ಗೌರಿ-ಗಣೇಶ ಹಬ್ಬಕ್ಕೆ 'ಇಬ್ಬನಿ ತಬ್ಬಿದ ಇಳೆಯಲಿ' ಟ್ರೀಟ್, ಈ ಸಿನಿಮಾ ವಿಶೇಷತೆಗಳೇನು..?

Sep 5, 2024, 1:23 PM IST

ಇಂದು (ಸೆಪ್ಟೆಂರ್ 5ಕ್ಕೆ ತೆರೆ ಕಂಡಿದೆ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ರಕ್ಷಿತ್ ಶೆಟ್ಟಿ ಟೀಂ ಮಾತುಕತೆ ನಡೆಸಿದೆ. ಈ ವೇಳೆ ಟೀಮ್ ಈ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರವು ಅಮರ ಪ್ರೇಮ ಕಾವ್ಯ ಎಂದಿದೆ. ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರವನ್ನು ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದಾರೆ. 

'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದಲ್ಲಿ ವಿಹಾನ್, ಅಂಕಿತ ಅಮರ್, ಮಯೂರಿ ಜೋಡಿಯಾಗಿ ನಟಿಸಿದ್ದಾರೆ. ಈ  ಚಿತ್ರ ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ಪ್ರೀತಿಯ ಹೊಸ ಅನುಭವ ಕೊಡಲಿದೆ ಎಂದಿದೆ ರಕ್ಷಿತ್ ಶೆಟ್ಟಿ ಅಂಡ್ ಟೀಮ್. ನಟ-ನಿರ್ದೇಶಕರಾದ ರಕ್ಷಿತ್ ಶೆಟ್ಟಿ ಇಬ್ಬನಿ ತಬ್ಬಿದ ಇಳೆಯಲಿ ನಿರ್ಮಾಣ ಮಾಡಿದ್ದೇಕೆ.? ಈ ಮೂಲಕ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದೇಕೆ? ಎಲ್ಲದಕ್ಕೂ ಉತ್ತರಕ್ಕೆ ವಿಡಿಯೋ ನೋಡಿ!