ಆಸ್ಪತ್ರೆಗೆ ದಾಸ ಶಿಫ್ಟ್‌: ವಿಮ್ಸ್ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್.. ಸದ್ಯದಲ್ಲೇ ದರ್ಶನ್‌ಗೆ ಸರ್ಜರಿ

ಆಸ್ಪತ್ರೆಗೆ ದಾಸ ಶಿಫ್ಟ್‌: ವಿಮ್ಸ್ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್.. ಸದ್ಯದಲ್ಲೇ ದರ್ಶನ್‌ಗೆ ಸರ್ಜರಿ

Published : Oct 24, 2024, 04:13 PM IST

ಹೈಕೋರ್ಟ್​​ನಲ್ಲಿ ಬೇಲ್ ಅರ್ಜಿ ಮುಂದೂಡಿಗೆ ಆದ ಬೆನ್ನಲ್ಲೇ ದರ್ಶನ್​ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬೆನ್ನು ನೋವಿನಿಂದ ಬಳಲ್ತಾ ಇರೋ ದರ್ಶನ್​ಗೆ ಟ್ರೀಟ್​ಮೆಂಟ್ ಶುರುಮಾಡಲಾಗಿದೆ. ಆದ್ರೆ ದರ್ಶನ್​​ನ ಆಸ್ಪತ್ರೆಗೆ ಕರೆತರುವ ಸಮಯದಲ್ಲಿ ದೊಡ್ಡ ಹೈಡ್ರಾಮಾನೇ ನಡೆದಿದೆ.

ಹೈಕೋರ್ಟ್​​ನಲ್ಲಿ ಬೇಲ್ ಅರ್ಜಿ ಮುಂದೂಡಿಗೆ ಆದ ಬೆನ್ನಲ್ಲೇ ದರ್ಶನ್​ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬೆನ್ನು ನೋವಿನಿಂದ ಬಳಲ್ತಾ ಇರೋ ದರ್ಶನ್​ಗೆ ಟ್ರೀಟ್​ಮೆಂಟ್ ಶುರುಮಾಡಲಾಗಿದೆ. ಆದ್ರೆ ದರ್ಶನ್​​ನ ಆಸ್ಪತ್ರೆಗೆ ಕರೆತರುವ ಸಮಯದಲ್ಲಿ ದೊಡ್ಡ ಹೈಡ್ರಾಮಾನೇ ನಡೆದಿದೆ. ಫ್ಯಾನ್ಸ್ ಹುಚ್ಚಾಟ, ಎಳೆದಾಟದಿಂದ ದರ್ಶನ್ ನೋವಿನಿಂದ ಕಿರುಚುವ ಪರಿಸ್ಥಿತಿ ಎದುರಾಗಿದೆ. ಬೆನ್ನು ನೋವಿನಿಂದ ಪರದಾಡ್ತಾ ಇರೋ ದರ್ಶನ್​ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹುಚ್ಚು ಅಭಿಮಾನಿಗಳು ಸೇರಿಕೊಳ್ತಾರೆ ಅನ್ನೋ ಕಾರಣಕ್ಕೇನೆ ತಡರಾತ್ರಿ ದರ್ಶನ್​​ನ ಆಸ್ಪತ್ರೆಗೆ ಕರೆತರಲಾಗಿದೆ. ಆದ್ರೂ ಕೂಡ ದಾಸನ ಅಂದಾಭಿಮಾನಿಗಳ ಪಡೆ ಆಸ್ಪತ್ರೆಯೆದರು ಸೇರಿ ಗಲಾಟೆ ಮಾಡಿದೆ. ಆಸ್ಪತ್ರೆ ಎದುರು ಸೇರಿದ ಫ್ಯಾನ್ಸ್​ನ ಕಂಟ್ರೋಲ್ ಮಾಡೋದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. 

ಜೈ ಡಿ ಬಾಸ್..  ಡಿ ಬಾಸ್ ಅಂತ ಕೂಗ್ತಾ ಇದ್ದ ಅಭಿಮಾನಿಗಳು ದರ್ಶನ್​ನ ಮುಟ್ಟೋದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಯುವಕನೊಬ್ಬ ದರ್ಶನ್​ ಕೈಯನ್ನ ಜೋರಾಗಿ ಎಳೆದಿದ್ದು, ಮೊದಲೇ ಬೆನ್ನು ನೋವಿನಿಂದ ಬಳಲ್ತಾ ಇರೋ ದರ್ಶನ್ ನೋವಿನಿಂದ ಕಿರುಚಿಕೊಂಡಿದ್ದಾರೆ. ಹೌದು ಬೆನ್ನು ಹುರಿಯ ನೋವಿನಿಂದ ಬಳಲ್ತಾ ಇರೋ ದರ್ಶನ್​ಗೆ MRI ಸ್ಕ್ಯಾನ್ ಮಾಡಿರೋ ವೈದ್ಯರು , ಸರ್ಜರಿ ಮಾಡಿಸಿಕೊಳ್ಳಬೇಕು ಅಂತ ಸೂಚನೆ ಕೊಟ್ಟಿದ್ದಾರೆ. ವಿಮ್ಸ್ ನ್ಯೂರೋ ಸರ್ಜನ್ ಡಾ.ವಿಶ್ವನಾಥ್ , ದರ್ಶನ್​ ಪರಿಸ್ಥಿತಿಯನ್ನ ನೋಡಿ ಅತಿ ಶಿಘ್ರದಲ್ಲಿ ಸರ್ಜರಿ ಒಳಗಾಗುವಂತೆ ಸೂಚನೆ ಕೊಟ್ಟಿದ್ದಾರೆ. ಹೈಕೋರ್ಟ್ ಕೂಡ ದರ್ಶನ್ ಆರೋಗ್ಯದ ವರದಿ ನೀಡೋದಕ್ಕೆ ಸೂಚನೆ ಕೊಟ್ಟಿದ್ದು 28ನೇ ತಾರೀಖು ಈ ವರದಿ ಹೈಕೋರ್ಟ್​ಗೆ ಸಲ್ಲಿಕೆ ಆಗಲಿದೆ. ದರ್ಶನ್ ಬೆನ್ನು ನೋವಿನ ಕಾರಣಕ್ಕೆ ಶೀಘ್ರ ಬೇಲ್ ನೀಡುವಂತೆ ಈಗಾಗ್ಲೇ ದರ್ಶನ್ ಪರ ವಕೀಲರು ಕೇಳಿಕೊಂಡಿದ್ದಾರೆ.

ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ದರ್ಶನ್ ಆರೋಗ್ಯದ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. 28ನೇ ತಾರೀಖು ಈ ವರದಿ ಹೈಕೋರ್ಟ್​ಗೆ ಸಲ್ಲಿಕೆ ಆಗಲಿದ್ದು, ಇದನ್ನ ಪರಿಗಣಿಸಿ ಹೈಕೊರ್ಟ್​ ಬೇಲ್ ನೀಡಬಹುದು ಅನ್ನೋ ಅಸೆ ದರ್ಶನ್ ಪಾಳೆಯದಲ್ಲಿದೆ. ಆದ್ರೆ ಒಂದು ವೇಳೆ 28ನೇ ತಾರೀಖಿಗೂ ಹೈಕೋರ್ಟ್​ನಲ್ಲಿ ಬೇಲ್ ಸಿಗದೇ ಹೋದ್ರೆ ದರ್ಶನ್​ ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕಿದೆ. ಯಾಕಂದ್ರೆ ಈಗಲೇ ದರ್ಶನ್ ನಡೆದಾಡೋಕೆ ಕಷ್ಟಪಡ್ತಿರುವಂತಿದೆ. ದರ್ಶನ್ ಮುಖದಲ್ಲಿ ನೋವಿನ ಗೆರೆಗಳು ಕಾಣ್ತಾ ಇವೆ. ವೈದ್ಯರ ಸಲಹೆಯಂತೆ ಶೀಘ್ರದಲ್ಲಿ ಶತ್ರಚಿಕಿತ್ಸೆ ಪಡೆಯದೇ ಹೋದ್ರೆ ದರ್ಶನ್ ಸ್ಥಿತಿ ಮತ್ತಷ್ಟು ಬಿಗಡಾಯಿಸೋದು ಫಿಕ್ಸ್ ಎನ್ನಲಾಗ್ತಾ ಇದೆ. ದರ್ಶನ್​​ ಕಣ್ಣು ಮತ್ತೆ ಹೈಕೋರ್ಟ್​ ನತ್ತ ನೆಟ್ಟಿದೆ. 

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more