋ ಬೇಲ್ ವಿರುದ್ದ ರಾಜ್ಯಸರ್ಕಾರ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದೆ. ದರ್ಶನ್ , ಪವಿತ್ರಾ ಗೌಡ ಸೇರಿದಂತೆ 7 ಜನ ಆರೋಪಿಗಳ ಬೇಲ್ ರದ್ದು ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ. ಅದ್ರಲ್ಲೂ ದರ್ಶನ್ ವಿರುದ್ದ SLP ಅರ್ಜಿ ಸಲ್ಲಿಕೆಯಾಗುದ್ದು ಇದುವೇ ದಾಸನ ಬೇಲ್​ಗೆ ಕೊಕ್ಕೆ ಹಾಕೋ ಚಾನ್ಸ್ ಇದೆ. ಅಷ್ಟಕ್ಕೂ ಏನಿದು SLP  ಕಂಟಕ?

ಕಳೆದ ಡಿಸೆಂಬರ್ 13ನೇ ತಾರೀಖು ದರ್ಶನ್ , ಪವಿತ್ರಾ ಗೌಡ ಮತ್ತು ರೇಣುಕಾಸ್ವಾಮಿ ಮರ್ಡರ್​​ ಕೇಸ್​ ನ ಒಟ್ಟು ಏಳು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಕೊಟ್ಟಿದೆ. ಆದ್ರೆ ಇದರ ವಿರುದ್ದ ಈಗ ಸುಪ್ರೀಂ ಕೋರ್ಟ್​ನಲ್ಲಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಇವರಿಗೆ ನೀಡಿರೋ ಬೇಲ್​ನ ರದ್ದು ಮಾಡಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಕೊಡಿ ಅಂತ ಮನವಿ ಸಲ್ಲಿಸಿದೆ.

ಅದ್ರಲ್ಲೂ ದರ್ಶನ್​ ಬೇಲ್ ನ ತ್ವರಿತವಾಗಿ ರದ್ದು ಮಾಡಬೇಕು ಅಂತ ಪ್ರಾಸಿಕ್ಯೂಶನ್ ವಾದ ಮಂಡಿಸಲಿದೆ. ಇದಕ್ಕಾಗಿ ಎಸ್.ಎಲ್.ಪಿ ಅಂದ್ರೆ ಸ್ಪೆಷಲ್ ಲೀವ್ ಪಿಟಿಷನ್ ಸಲ್ಲಿಕೆ ಆಗಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು , ಅಧಿಕಾರಸ್ಥರಿಗೆ ಬೇಲ್ ಸಿಕ್ರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಚಾನ್ಸ್ ಇರುತ್ತೆ. ಈ ಕೇಸ್​​ನಲ್ಲಿ 262 ಸಾಕ್ಷಿಗಳಿದ್ದು ಇವರ ಮೇಲೆ ದರ್ಶನ್ ಪ್ರಭಾವ ಬೀರೋದು ಖಚಿತ ಅಂತ ವಾದ ಮಂಡನೆ ಮಾಡಲಿದೆ.

ಇನ್ನೂ ದರ್ಶನ್ ಬೆನ್ನು ನೋವಿನ ನೆಪ ಹೇಳಿ ಮಧ್ಯಂತರ ಬೇಲ್ ಪಡೆದುಕೊಂಡು 6 ವಾರ ಆಸ್ಪತ್ರೆಯಲ್ಲಿ ಟೈಂ ಪಾಸ್ ಮಾಡಿದ ವಿಚಾರವನ್ನೂ ಸುಪ್ರಿಂ ಕೋರ್ಟ್ ಎದುರು ಇಡಲಾಗುತ್ತೆ. ಇದು ಕೂಡ ದರ್ಶನ್​ಗೆ ಕಂಟಕ ಆಗೋ ಸಾಧ್ಯತೆ ಇದೆ.

ಸದ್ಯ ಜಾಮೀನು ಸಿಗ್ತಾ ಇದ್ದ ಹಾಗೆ ದರ್ಶನ್ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಬೀಡುಬಿಟ್ಟಿದ್ದಾರೆ. ವರ್ಷದ ಮೊದಲ ದಿನ ಡೆವಿಲ್​ ಸಿನಿಮಾಗೆ ಒಂದು ಗಂಟೆ ಡಬ್ಬಿಂಗ್ ಮಾಡಿರೋ ದರ್ಶನ್ ಮತ್ತೆ ಸಿನಿಮಾದಲ್ಲಿ ಌಕ್ಟಿವ್ ಆಗೋ ಆಲೋಚನೆಯಲ್ಲಿ ಇದ್ದಾರೆ. ಇದೇ ಸಂಕ್ರಾಂತಿ ಹೊತ್ತಲ್ಲಿ ಬೆನ್ನು ನೋವಿಗೆ ಸರ್ಜರಿ ಮಾಡಿಸಿಕೊಳ್ಳೋದಕ್ಕೂ ಪ್ಲಾನ್ ಮಾಡಿದ್ದಾರೆ.

ಇನ್ನೂ ಪವಿತ್ರಾ ಗೌಡ ಸಂಕ್ರಾಂತಿಗೆ ತನ್ನ ರೆಡ್ ಕಾರ್ಪೆಟ್ ಸ್ಟುಡಿಯೋ ಬೊಟಿಕ್ ರೀ ಓಪನ್ ಮಾಡಿ ಮತ್ತೆ ಹೊಸ ಜೀವನ ಶುರು ಮಾಡೋ ಯೋಜನೆ ಹಾಕಿಕೊಂಡಿದ್ದಾಳೆ. ಆದ್ರೆ ಕಾನೂನಿನ ಕುಣಿಕೆ ಅಷ್ಟು ಬೇಗ ಅಂತ ಇವರನ್ನ ಬಿಡೋ ಸಾಧ್ಯತೆ ಇಲ್ಲ. ಸದ್ಯ ಸುಪ್ರಿಂಗೆ ಸಲ್ಲಿಗೆಯಾಗಿರೋ ಎಸ್.ಎಲ್.ಪಿ ಅರ್ಜಿ ದಾಸ & ಗ್ಯಾಂಗ್​ಗೆ ಮತ್ತೆ ಢವ ಢವ ಶುರುವಾಗುವಂತೆ ಮಾಡಿದೆ.
 

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ