
ಉದ್ಯಮಿ ಅರವಿಂದ್ ರೆಡ್ಡಿ ಅವರಿಗೆ ಬೆದರಿಕೆ ಹಾಕಿದ ವಿಚಾರವಾಗಿ ಈಗಾಗಲೇ ಸ್ಯಾಂಡಲ್ವುಡ್ ನಟಿಯ ಸ್ನೇಹಿತ ವೈಶಾಕ್ ಅವರನ್ನು ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ಇದೀಗ ಆ ನಟಿಯವನ್ನು ವಿಚಾರಣೆಯ ಸಂಬಂಧ ಠಾಣೆಗೆ ಕರೆಸಿದ್ದರು. ಈ ವೇಳೆ ಆ ನಟಿ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ.
ಬೆಂಗಳೂರು: ಉದ್ಯಮಿ ಅರವಿಂದ್ ರೆಡ್ಡಿಗೆ ನಟಿಯ ಸ್ನೇಹಿತ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿನ್ನೆ ಬೆಂಗಳೂರಿನ ಎಚ್ಎಎಲ್ ಠಾಣೆಗೆ ಸ್ಯಾಂಡಲ್ವುಡ್ ನಟಿಯನ್ನು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಆ ನಟಿ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ.
ನನಗೆ 2018ರಿಂದಲೂ ಸ್ನೇಹಿತ ವೈಶಾಕ್ ಪರಿಚಯವಿದೆ. ವೈಶಾಕ್ ನನ್ನ ಸ್ನೇಹಿತನಾಗಿರುವುದರಿಂದ ಆಗಾಗ ನಮ್ಮ ಮನೆಗೆ ಬರುತ್ತಿದ್ದ. ನನ್ನ ವಿಚಾರವಾಗಿ ಅರವಿಂದ ರೆಡ್ಡಿ ಅವರಿಗೆ ವೈಶಾಕ್ ಬೆದರಿಕೆ ಪತ್ರ ಕಳಿಸಿರುವ ವಿಚಾರ ನನಗೆ ಗೊತ್ತಿಲ್ಲ. ನಾನು ವೈಶಾಕ್ಗೆ ಬೆದರಿಕೆ ಹಾಕು ಎಂದು ಯಾವತ್ತೂ ಹೇಳಿಲ್ಲ. ನನಗೂ ಹಾಗೂ ಈ ಕೇಸ್ಗೂ ಯಾವುದೇ ಸಂಬಂಧವಿಲ್ಲ ಎಂದು ಆ ಸ್ಯಾಂಡಲ್ವುಡ್ ನಟಿ ಹೇಳಿದ್ದಾಳೆ.