ಸುದೀಪ್‌ಗೆ ಕನ್ನಡದಲ್ಲೇ ಪತ್ರ ಬರೆದು ಸಾಂತ್ವನ ಹೇಳಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್!

Oct 21, 2024, 2:53 PM IST

ಕಿಚ್ಚ ಸುದೀಪ್​ ಬರೀ ಕನ್ನಡದಷ್ಟೇ ಅಲ್ಲ ಇಡೀ ಭಾರತೀಯ ಸಿನಿರಂಗದಲ್ಲಿ ಚಿರಪರಿಚಿತ. ಅಂತೆಯೇ ತಾಯಿಯನ್ನ ಕಳೆದುಕೊಂಡ ಸುದೀಪ್​ಗೆ ಬೇರೆ ಬೇರೆ ಉದ್ಯಮದ ಖ್ಯಾತ ನಟರಿಂದ ಸಾಂತ್ವನ ಹರಿದುಬರ್ತಾ ಇದೆ. ಖ್ಯಾತ ನಟ ಹಾಗೂ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಸುದೀಪ್​ಗೆ ಸಾಂತ್ವನ ಹೇಳಿದ್ದು, ಕನ್ನಡದಲ್ಲೇ ಪತ್ರ ಬರೆದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ನಟನೆಯ ಮೇಲೆ ತಾಯಿಯ ಪ್ರಭಾವ ಮತ್ತು ಪ್ರೋತ್ಸಾಹವಿದೆ ಅಂತ  ಸುದೀಪ್ ಹೇಳಿದ್ದ ಮಾತನ್ನ ನೆನಪಿಸಿಕೊಂಡಿದ್ದಾರೆ.