ನಿಖಿಲ್‌ ನಿಶ್ಛಿತಾರ್ಥ: ಡಿ ಬಾಸ್‌, ಯಶ್, ಸುಮಲತಾ ಬರ್ತಾರಾ?

Feb 10, 2020, 10:08 AM IST

ಚಂದನವನದ ಹ್ಯಾಂಡ್ಸಂ ಹೀರೋ ನಿಖಿಲ್‌ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ ಸಿದ್ಧತೆ ನಡುವೆಯೂ, ಸುವರ್ಣ ನ್ಯೂಸ್‌ ಜೊತೆ exclusive ಆಗಿ ಮಾತನಾಡಿದ್ದಾರೆ. ಅಷ್ಟಕ್ಕೂ ನಿಶ್ಚಿತಾರ್ಥಕ್ಕೆ ಮಂಡ್ಯ ಎಂಪಿ ಸುಮಲತಾ, ಯಶ್ ಹಾಗೂ ದರ್ಶನ್‌ಗೆ ಇದ್ಯಾ ಕರೆ?

ಲೋಕಸಭಾ ಚುನಾವಣೆಯಲ್ಲಿ ಮಂಡ್ಯವೇ ಇಡೀ ಭಾರತದಲ್ಲಿ ಕೇಂದ್ರ ಬಿಂದುವಾಗಿದ್ದು, ಆಗಿನ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ವಿರುದ್ಧ ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಸ್ಪರ್ಧಿಸಿದ್ದರು. ಸುಮಲತಾಗೆ ಬೆನ್ನೆಲುವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇದ್ದರು. ಚುನಾವಣೆಯ ಪ್ರಚಾರದ ಭರಾಟೆ ಹೆಚ್ಚಾದಂತೆ ವೈಯಕ್ತಿಕ ನಿಂದನೆಯೂ ಹೆಚ್ಚಾಗಿತ್ತು. ನಿಖಿಲ್ ಸೋತಿದ್ದು ಇದೀಗ ಇತಿಹಾಸ. ನಿಖಿಲ್ ನಿಶ್ಚಿತಾರ್ಥ ನಡೆಯುತ್ತಿದೆ. ಹಳೇ ದ್ವೇಷ ಮರೆತು, ಸ್ಯಾಂಡಲ್‌ವುಡ್‌ ದಿಗ್ಗಜರಾದ ಯಶ್, ದರ್ಶನ್ ಹಾಗೂ ಸುಮಲತಾರನ್ನು ಆಹ್ವಾನಿಸಿದ್ದಾರಾ? ನಿಖಿಲ್ ಈ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ?