ಕಾಂತಾರಾ ಶಿವನ ಭೇಟಿ ಮಾಡ್ಬೇಕಾ ?: ಇಲ್ಲಿದೆ ಸೂಪರ್ ಚಾನ್ಸ್ !

ಕಾಂತಾರಾ ಶಿವನ ಭೇಟಿ ಮಾಡ್ಬೇಕಾ ?: ಇಲ್ಲಿದೆ ಸೂಪರ್ ಚಾನ್ಸ್ !

Published : Jul 06, 2023, 02:38 PM IST

ರಿಷಬ್ ಅಭಿಮಾನಿಗಳ ಭೇಟಿಗೆ ಕಾರಣ ಏನು ಗೊತ್ತಾ.?
ಕಾಂತಾರ2 ಕೆಲಸ ಬಿಟ್ಟು ಪ್ಯಾನ್ಸ್ ಭೇಟಿಗೆ ಶೆಟ್ರು ಪ್ಲ್ಯಾನ್!
'ಎಲ್ಲರೂ ಬನ್ನಿ ಭೇಟಿಯಾಗೋಣ' ಎಂದ ರಿಷಬ್

ಕಾಂತಾರದ ಶಿವ ರಿಷಬ್ ಶೆಟ್ಟಿ ಇಷ್ಟು ದಿನ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ರು. ಕಾಂತಾರ2 ಸ್ಕ್ರಿಪ್ಟ್ ಕೆಲಸ, ಅಮೆರಿಕಾ ಪ್ರವಾಸ, ಫ್ಯಾಮಿಲಿ ಜೊತೆ ಟ್ರಿಪ್ ಸಹವಾಸ ಅಂತ ಒಂದ್ ದಿನವೂ ಬಿಡುವಿಲ್ಲದೇ ಓಡಾಡ್ತಿದ್ರು. ಆದ್ರೆ ಈಗ ನಿಮ್ಗೆಲ್ಲಾ ಒಂದು ಸೂಪರ್ ಚಾನ್ಸ್ ಕೊಟ್ಟಿದ್ದಾರೆ ಶೆಟ್ರು. ಕಾಂತಾರ (Kantara) ಶಿವನನ್ನ ಭೇಟಿ ಮಾಡ್ಬೇಕಾ. ಹಾಗಾದ್ರೆ ಎಲ್ಲರೂ ಬನ್ನಿ ಭೇಟಿಯಾಗೋಣ ಅಂತ ಅಭಿಮಾನಿಗಳಿಗೆ ಮನ ತುಂಬಿ ಕರೆದಿದ್ದಾರೆ. ಕಾಂತಾರ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ರಿಷಬ್ ಶೆಟ್ಟಿ (Rishabh Shetty) ಈಗ ಕನ್ನಡ ಚಿತ್ರರಂಗದ ಹಾಟ್ ಫೇವರೇಟ್. ರಿಷಬ್ರನ್ನ ಒಮ್ಮೆಯಾದ್ರು ಭೇಟಿ ಮಾಡ್ಬೇಕು. ಶೇಕ್ ಹ್ಯಾಂಡ್ ಕೊಡ್ಬೇಕು ಅನ್ನೋ ಆಸೆ ಹಲವರಲ್ಲಿದೆ. ಅವರನ್ನೆಲ್ಲಾ ಮೀಟ್ ಮಾಡೋಕೆ ಈಗ ಶೆಟ್ರು ಸ್ಥಳ ಸಮಯ ನಿಗಧಿ ಮಾಡಿದ್ದಾರೆ. ಜುಲೈ 7ನೇ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ (Bengaluru) ನಂದಿ ಲಿಂಕ್ ಗ್ರೌಂಡ್‌ನಲ್ಲಿ ತನ್ನ ಅಭಿಮಾನಿಗಳನ್ನ (Fans) ಭೇಟಿ ಆಗುತ್ತೇನೆ ಎಲ್ಲರೂ ಬನ್ನಿ ಎಂದಿದ್ದಾರೆ ರಿಷಬ್ ಶೆಟ್ಟಿ. ಅದಕ್ಕೆ ಕಾರಣವೂ ಇದೆ. ಜುಲೈ 7 ರಂದು ರಿಷಬ್ ಶೆಟ್ಟಿ ಜನ್ಮದಿನ. ಈ ದಿನವನ್ನ ತನ್ನ ಫ್ಯಾನ್ಸ್ಗಾಗಿ ಕಾಯ್ದಿರಿಸಿದ್ದಾರೆ ರಿಷಬ್.

ಇದನ್ನೂ ವೀಕ್ಷಿಸಿ:  ಸಿಲಿಕಾನ್‌ ಸಿಟಿಯಲ್ಲಿ ಭೀಕರ ಅಪಘಾತ: ಮಹಿಳೆ ಬದುಕಿದ್ದೇ ಪವಾಡ..ಸಿಸಿಟಿವಿ ದೃಶ್ಯ ಭಯಾನಕ..!

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!