ಜೈಲಲ್ಲಿ ದರ್ಶನ್ ‘ಅವರ’ಜೊತೆ ಮಾತ್ರ ಮಾತುಕತೆ.. ಯಾರವನು..?: ನಟನ ಬಿಡುಗಡೆ ಭವಿಷ್ಯ ಹೇಳ್ತು ನಿಗೂಢ ಕಲ್ಲು!

Aug 12, 2024, 4:25 PM IST

ನಟ ದರ್ಶನ್ ಪರಪ್ಪನ ಅಗ್ರಹಾರ ಸೇರಿ 50 ದಿನ ಕಂಪ್ಲೀಟ್ ಆಗಿದೆ. ಇದ್ರ ಮಧ್ಯೆ ದರ್ಶನ್ ವಿರುದ್ಧ ಮತ್ತೊಂದು ಸ್ಟ್ರಾಂಗ್ ಎವಿಡೆನ್ಸ್ ಪೊಲೀಸರ ಕೈ ಸೇರುವ ಸಾಧ್ಯತೆ ಇದ್ದು, ದರ್ಶನ್‌ಗೆ ತನ್ನವರೇ ಮುಳುವಾಗ್ತಾರಾ ಅನ್ನೋ ಪ್ರಶ್ನೆ ಕಾಡ್ತಿದೆ. ಇದ್ರ ಜೊತೆಗೆ ನಿಗೂಢ ಕಲ್ಲೊಂದು ದರ್ಶನ್ ಬಿಡುಗಡೆ ಭವಿಷ್ಯ ನುಡಿದಿದೆ. ದರ್ಶನ್ ಜೈಲಲ್ಲಿ ಅದೊಬ್ಬನ ಜೊತೆಯೇ ಕೂತು ಮೀಟಿಂಗ್ ಮಾಡ್ತಿದ್ದಾನಂತೆ.. ಅವರೊಂದಿಗೆ ಮಾತ್ರ ಮಾತಾಡ್ತಿದ್ದಾನಂತೆ. ಹಾಗಾದ್ರೆ ಯಾರವನು..? ದರ್ಶನ್ ಜೈಲು ಜೀವನಕ್ಕೆ ಸೆಟ್ ಆಗಿ ಬಿಟ್ಟಿದ್ದಾರಂತೆ. ಜೈಲಲ್ಲಿ ಇರೋ ದರ್ಶನ್ ರೌಡಿ ಶೀಟರ್‌ಗಳ ಜೊತೆ ಮೀಟಿಂಗ್ ಮಾಡ್ತಿದ್ದಾರಂತೆ. ಅದೊಂದು ನಿಗೂಢ ಕಲ್ಲು ದರ್ಶನ್ ಬಿಡುಗಡೆ ಬಗ್ಗೆ ಭವಿಷ್ಯ ನುಡಿದಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಸ್ಟ್ರಾಂಗ್ ಆಗ್ತಿದೆ. ಇತ್ತ ತನಿಖಾಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸೋಕೆ ರೆಡಿಯಾಗಿದ್ದಾರೆ. ಇದ್ರ ಮಧ್ಯೆ ದರ್ಶನ್ ರಿಲೀಸ್ ಭವಿಷ್ಯವೊಂದು ಹೊರಬಿದ್ದಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.