ನಿಮ್ಮ ಸುತ್ತಮುತ್ತಲಿನ ಪರಿಸರ ಹಾಳಾಗ್ತಾ ಇದೆಯಾ? ಕಮಾಂಡ್ ಕಂಟ್ರೋಲ್‌ಗೆ ಕರೆ ಮಾಡಿ

Oct 16, 2020, 5:31 PM IST

ಬೆಂಗಳೂರು (ಅ. 16): ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದೆ. ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದನ್ನೆಲ್ಲಾ ಯಾರಿಗೆ ದೂರು ಕೊಡೋದು? ಎಲ್ಲಿ, ಹೇಗೆ ದೂರು ಕೊಡೋದು ಅಂತ ಸಾರ್ವಜನಿಕರ ಬಹುದೊಡ್ಡ ಸಮಸ್ಯೆಯಾಗಿತ್ತು. ಹೀಗಾಗಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಕಮಾಂಡ್ ಕಂಟ್ರೋಲ್ ಕೇಂದ್ರವನ್ನು ಅರಣ್ಯ ಸಚಿವ ಆನಂದ್ ಸಿಂಗ್ ಇಂದು ಉದ್ಘಾಟಿಸಿದ್ದಾರೆ. 

ಕೆ. ಆರ್‌ ಪೇಟೆ ಮಾದರಿಯಲ್ಲೇ ಶಿರಾದಲ್ಲೂ ಗೆಲ್ಲಲು ವಿಜಯೇಂದ್ರ ತಂತ್ರ

ಬೆಂಗಳೂರಿನ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ರಾಜ್ಯದ ಯಾವುದೇ ಹಳ್ಳಿಗಳಿಂದಲೂ ದೂರು ನೀಡಬಹುದು. ದೂರು ನೀಡಲು 080- 25582559 ಕ್ಕೆ ಕರೆ ಮಾಡಿದರೆ ಸಾಕು.