Puneeth Rajkumar;ಬರ್ತಾ ನನ್ನ ತಮ್ಮನಾಗಿ ಬಂದ, ಹೋಗ್ತಾ ಅಪ್ಪನಾಗಿ ಹೋದ

Nov 16, 2021, 10:39 PM IST

ಬೆಂಗಳೂರು (ನ.16)  ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಇಡೀ ಜಗತ್ತು ನಮನ ಸಲ್ಲಿಸಿದೆ. ತಮ್ಮನ ಕುರಿತಾಗಿ ಮಾತನಾಡುತ್ತ  ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಕಣ್ಣೀರಾದರು. 

ಪುನೀತ್ ರಾಜ್ ಕುಮಾರ್ ಕರ್ನಾಟಕ ರತ್ನ

ಪುನೀತ್ ನಮ್ಮನ್ನು ಅಗಲಿ  ಹದಿನೈದು ದಿನಗಳು ಉರುಳಿದೆ.  ಇಷ್ಟು ದಿನ ತಡೆದುಕೊಂಡಿದ್ದೆ ಆದರೆ ಇವತ್ತು ಅತ್ತು ಸ್ವಲ್ಪ ಹಗುರಾಗುತ್ತೇನೆ  ಎನ್ನುತ್ತಲೇ ರಾಘವೇಂದ್ರ ರಾಜ್ ಕುಮಾರ್ ಗದ್ಗದಿತರಾದರು. ಪುನೀತ್ ರಾಜ್ ಕುಮಾರ್ ಅವರ ಸಾಮಾಜಿಕ ಕೆಲಸಗಳ ಕಾರಣಕ್ಕೆ ನಮ್ಮ ಜತೆಯೇ  ಇರುತ್ತಾರೆ ಎಂದು ರಾಘವೇಂದ್ರ ರಾಜ್ ಕುಮಾರ್  ಹೇಳಿದರು. .