ತುಮಕೂರು ರೀಲ್ಸ್ ರಾಣಿಯ ದುರಂತ ಅಂತ್ಯಕ್ಕೆ ಕಾರಣವಾದನೇ ಸ್ಟ್ರೀಟ್ ಫೋಟೋ ಗ್ರಾಫರ್!

ತುಮಕೂರು ರೀಲ್ಸ್ ರಾಣಿಯ ದುರಂತ ಅಂತ್ಯಕ್ಕೆ ಕಾರಣವಾದನೇ ಸ್ಟ್ರೀಟ್ ಫೋಟೋ ಗ್ರಾಫರ್!

Published : Jun 24, 2025, 06:04 PM ISTUpdated : Jun 24, 2025, 06:10 PM IST

ತುಮಕೂರಿನಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್‌ನಿಂದ ಆರಂಭವಾದ ಪ್ರೇಮಿಗಳ ಜಗಳ ಯುವತಿಯ ಆತ್ಮಹತ್ಯೆಯಲ್ಲಿ ಅಂತ್ಯಗೊಂಡಿದೆ. ಚೈತನ್ಯ ಎಂಬ ಪದವಿ ವಿದ್ಯಾರ್ಥಿನಿ, ಪ್ರೇಮಿ ವಿಜಯ್‌ನೊಂದಿಗಿನ ಜಗಳದ ಬಳಿಕ ಸಾವಿಗೆ ಶರಣಾಗಿದ್ದಾಳೆ.

ತುಮಕೂರು (ಜೂ. 24): ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ರೀಲ್ಸ್ ಒಂದರಿಂದ ಪ್ರೇಮಿಗಳ ನಡುವೆ ನಡೆದ ಜಗಳ, ಕೊನೆಗೆ ಯುವತಿಯ ದುರಂತ ಮರಣದಲ್ಲಿ ಅಂತ್ಯಗೊಂಡಿದೆ. ಆದರೆ, ಈ ಇಬ್ಬರ ಜಗಳ ಹಾಗೂ ಸಾವಿಗೆ ಸ್ಟ್ರೀಟ್ ಫೋಟೋಗ್ರಾಫರ್ ಕಾರಣವಾದನೇ ಎಂಬ ಅನುಮಾನ ದಟ್ಟವಾಗುತ್ತಿದೆ.

ಮೃತಳನ್ನು ಚೈತನ್ಯ (22) ಎಂದು ಗುರುತಿಸಲಾಗಿದೆ. ಈಕೆ ತುಮಕೂರು ಗ್ರಾಮಾಂತರದ ಹೊಸಹಳ್ಳಿಯ ನಿವಾಸಿಯಾಗಿದ್ದು, ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಜೊತೆಗೆ ಫ್ರೀಲಾನ್ಸ್ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಳು. ಚೈತನ್ಯ ಕಳೆದ ಕೆಲ ವರ್ಷಗಳಿಂದ ಪಕ್ಕದ ಊರಿನ ವಿಜಯ್ ಕುಮಾರ್ ಎಂಬ ಕಾರು ಚಾಲಕನೊಂದಿಗೆ ಪ್ರೀತಿಯಲ್ಲಿ ಇದ್ದಳು. ಈ ಸಂಬಂಧ ಮನೆಮಂದಿಗೆ ಗೊತ್ತಾಗದಂತೆ ಮುಂದುವರೆದಿತ್ತು. ಆದರೆ ವಿಷಯ ತಿಳಿದ ಚೈತನ್ಯಳ ಮಾವ ಆಕೆಗೆ ಎಚ್ಚರಿಕೆ ನೀಡಿ, ಪ್ರೇಮ ಸಂಬಂಧ ಕೊನೆಗೊಳಿಸಬೇಕೆಂದು ಸಲಹೆ ನೀಡಿದ್ದರು.

ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬ ಮೇಡಂ ನೀವು ಚೆನ್ನಾಗಿ ಕಾಣಿಸ್ತೀರಿ, ನಿಮ್ಮ ಫೋಟೋ ತೆಗೆಯಬಹುದೇ ಎಂದು ಕೇಳಿ ಬರೋಬ್ಬರಿ 25 ಫೋಟೋಗಳನ್ನು ತನ್ನ ಕ್ಯಾಮೆರಾದಲ್ಲಿ ತೆಗೆದಿದ್ದಾನೆ. ಈ ಫೋಟೋಗಳನ್ನು ಹಾಗೂ ವಿಡಿಯೋವನ್ನು ಚೈತನ್ಯ ಕೂಡ ಇನ್‌ಸ್ಟಾಗ್ರಾಮ್‌ಗೆ ಹಾಕಿಕೊಂಡಿದ್ದಾಳೆ. ಆದರೆ, ಇದನ್ನು ನೋಡಿ ಸಹಿಸದ ಪ್ರೇಮಿ ವಿಜಯ್ ಪ್ರಶ್ನಿಸಲು ಗೆಳತಿಯ ಮನೆಗೆ ಬಂದು ಜಗಳ ಆರಂಭಿಸಿದ್ದನು. ಈ ವೇಳೆ ಚೈತನ್ಯ ತಾಯಿ ಸೌಭಾಗ್ಯಮ್ಮ ಮನೆ ಒಳಗೇ ಇದ್ದರು. ಅವರು ಇದ್ದ ಕೋಣೆಯ ಬಾಗಿಲು ಲಾಕ್ ಆಗಿದ್ದರಿಂದ ಚೈತನ್ಯ ಹಾಗೂ ವಿಜಯ್ ಮನೆಯ ಕಿಟಕಿಯ ಬಳಿ ಜಗಳ ಮಾಡಿಕೊಂಡಿದ್ದರು. ವಿಜಯ್ ಮನೆಗೆ ಬಂದು ಹೋದ ವಿಚಾರವೂ ಸೌಭಾಗ್ಯಳ ತಾಯಿಗೆ ಗೊತ್ತಿರಲಿಲ್ಲ.

ತುಮಕೂರು ಸುಂದರಿಗೆ ಕಂಟಕವಾದ ರೀಲ್ಸ್; ಪ್ರೇಮಿಯ ಒಂದು ಮಾತಿಗೆ ಪ್ರಾಣವನ್ನೇ ಬಿಟ್ಟಳು!
 

ತುಮಕೂರು ಸುಂದರಿಗೆ ಕಂಟಕವಾದ ರೀಲ್ಸ್; ಪ್ರೇಮಿಯ ಒಂದು ಮಾತಿಗೆ ಪ್ರಾಣವನ್ನೇ ಬಿಟ್ಟಳು!

ನಾನು ಸಾಯ್ತೀನಿ ಎಂಬ ಅಂತಿಮ ಕರೆ
ಜಗಳ ನಂತರ ವಿಜಯ್ ಸ್ಥಳದಿಂದ ಹೊರಟಿದ್ದನು. ಕೆಲವೇ ಕ್ಷಣಗಳಲ್ಲಿ ಚೈತನ್ಯ ವಿಜಯ್‌ಗೆ ಕರೆ ಮಾಡಿ 'ನಾನು ಸಾಯ್ತೀನಿ' ಎಂದು ತಿಳಿಸಿದ್ದಾಳೆ. ತಕ್ಷಣ ವಿಜಯ್ ಈ ವಿಷಯವನ್ನು ಆಕೆಯ ಸಂಬಂಧಿಕರಿಗೆ ತಿಳಿಸಿದ್ದಾರೆ. ಸಂಬಂಧಿಕರು ಧಾವಿಸಿದಾಗ, ಚೈತನ್ಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಳು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಮೃತಪಟ್ಟಿದ್ದಾಳೆ. ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು, ಚೈತನ್ಯ ಸಾಯಲು ವಿಜಯ್ ಕುಮಾರ್ ನೇರ ಕಾರಣ ಎಂದು ಆರೋಪಿಸಿದ್ದಾರೆ. ಪೊಲೀಸರು ವಿಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
06:10ದರ್ಶನ್ 'ಬುಲ್‌ ಬುಲ್‌' ಸುದೀಪ್ ಜೊತೆ ಮಾತಾಡಕಿಲ್ವಾ? ದಚ್ಚು ಶಿಷ್ಯೆ 'ಲೇಡಿ ಬಾಸ್' ಕಿಚ್ಚನಿಂದ ದೂರ?
25:10ತವರು ಮನೆಗೆ ಹೋಗ್ತೀನೆಂದ ಹೆಂಡತಿಯನ್ನು ಶಿವನಪಾದ ಸೇರಿಸಿದ ಗಂಡ; ಬೋರ್‌ವೆಲ್‌ನಲ್ಲಿ ಹೂತು ಹಾಕಿ ನಾಪತ್ತೆ ನಾಟಕವಾಡಿದ!
23:06ಹೆಂಡತಿ ಕಾಟಕ್ಕೆ 'ಲೈವ್' ಸೂಸೈಡ್ ಯತ್ನ: ಗಂಡನ ನೌಟಂಕಿ ನಾಟಕ ಬಿಚ್ಚಿಟ್ಟ ಕುವೈತ್ ರಿಟರ್ನ್ ಪತ್ನಿ!
24:05ಅಮ್ಮ ಸತ್ತ ಮಗುವಿಗೆ ಆಸರೆಯಾಗದೇ, 3ನೇ ಮಹಡಿಯಿಂದ ತಳ್ಳಿದ ಮಲತಾಯಿ! ಸಾವಿನ ಸತ್ಯ ಬಿಚ್ಚಿಟ್ಟ ಸಿಸಿಟಿವಿ!
23:37ಸೀನಿಯರ್ ಲಾಯರ್ ಮದುವೆಯಾಗಲು ಹೆಂಡತಿಯನ್ನೇ ಮುಗಿಸಿದ ಗಂಡ; 2 ಬಾರಿ ಜಸ್ಟ್ ಮಿಸ್, 3ನೇ ಸಲ ಮಟಾಶ್!
Read more