ಭೀಮ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ಕರ್ನಾಟಕ ರಿಲೀಸ್: ದುನಿಯಾದಲ್ಲಿ ವಿಜಯ್ ದರ್ಬಾರ್!

ಭೀಮ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ಕರ್ನಾಟಕ ರಿಲೀಸ್: ದುನಿಯಾದಲ್ಲಿ ವಿಜಯ್ ದರ್ಬಾರ್!

Published : Aug 09, 2024, 07:06 PM IST

ಬೆಂಗಳೂರು ಅಂತ ಊರಲ್ಲಿಯೇ ತೆಲುಗು, ತಮಿಳು, ಮಲೆಯಾಳಂ ಭಾಷೆ ಮಾತನಾಡೋ ಜನ ಸಿಗುತ್ತಾರೆ. ಹೀಗಿದ್ದ ಮೇಲೆ ಎಲ್ಲಾ ಭಾಷಿಗರನ್ನೂ ಭೀಮ ನೋಡೋಕೆ ಸೆಳೆಯೋ ಕೆಲಸವನ್ನ ನಟ ಕಮ್ ನಿರ್ದೇಶಕ ದುನಿಯಾ ವಿಜಯ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಸದಾ ಚಾಲ್ತಿಯಲ್ಲಿರೋ ಒಂದು ಮಾತ್ ಇದೆ. ಇದನ್ನ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರವೇ ಹುಟ್ಟುಹಾಕಿದ್ದು. ಅದು ಪ್ಯಾನ್ ಇಂಡಿಯಾ ಸಿನಿಮಾ ಅನ್ನೋ ಮಾತು. ಎಲ್ಲರೂ ಪ್ಯಾನ್ ಇಂಡಿಯಾ ಅಂದ್ರೆ ಈಗಾಗಲೇ ರಾಜ್ಯಾದ್ಯಂತ ರಿಲೀಸ್ ಆಗಿರೋ ಭೀಮ ಸಿನಿಮಾ ಮಾತ್ರ ಪ್ಯಾನ್ ಕರ್ನಾಟಕ. ಅದ್ಹೇಗೆ ಸಾಧ್ಯ..? ಪ್ಯಾನ್ ಇಂಡಿಯಾ ಸರಿಯಾಗಿದೆ. ಪ್ಯಾನ್ ವರ್ಲ್ಡ್ ಓಕೆ ಬಿಡಿ. ಆದರೆ, ಪ್ಯಾನ್ ಕರ್ನಾಟಕ ಹೇಗೆ ಸಾಧ್ಯ..? ಈ ಪ್ರಶ್ನೆಗೆ ದುನಿಯಾ ವಿಜಯ್ ಉತ್ತರ ಕೊಟ್ಟಿದ್ದಾರೆ. ಸಲಗ ವಿಜಯ್​​ ಭೀಮನಾಗಿ ಅಬ್ಬರಿಸೋಕೆ ಕೌಂಟ್​ ಡೌನ್ ಸ್ಟಾರ್ಟ್ ಆಗಿದೆ. ಇಂದಿನಿಂದ ಭೀಮ ಸಿನಿಮಾ ವಿಶಾಲ ಕರ್ನಾಟಕಕ್ಕೆ ಹಂಚಿಕೆಯಾಗಿದೆ. ಈ ಭೀಮ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ಕರ್ನಾಟಕ ಅಂತ ಸಲಗ ವಿಜಯ್ ಸಾರಿದ್ದಾರೆ. 

ಕರ್ನಾಟಕ ಎಲ್ಲಾ ಭಾಷಿಗರ ಗೂಡು. ತುಳು, ಕೊಡವ, ಲಂಬಾಣಿ, ಆದಿ ಕನ್ನಡ ಭಾಷೆಯ ಜನರೂ ಇದ್ದಾರೆ. ಬೆಂಗಳೂರು ಅಂತ ಊರಲ್ಲಿಯೇ ತೆಲುಗು, ತಮಿಳು, ಮಲೆಯಾಳಂ ಭಾಷೆ ಮಾತನಾಡೋ ಜನ ಸಿಗುತ್ತಾರೆ. ಹೀಗಿದ್ದ ಮೇಲೆ ಎಲ್ಲಾ ಭಾಷಿಗರನ್ನೂ ಭೀಮ ನೋಡೋಕೆ ಸೆಳೆಯೋ ಕೆಲಸವನ್ನ ನಟ ಕಮ್ ನಿರ್ದೇಶಕ ದುನಿಯಾ ವಿಜಯ್ ಮಾಡಿದ್ದಾರೆ. ಎಲ್ಲಾ ಭಾಷಿಗರಿಂದ ಭೀಮನ ಬಗ್ಗೆ ವೀಡಿಯೋ ಮಾಡಿ ಹರಿ ಬಿಟ್ಟಿದ್ದಾರೆ ವಿಜಯ್ ಟೀಂ. ಕಳೆದ ಆರು ತಿಂಗಳಿಂದ ಸ್ಯಾಂಡಲ್​ವುಡ್ ಚಿತ್ರಮಂದಿರಗಳು ಬಾಗಿಲು ಹಾಕಿದ್ವು. ಆದ್ರೆ ಭೀಮ ಬಂದಿದ್ದೇ ತಡ ಡೋರ್​ ಕ್ಲೋಸ್ ಆಗಿದ್ದ ಚಿತ್ರಮಂದಿರಗಳೆಲ್ಲಾ ಮತ್ತೆ ತೆರೆದಿವೆ. ಕರ್ನಾಟಕದಾದ್ಯಂತ ಭೀಮ ಸಿನಿಮಾ 350 ಕ್ಕು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಕೃಷ್ಣ ಸಾರ್ಥಕ್ ನಿರ್ಮಾಣದ ಭೀಮ ಬೆಂಗಳೂರು ಡ್ರಗ್ ಮಾಫಿಯಾ ಸುತ್ತ ಕತೆಯಿದೆ.

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Read more