ಕಾಟೇರ ಅದ್ದೂರಿ ಕಾರ್ಯಕ್ರಮ: ಮಾಲಾಶ್ರೀ ಮಗಳ ಡಾನ್ಸ್‌ಗೆ ಮಂಡ್ಯ ಮಂದಿ ಫಿದಾ!

ಕಾಟೇರ ಅದ್ದೂರಿ ಕಾರ್ಯಕ್ರಮ: ಮಾಲಾಶ್ರೀ ಮಗಳ ಡಾನ್ಸ್‌ಗೆ ಮಂಡ್ಯ ಮಂದಿ ಫಿದಾ!

Published : Dec 25, 2023, 10:57 AM IST

ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದ ‘ಕಾಟೇರ’
ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಆರಾಧನಾ
ಇದೇ 29ಕ್ಕೆ ರಾಜ್ಯಾದ್ಯಂತ ಕಾಟೇರ ‘ದರ್ಶನ’

ಕಾಟೇರ ಚಿತ್ರದ ರೈತ ಗೀತೆ ರಿಲೀಸ್(raitha song) ಆಗಿದೆ. ಅದೂ ರೈತ ಚಳವಳಿಗಳ ಕ್ರಾಂತಿ ಭೂಮಿ ಮಂಡ್ಯದಲ್ಲಿ. ನಟ ದರ್ಶನ್(Darshan Thoogudeepa) ಈ ಬಾರಿ ಅನ್ನದಾತರ ಗೀತೆ ಮೊಳಗಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮಂಡ್ಯವನ್ನೇ(Mandya) ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವೂ ಇದೆ. ಮಂಡ್ಯ ಜಿಲ್ಲೆ ಪ್ರೊ.ನಂಜುಂಡ ಸ್ವಾಮಿ, ಪುಟ್ಟಣ್ಣಯ್ಯ ಮೊದಲಾದವರ ಹುಟ್ಟೂರು. ಇವತ್ತಿಗೂ ರೈತ ಚಳವಳಿ ಜೀವಂತವಗಿರೋದು ಮಂಡ್ಯದಲ್ಲಿ. ಅಂತಹ ಮಂಡ್ಯದಲ್ಲಿ ಕಾಟೇರ ಚಿತ್ರದ ರೈತ ಗೀತೆ ರಿಲೀಸ್ ಮಾಡೋ ಮೂಲಕ ದಾಖಲೆ ಬರೆಯೋಕೆ ಹೊರಟಿದೆ ಕಾಟೇರ. ಅಲ್ಲದೆ ಮಂಡ್ಯ ಅಂಬರೀಷ್ ಅವರ ತವರೂ ಹೌದು. ಅಂಬರೀಷ್ ನೆನಪಿನೊಂದಿಗೇ ಆರಂಭವಾದ ಕಾರ್ಯಕ್ರಮದ ಹೈಲೈಟ್ ಮಂಡ್ಯದ ಗಂಡು. ಅಂಬಿಯ ನೆನಪಿನೊಂದಿಗೇ ಶುರುವಾಯ್ತು ಕಾಟೇರ ಕಾರ್ಯಕ್ರಮ. ಅದು ಮುಗಿಯುತ್ತಿದ್ದಂತೆಯೇ ಪುಟ್ಟ ಮಕ್ಕಳ ಯೋಗ ನೆರೆದಿದ್ದವರೆಲ್ಲರ ಮನರಂಜಿಸ್ತು. ಇದು ರೈತ ಮಕ್ಕಳು ನಡೆಸಿದ ಯೋಗ ಕಾರ್ಯಕ್ರಮ. ಅದು ಮುಗಿದ ಕೂಡಲೇ ಬಿಡುಗಡೆಯಾಗಿದ್ದು ರೈತರ ಗೀತೆ. ಬೆವರ ಹನಿಲಿ ಬೆಳೆದ ಬಂಡೆಗಲ್ಲು ಇವನು ನಡೆವ ದಾರಿ ಮೈಲಿಗಲ್ಲು ಇವನ ಎದುರು ಯಾರು ಹೋಗಬ್ಯಾಡಿ ಹಿಂದೆಐತೆ ಸೈನ್ಯವೂ ಈ ರೈತ ಗೀತೆ ಬರೆದಿರೋದು ಪುನೀತ್ ಆರ್ಯ. ಇದರಲ್ಲಿ ಹೈಲೈಟ್ ಆಗಿರೋದು ರೈತ. ರೈತನ ಸ್ವಾಭಿಮಾನ. ರೈತನ ಸಂಕಟ. ರೈತನ ಅಭಿಮಾನ. ಇದು ಕಾಟೇರ ಥೀಮ್ ಸಾಂಗ್ . ಕಾಟೇರ ರೈತ ಗೀತೆಯನ್ನು ಬಿಡುಗಡೆ ಮಾಡಿದ ಮೇಲೆ ದರ್ಶನ್ ಮತ್ತು ತಮ್ಮ ನಡುವಿನ ಸಂಬಂಧವನ್ನು ಹೇಳಿಕೊಂಡವರು ಸಂಸದೆಯೂ ಆಗಿರುವ ಸುಮಲತಾ. ಕಾಟೇರ ಚಿತ್ರಕ್ಕೆ ಪ್ರೊಡ್ಯೂಸರ್ ರಾಕ್ ಲೈನ್ ವೆಂಕಟೇಶ್. ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ. ಹರಿಕೃಷ್ಣ ಅವರಿಗೆ ಇದು ದರ್ಶನ್ ಜೊತೆ 29ನೇ ಸಿನಿಮಾ ಅನ್ನೋದೇ ಹೈಲೈಟ್.

ಇದನ್ನೂ ವೀಕ್ಷಿಸಿ:  ಹಮಾಸ್ ಉಗ್ರರ ನೆತ್ತರಿನ ಆಟಕ್ಕೆ ವಿಶ್ವವೇ ಗಡಗಡ..! 2023 ಅಂತ್ಯವಾಗುತ್ತಿದ್ದರೂ ತಣ್ಣಗಾಗಿಲ್ಲ ಯುದ್ಧಾಗ್ನಿ..!

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more