ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ದೊಡ್ಡ ಚಾಲೇಂಜ್ ಅಂದ್ರೆ ಜೈಲಿನಲ್ಲಿ ಜೀವನ ಮಾಡೋದು.. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದಚ್ಚು ಎರಡನೇ ಭಾರಿ ಜೈಲು ಸೇರಿ ಇಂದಿಗೆ 24 ದಿನ ಆಯ್ತು. ಆ ಕಡೆ ದಾಸ ಜೈಲು ವಾಸದ ಚಿತ್ರ ಹಿಂಸೆ ಅನುಭವಿಸ್ತಾ ಇದ್ರೆ, ಈ ಕಡೆ ಫ್ಯಾನ್ಸ್ ಸೆಲೆಬ್ರೇಷನ್ನಲ್ಲಿ ತೊಡಗಿದ್ದಾರೆ.
ಕೋಪದ ಕೈಗೆ ಬುದ್ಧಿ ಕೊಟ್ಟರೆ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ತಾಜಾ ಉದಹಾರಣೆ ನಟ ದರ್ಶನ್.. ಗೆಳತಿಗೆ ಅಶ್ಲೀಲ ಮೆಸೆಜ್ ಮಾಡಿದ ಅನ್ನೋ ಕಾರಣಕ್ಕೆ ರೇಣುಕಾಸ್ವಾಮಿ ಕಲೆಯಲ್ಲಿ ದರ್ಶನ್ ಭಾಗಿ ಆದ್ರು ಅನ್ನೋ ಆರೋಪ ದರ್ಶನ್ ಮೇಲೆ ಬಂದಿದೆ. ದರ್ಶನ್ ಈ ಪ್ರಕರಣದಲ್ಲಿ ಎರಡನೇ ಭಾರಿ ಜೈಲು ಸೇರಿದ್ದಾಗಿದೆ. ಈ ಭಾರಿ ಜೈಲಿನಲ್ಲಿರೋ ದಾಸನಿಗೆ ಸಂಕಷ್ಟಗಳ ಸರಮಾಲೆಯೇ ಇದೆ. ಕೂರಲು ಮಲಗಲು ಆಗದೇ ನಿದ್ದೆಯೂ ಇಲ್ಲದೆ ದಾಸ ಜೈಲಿನಲ್ಲಿ ದಿನ ಎಣಿಸುತ್ತಿದ್ದಾರೆ. ಆದ್ರೆ ಆ ಕಡೆ ಫ್ಯಾನ್ಸ್ ಮಾತ್ರ ಫುಲ್ ಸೆಲೆಬ್ರೇಷಬನ್ ಮೂಡ್ನಲ್ಲಿದ್ದಾರೆ.