ಒಂದು ಕಾಲದ ಆಪ್ತ ಗೆಳೆಯರು ಕಿಚ್ಚ, ದಚ್ಚು, ಮತ್ತೆ ಒಂದಾಗಲು ವೇದಿಕೆ ರೆಡಿಯಾಗಿದ್ಯಾ?

ಒಂದು ಕಾಲದ ಆಪ್ತ ಗೆಳೆಯರು ಕಿಚ್ಚ, ದಚ್ಚು, ಮತ್ತೆ ಒಂದಾಗಲು ವೇದಿಕೆ ರೆಡಿಯಾಗಿದ್ಯಾ?

Published : Dec 28, 2024, 11:22 AM ISTUpdated : Dec 28, 2024, 12:20 PM IST

ದರ್ಶನ್ ಹಾಗು ಸುದೀಪ್ ಸ್ನೇಹ ಈಗ ಸವಿ ಸವಿ ನೆನಪಷ್ಟೆ. ಒಂದೇ ಜೀವ ಎರಡು ದೇಹ ಅನ್ನೋ ಹಾಗಿದ್ದ ಸುದೀಪ್​ ಹಾಗೂ ದರ್ಶನ್ ದೂರಾಗಿ ಏಳೆಂಟು ವರ್ಷಗಳಾಗಿದೆ. ಈ ಸ್ನೇಹ ಗಟ್ಟಿ ಮಾಡಿಕೊಳ್ಳಬೇಕು ಅಂತ ಇಬ್ಬರು ಪ್ರಯತ್ನ ಪಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಚಿತ್ರರಂಗದ ಕೆಲವರಂತು ಇವರಿಬ್ಬರನ್ನ ಒಂದು ಮಾಡೋಕೆ ಶತಪ್ರಯತ್ನ ಪಟ್ಟಿದ್ದಾರೆ... 
 

ರಕ್ತ ಹಂಚಿಕೊಂಡು ಹುಟ್ಟಿದವೇ ದೂರಾಗ್ತಾರೆ. ಇನ್ನು ಸ್ನೇಹಿತರು ದೂರ ಆಗದೇ ಇರ್ತಾರೆ. ಕುಚಿಗುಗಳಾಗಿದ್ದ ನಟ ದರ್ಶನ್ ಕಿಚ್ಚ ಸುದೀಪ್ ಫ್ರೆಂಡ್​ಶಿಪ್​ ಬ್ರೇಕಪ್ ಆಗಿರೋದು ಗೊತ್ತೇ ಇದೆ. ಆದ್ರೆ ಹಳೇ ಸ್ನೇಹಿತರು ಮತ್ತೆ ಯಾವಾಗ ಒಂದಾಗ್ತಾರೆ ಅಂತ ಕಾಯ್ತಿರೋರಿಗೆ ಆ ದಿನ ಬಂದೇ ಬರುತ್ತೆ ಅಂತ ಜ್ಯೋತಿಷಿ ಒಬ್ರು ಟೈಮ್, ಡೇಟ್​, ಮತ್ತು ವರ್ಷವನ್ನ ಫಿಕ್ಸ್​​ ಮಾಡಿದ್ದಾರೆ. ಹಾಗಾದ್ರೆ ಕಿಚ್ಚ ದಚ್ಚು ಒಂದಾಗೋದು ಯಾವ ವರ್ಷ..? ಇಲ್ಲಿದೆ ನೋಡಿ ಜ್ಯೋತಿಷ್ಯ ಶಾಸ್ತ್ರದ ಎಕ್ಸ್​​ಕ್ಲ್ಯೂಸೀವ್ ರಿಪೋರ್ಟ್... 

ದರ್ಶನ್ ಹಾಗು ಸುದೀಪ್ ಸ್ನೇಹ ಈಗ ಸವಿ ಸವಿ ನೆನಪಷ್ಟೆ. ಒಂದೇ ಜೀವ ಎರಡು ದೇಹ ಅನ್ನೋ ಹಾಗಿದ್ದ ಸುದೀಪ್​ ಹಾಗೂ ದರ್ಶನ್ ದೂರಾಗಿ ಏಳೆಂಟು ವರ್ಷಗಳಾಗಿದೆ. ಈ ಸ್ನೇಹ ಗಟ್ಟಿ ಮಾಡಿಕೊಳ್ಳಬೇಕು ಅಂತ ಇಬ್ಬರು ಪ್ರಯತ್ನ ಪಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಚಿತ್ರರಂಗದ ಕೆಲವರಂತು ಇವರಿಬ್ಬರನ್ನ ಒಂದು ಮಾಡೋಕೆ ಶತಪ್ರಯತ್ನ ಪಟ್ಟಿದ್ದಾರೆ... 

ಸ್ನೇಹ ಒಡೆದು ಚೂರು ಮಾಡಿಕೊಂಡಿರೋ ಸುದೀಪ್ - ದರ್ಶನ್​​​ ರನ್ನ ಒಂದು ಮಾಡೋಕೆ ಇದುವರೆಗೂ ಯಾರಿಂದಲೂ ಆಗಿಲ್ಲ. ಆದ್ರೆ ಪ್ರೊಡ್ಯೂಸರ್ ರಾಕ್​ಲೈನ್ ವೆಂಕಟೇಶ್ ಅದಕ್ಕೊಂದು ವೇದಿಕೆ ಮಾಡಿದ್ದಂತು ನಿಜ. ಸುಮಲತಾ ಅಂಬರೀಶ್ ಹುಟ್ಟುಹಬ್ಬದಲ್ಲಿ ಇಬ್ಬರನ್ನು ಮುಖಾಮುಖಿ ಮಾಡಿಸಿದ್ರು ರಾಕ್​ಲೈನ್. ಆದ್ರೆ ಅದು ಕೆಲಸ ಮಾಡಿರಲಿಲ್ಲ. 

ಸುದೀಪ್ ದರ್ಶನ್ ಮಧ್ಯೆ ಸ್ನೇಹ ಎಂದೂ ಸರಿ ಹೋಗಲ್ಲ ಅನ್ನೊ ವರ್ಗ ಒಂದಿದೆ. ಇವರಿಬ್ಬರು ಒಂದಾಗೋಕೆ ಟ್ರೈ ಮಾಡಿದ್ರೂ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದರ್ಶನ್ ಸುತ್ತ ಇರೋ ಒಂದಿಷ್ಟು ಫ್ಯಾನ್ಸ್​ ಅದಕ್ಕೆ ಅವಕಾಶ ಕೊಡಲ್ಲ. ಯಾಕಂದ್ರೆ ಇಬ್ಬರ ಮಧ್ಯೆ ಬೆಂಕಿ ಹಚ್ಚೋದೇ ಅವರ ಕೆಲಸ.

ಯಾರು ಏನೇ ಮಾಡ್ಕೊಳ್ಳಲಿ ಸುದೀಪ್ ದರ್ಶನ್ ಒಂದಾಗೋ ಟೈಮ್ ಬಂದೇ ಬರುತ್ತೆ ಅಂತ ಭವಿಷ್ಯ ಒಂದು ಹೊರ ಬಿದ್ದಿದೆ. ಜ್ಯೋತಿಷಿ ಒಬ್ರು ಈ ಮಾಜಿ ಕುಚಿಕುಗಳು ಒಂದಾಗೋಕೆ ಇನ್ನೊಂದು ವರ್ಷ ಬೇಕು ಎಂದಿದ್ದಾರೆ. ಯೆಸ್, ಜ್ಯೋತಿಷಿ ಪ್ರಶಾಂತ್ ಕಿಣಿ, ಕಿಚ್ಚ ಸುದೀಪ್ ಹಾಗು ದರ್ಶನ್​ ಸ್ನೇಹ 2026ಕ್ಕೆ ಸರಿ ಹೋಗುತ್ತೆ. ಇಬ್ಬರು ಒಂದಾಗುತ್ತಾರೆ ಎಂದಿದ್ದಾರೆ.

ಜ್ಯೋತಿಷಿ ಪ್ರಶಾಂತ್ ಕಿಣಿ ಈ ಹಿಂದೆ ದರ್ಶನ್ ಜೈಲಿನಲ್ಲಿದ್ದಾಗ ಭವಿಷ್ಯ ಹೇಳಿದ್ರು. 2027ಕ್ಕೆ ದರ್ಶನ್ ರಾಜಕೀಯಕ್ಕೆ ಬರುವುದು ಖಚಿತ ಎಂದಿದ್ದಾರೆ. ಈಗ ಫೆಬ್ರವರಿ 2026ಕ್ಕೆ ಕಿಚ್ಚ ದಚ್ಚು ಸ್ನೇಹ ಸರಿ ಹೋಗುತ್ತೆ ಎಂದಿದ್ದಾರೆ. ಈ ವಿಚಾರ ಕೇಳಿ ಇಬ್ಬರ ಅಸಂಖ್ಯಾತ-ಅಗಣಿತ ಅಭಿಮಾನಿಗಳು ಈ ಪವಾಡ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್