ತಮ್ಮ ಪಾತ್ರಕ್ಕೆ ನ್ಯಾಯ ತುಂಬುವಂತೆ ಕೆಲಸ ಮಾಡುವಂತಹ ನಟರಾಗಿದ್ದರು. ಹೀಗಾಗಿ ಅವರೊಂದಿಗೆ ನಾಲ್ಕು ಸಿನೆಮಾಗಳನ್ನು ಮಾಡಲು ಸಾಧ್ಯವಾಗಿದ್ದು. ಅವರನ್ನು ಕಳೆದುಕೊಂಡಿದ್ದು ನಿಜಕ್ಕೂ ಆಘಾತ ತಂದಿದೆ ಎಂದಿದ್ದಾರೆ ಆಟಗಾರರ ಸಿನಿಮಾ ನಿರ್ದೇಶಕ ಚೈತನ್ಯ.
ಬೆಂಗಳೂರು(ಜೂ.08): ಚಿರಂಜೀವಿ ಸರ್ಜಾ ತುಂಬಾ ಸ್ನೇಹಜೀವಿಯಾಗಿದ್ದರು. ಅವರು ವೃತ್ತಿಪರ ಹಾಗೂ ಕಠಿಣ ಶ್ರಮ ಪಡುವಂತಹ ನಟರಾಗಿದ್ದರು ಎಂದು ಆಟಗಾರ ಸಿನೆಮಾ ನಿರ್ದೇಶಕ ಚೈತನ್ಯ ತಮ್ಮ ಹಾಗೂ ಚಿರು ನಡುವಿನ ಒಡನಾಟವನ್ನು ಸುವರ್ಣ ನ್ಯೂಸ್ನೊಂದಿಗೆ ಹಂಚಿಕೊಂಡಿದ್ದಾರೆ.
ತಮ್ಮ ಪಾತ್ರಕ್ಕೆ ನ್ಯಾಯ ತುಂಬುವಂತೆ ಕೆಲಸ ಮಾಡುವಂತಹ ನಟರಾಗಿದ್ದರು. ಹೀಗಾಗಿ ಅವರೊಂದಿಗೆ ನಾಲ್ಕು ಸಿನೆಮಾಗಳನ್ನು ಮಾಡಲು ಸಾಧ್ಯವಾಗಿದ್ದು. ಅವರನ್ನು ಕಳೆದುಕೊಂಡಿದ್ದು ನಿಜಕ್ಕೂ ಆಘಾತ ತಂದಿದೆ.
ಅವರು ಯಾವಾಗಲೂ ಜಾಲಿಯಾಗಿರುತ್ತಿದ್ದರು. ಮತ್ತೆ ತಮ್ಮ ಸುತ್ತಲು ಇರುವವರಿಗೆ Positiveness ತುಂಬುತ್ತಿದ್ದಂತಹ ನಟರಾಗಿದ್ದರು. ತಾವು ಖುಷಿಯಾಗಿರುವುದು ಮಾತ್ರವಲ್ಲ, ಇತರರು ಖುಷಿಯಾಗಿರುವಂತೆ ಮಾಡುತ್ತಿದ್ದರು ಎಂದು ನಟ ಚೈತನ್ಯ ಹೇಳಿದ್ದಾರೆ.
ಹೆಚ್ಚಿನ ವಿಡಿಯೋಗಳನ್ನು ನೋಡಲು ಕ್ಲಿಕ್ಕಿಸಿ Chiranjeevi Sarja