ಕಾಟೇರ ಅದ್ದೂರಿ ಕಾರ್ಯಕ್ರಮ: ಮಾಲಾಶ್ರೀ ಮಗಳ ಡಾನ್ಸ್‌ಗೆ ಮಂಡ್ಯ ಮಂದಿ ಫಿದಾ!

ಕಾಟೇರ ಅದ್ದೂರಿ ಕಾರ್ಯಕ್ರಮ: ಮಾಲಾಶ್ರೀ ಮಗಳ ಡಾನ್ಸ್‌ಗೆ ಮಂಡ್ಯ ಮಂದಿ ಫಿದಾ!

Published : Dec 25, 2023, 10:57 AM IST

ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದ ‘ಕಾಟೇರ’
ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ ಆರಾಧನಾ
ಇದೇ 29ಕ್ಕೆ ರಾಜ್ಯಾದ್ಯಂತ ಕಾಟೇರ ‘ದರ್ಶನ’

ಕಾಟೇರ ಚಿತ್ರದ ರೈತ ಗೀತೆ ರಿಲೀಸ್(raitha song) ಆಗಿದೆ. ಅದೂ ರೈತ ಚಳವಳಿಗಳ ಕ್ರಾಂತಿ ಭೂಮಿ ಮಂಡ್ಯದಲ್ಲಿ. ನಟ ದರ್ಶನ್(Darshan Thoogudeepa) ಈ ಬಾರಿ ಅನ್ನದಾತರ ಗೀತೆ ಮೊಳಗಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮಂಡ್ಯವನ್ನೇ(Mandya) ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವೂ ಇದೆ. ಮಂಡ್ಯ ಜಿಲ್ಲೆ ಪ್ರೊ.ನಂಜುಂಡ ಸ್ವಾಮಿ, ಪುಟ್ಟಣ್ಣಯ್ಯ ಮೊದಲಾದವರ ಹುಟ್ಟೂರು. ಇವತ್ತಿಗೂ ರೈತ ಚಳವಳಿ ಜೀವಂತವಗಿರೋದು ಮಂಡ್ಯದಲ್ಲಿ. ಅಂತಹ ಮಂಡ್ಯದಲ್ಲಿ ಕಾಟೇರ ಚಿತ್ರದ ರೈತ ಗೀತೆ ರಿಲೀಸ್ ಮಾಡೋ ಮೂಲಕ ದಾಖಲೆ ಬರೆಯೋಕೆ ಹೊರಟಿದೆ ಕಾಟೇರ. ಅಲ್ಲದೆ ಮಂಡ್ಯ ಅಂಬರೀಷ್ ಅವರ ತವರೂ ಹೌದು. ಅಂಬರೀಷ್ ನೆನಪಿನೊಂದಿಗೇ ಆರಂಭವಾದ ಕಾರ್ಯಕ್ರಮದ ಹೈಲೈಟ್ ಮಂಡ್ಯದ ಗಂಡು. ಅಂಬಿಯ ನೆನಪಿನೊಂದಿಗೇ ಶುರುವಾಯ್ತು ಕಾಟೇರ ಕಾರ್ಯಕ್ರಮ. ಅದು ಮುಗಿಯುತ್ತಿದ್ದಂತೆಯೇ ಪುಟ್ಟ ಮಕ್ಕಳ ಯೋಗ ನೆರೆದಿದ್ದವರೆಲ್ಲರ ಮನರಂಜಿಸ್ತು. ಇದು ರೈತ ಮಕ್ಕಳು ನಡೆಸಿದ ಯೋಗ ಕಾರ್ಯಕ್ರಮ. ಅದು ಮುಗಿದ ಕೂಡಲೇ ಬಿಡುಗಡೆಯಾಗಿದ್ದು ರೈತರ ಗೀತೆ. ಬೆವರ ಹನಿಲಿ ಬೆಳೆದ ಬಂಡೆಗಲ್ಲು ಇವನು ನಡೆವ ದಾರಿ ಮೈಲಿಗಲ್ಲು ಇವನ ಎದುರು ಯಾರು ಹೋಗಬ್ಯಾಡಿ ಹಿಂದೆಐತೆ ಸೈನ್ಯವೂ ಈ ರೈತ ಗೀತೆ ಬರೆದಿರೋದು ಪುನೀತ್ ಆರ್ಯ. ಇದರಲ್ಲಿ ಹೈಲೈಟ್ ಆಗಿರೋದು ರೈತ. ರೈತನ ಸ್ವಾಭಿಮಾನ. ರೈತನ ಸಂಕಟ. ರೈತನ ಅಭಿಮಾನ. ಇದು ಕಾಟೇರ ಥೀಮ್ ಸಾಂಗ್ . ಕಾಟೇರ ರೈತ ಗೀತೆಯನ್ನು ಬಿಡುಗಡೆ ಮಾಡಿದ ಮೇಲೆ ದರ್ಶನ್ ಮತ್ತು ತಮ್ಮ ನಡುವಿನ ಸಂಬಂಧವನ್ನು ಹೇಳಿಕೊಂಡವರು ಸಂಸದೆಯೂ ಆಗಿರುವ ಸುಮಲತಾ. ಕಾಟೇರ ಚಿತ್ರಕ್ಕೆ ಪ್ರೊಡ್ಯೂಸರ್ ರಾಕ್ ಲೈನ್ ವೆಂಕಟೇಶ್. ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ. ಹರಿಕೃಷ್ಣ ಅವರಿಗೆ ಇದು ದರ್ಶನ್ ಜೊತೆ 29ನೇ ಸಿನಿಮಾ ಅನ್ನೋದೇ ಹೈಲೈಟ್.

ಇದನ್ನೂ ವೀಕ್ಷಿಸಿ:  ಹಮಾಸ್ ಉಗ್ರರ ನೆತ್ತರಿನ ಆಟಕ್ಕೆ ವಿಶ್ವವೇ ಗಡಗಡ..! 2023 ಅಂತ್ಯವಾಗುತ್ತಿದ್ದರೂ ತಣ್ಣಗಾಗಿಲ್ಲ ಯುದ್ಧಾಗ್ನಿ..!

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more