'ತುಕ್ಡೆ ತುಕ್ಡೆ ಗ್ಯಾಂಗನ್ನು ಅವತ್ತೇ ಮಟ್ಟ ಹಾಕಿದ್ರೆ ಈ ಸ್ಥಿತಿ ಬರ್ತಾ ಇರಲಿಲ್ಲ'

Feb 21, 2020, 3:53 PM IST

ಬೆಂಗಳೂರು (ಫೆ. 21):  ಫ್ರೀಡಂಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಅಮೂಲ್ಯ ಪಾಕ್ ಪರ ಘೋಷಣೆ ಕೂಗಿರುವ ಪ್ರಕರಣ ಹಾಗೂ ಟೌನ್ ಹಾಲ್ ಮುಂದೆ ಇನ್ನೊರ್ವ ಹುಡುಗಿ ಕೂಡಾ ಪಾಕ್ ಪರ ಘೋಷಣೆ ಕೂಗಿರುವ ಘಟನೆಗೆ ಸಂಬಂಧಪಟ್ಟಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ. 

ಪಾಕ್ ಜಿಂದಾಬಾದ್ ಎಂದ ಅಮೂಲ್ಯ: ಇದಕ್ಕೆ ಕುಮಾರಸ್ವಾಮಿ ಖಡಕ್ ಪ್ರತಿಕ್ರಿಯೆ

'ಅಮೂಲ್ಯ ಹಿಂದೆ ಒಂದು ಸಮಾಜಘಾತುಕ ಸಂಘಟನೆ ಇದೆ. ನಮ್ಮ ದೇಶದ ಕಾನೂನು ವ್ಯವಸ್ಥೆ ಇದಕ್ಕೆ ಜವಾಬ್ದಾರಿ. ಇಂತವರಿಗೆ ಸುಲಭವಾಗಿ ಜಾಮೀನು  ಸಿಗುತ್ತೆ. ಆರಾಮಾಗಿ ಓಡಾಡಿಕೊಂಡು ಇರುತ್ತಾರೆ. ಎಲ್ಲಿಯವರೆಗೆ ಶಿಕ್ಷೆ ಆಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಕ್ರಿಮಿ ಕೀಟಗಳು ಹೊರಗೆ ಬರುತ್ತಲೇ ಇರುತ್ತವೆ' ಎಂದು ಮುತಾಲಿಕ್ ಹೇಳಿದ್ದಾರೆ.  

ಫೆಬ್ರವರಿ 21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ