ಏರ್‌ಪೋರ್ಟ್‌ನಲ್ಲಿ ಬಾಂಬ್ ಪ್ರಕರಣ; ಮಂಗಳೂರಿಗೆ ಎನ್‌ಐಎ ತಂಡ

Jan 21, 2020, 10:29 AM IST

ಮಂಗಳೂರು (ಜ. 21): ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಮಂಗಳೂರಿಗೆ ಈಗ ಬೆಂಗಳೂರಿನ ಎನ್‌ಐಎ ತಂಡ ಆಗಮಿಸಿದೆ. ಮಂಗಳೂರಿನ ಪೊಲೀಸರಿಂದ ಮಾಹಿತಿಯನ್ನು ಸಂಗ್ರಹಿಸಿದೆ. ಬಾಂಬ್ ಇಟ್ಟಿರುವ ವ್ಯಕ್ತಿಯ ಬಗ್ಗೆ ತೀವ್ರ ಶೋಧ ಕಾರ್ಯ ಮುಂದುವರೆದಿದೆ.

ರಾಜ್ಯದ 2ನೇ ಜನನಿಬಿಡ ಏರ್‌ಪೋರ್ಟ್‌, ನಿತ್ಯ 60ಕ್ಕೂ ಹೆಚ್ಚು ವಿಮಾನ!

ಅಪರಾಧ ವಿಭಾಗದ ಡಿಸಿಪಿ ಲಕ್ಷ್ಮೀ ಗಣೇಶ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ದೆಹಲಿಯ ಎನ್‌ಐಎ ತಂಡವೂ ಆಗಮಿಸುವ ಸಾಧ್ಯತೆ ಇದೆ. ಬಾಂಬ್ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!