ಕಾಟೇರ ಅದ್ದೂರಿ ಕಾರ್ಯಕ್ರಮ: ಮಾಲಾಶ್ರೀ ಮಗಳ ಡಾನ್ಸ್‌ಗೆ ಮಂಡ್ಯ ಮಂದಿ ಫಿದಾ!

ಕಾಟೇರ ಅದ್ದೂರಿ ಕಾರ್ಯಕ್ರಮ: ಮಾಲಾಶ್ರೀ ಮಗಳ ಡಾನ್ಸ್‌ಗೆ ಮಂಡ್ಯ ಮಂದಿ ಫಿದಾ!

Published : Dec 25, 2023, 10:57 AM IST

ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದ ‘ಕಾಟೇರ’
ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಆರಾಧನಾ
ಇದೇ 29ಕ್ಕೆ ರಾಜ್ಯಾದ್ಯಂತ ಕಾಟೇರ ‘ದರ್ಶನ’

ಕಾಟೇರ ಚಿತ್ರದ ರೈತ ಗೀತೆ ರಿಲೀಸ್(raitha song) ಆಗಿದೆ. ಅದೂ ರೈತ ಚಳವಳಿಗಳ ಕ್ರಾಂತಿ ಭೂಮಿ ಮಂಡ್ಯದಲ್ಲಿ. ನಟ ದರ್ಶನ್(Darshan Thoogudeepa) ಈ ಬಾರಿ ಅನ್ನದಾತರ ಗೀತೆ ಮೊಳಗಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮಂಡ್ಯವನ್ನೇ(Mandya) ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವೂ ಇದೆ. ಮಂಡ್ಯ ಜಿಲ್ಲೆ ಪ್ರೊ.ನಂಜುಂಡ ಸ್ವಾಮಿ, ಪುಟ್ಟಣ್ಣಯ್ಯ ಮೊದಲಾದವರ ಹುಟ್ಟೂರು. ಇವತ್ತಿಗೂ ರೈತ ಚಳವಳಿ ಜೀವಂತವಗಿರೋದು ಮಂಡ್ಯದಲ್ಲಿ. ಅಂತಹ ಮಂಡ್ಯದಲ್ಲಿ ಕಾಟೇರ ಚಿತ್ರದ ರೈತ ಗೀತೆ ರಿಲೀಸ್ ಮಾಡೋ ಮೂಲಕ ದಾಖಲೆ ಬರೆಯೋಕೆ ಹೊರಟಿದೆ ಕಾಟೇರ. ಅಲ್ಲದೆ ಮಂಡ್ಯ ಅಂಬರೀಷ್ ಅವರ ತವರೂ ಹೌದು. ಅಂಬರೀಷ್ ನೆನಪಿನೊಂದಿಗೇ ಆರಂಭವಾದ ಕಾರ್ಯಕ್ರಮದ ಹೈಲೈಟ್ ಮಂಡ್ಯದ ಗಂಡು. ಅಂಬಿಯ ನೆನಪಿನೊಂದಿಗೇ ಶುರುವಾಯ್ತು ಕಾಟೇರ ಕಾರ್ಯಕ್ರಮ. ಅದು ಮುಗಿಯುತ್ತಿದ್ದಂತೆಯೇ ಪುಟ್ಟ ಮಕ್ಕಳ ಯೋಗ ನೆರೆದಿದ್ದವರೆಲ್ಲರ ಮನರಂಜಿಸ್ತು. ಇದು ರೈತ ಮಕ್ಕಳು ನಡೆಸಿದ ಯೋಗ ಕಾರ್ಯಕ್ರಮ. ಅದು ಮುಗಿದ ಕೂಡಲೇ ಬಿಡುಗಡೆಯಾಗಿದ್ದು ರೈತರ ಗೀತೆ. ಬೆವರ ಹನಿಲಿ ಬೆಳೆದ ಬಂಡೆಗಲ್ಲು ಇವನು ನಡೆವ ದಾರಿ ಮೈಲಿಗಲ್ಲು ಇವನ ಎದುರು ಯಾರು ಹೋಗಬ್ಯಾಡಿ ಹಿಂದೆಐತೆ ಸೈನ್ಯವೂ ಈ ರೈತ ಗೀತೆ ಬರೆದಿರೋದು ಪುನೀತ್ ಆರ್ಯ. ಇದರಲ್ಲಿ ಹೈಲೈಟ್ ಆಗಿರೋದು ರೈತ. ರೈತನ ಸ್ವಾಭಿಮಾನ. ರೈತನ ಸಂಕಟ. ರೈತನ ಅಭಿಮಾನ. ಇದು ಕಾಟೇರ ಥೀಮ್ ಸಾಂಗ್ . ಕಾಟೇರ ರೈತ ಗೀತೆಯನ್ನು ಬಿಡುಗಡೆ ಮಾಡಿದ ಮೇಲೆ ದರ್ಶನ್ ಮತ್ತು ತಮ್ಮ ನಡುವಿನ ಸಂಬಂಧವನ್ನು ಹೇಳಿಕೊಂಡವರು ಸಂಸದೆಯೂ ಆಗಿರುವ ಸುಮಲತಾ. ಕಾಟೇರ ಚಿತ್ರಕ್ಕೆ ಪ್ರೊಡ್ಯೂಸರ್ ರಾಕ್ ಲೈನ್ ವೆಂಕಟೇಶ್. ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ. ಹರಿಕೃಷ್ಣ ಅವರಿಗೆ ಇದು ದರ್ಶನ್ ಜೊತೆ 29ನೇ ಸಿನಿಮಾ ಅನ್ನೋದೇ ಹೈಲೈಟ್.

ಇದನ್ನೂ ವೀಕ್ಷಿಸಿ:  ಹಮಾಸ್ ಉಗ್ರರ ನೆತ್ತರಿನ ಆಟಕ್ಕೆ ವಿಶ್ವವೇ ಗಡಗಡ..! 2023 ಅಂತ್ಯವಾಗುತ್ತಿದ್ದರೂ ತಣ್ಣಗಾಗಿಲ್ಲ ಯುದ್ಧಾಗ್ನಿ..!

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
Read more