4 ಕ್ಷೇತ್ರ... 4 ತಂತ್ರ.. ಶಿಕಾರಿವೀರನ 4 ಟಿಕೆಟ್ ಮಂತ್ರ: ಆ 4 ಲೋಕಸಭಾ ಕ್ಷೇತ್ರಗಳಿಗೆ ಯಡಿಯೂರಪ್ಪ ಆಯ್ಕೆ ಯಾರು?

4 ಕ್ಷೇತ್ರ... 4 ತಂತ್ರ.. ಶಿಕಾರಿವೀರನ 4 ಟಿಕೆಟ್ ಮಂತ್ರ: ಆ 4 ಲೋಕಸಭಾ ಕ್ಷೇತ್ರಗಳಿಗೆ ಯಡಿಯೂರಪ್ಪ ಆಯ್ಕೆ ಯಾರು?

Published : Mar 08, 2024, 02:22 PM IST

ಕರ್ನಾಟಕದ ಕೇಸರಿ ಪಾಳೆಯದಲ್ಲಿ ಟಿಕೆಟ್ ಟೆನ್ಷನ್..! ಯಾರಿಗೆ ಲಕ್, ಯಾರಿಗೆ ಶಾಕ್..? ಹಾಲಿ ಸಂಸದರ ಪೈಕಿ ಯಾರಿಗೆಲ್ಲಾ ಟಿಕೆಟ್ ಮಿಸ್..? ಲೋಕಸಭೆ ಟಿಕೆಟ್ ಟಕ್ಕರ್'ನಲ್ಲಿ ಶಿಕಾರಿವೀರನ ರೋಚಕ ಲೆಕ್ಕಾಚಾರ..! 

ಶಿವಮೊಗ್ಗ (ಮಾ.08): ಕರ್ನಾಟಕದ ಕೇಸರಿ ಪಾಳೆಯದಲ್ಲಿ ಟಿಕೆಟ್ ಟೆನ್ಷನ್..! ಯಾರಿಗೆ ಲಕ್, ಯಾರಿಗೆ ಶಾಕ್..? ಹಾಲಿ ಸಂಸದರ ಪೈಕಿ ಯಾರಿಗೆಲ್ಲಾ ಟಿಕೆಟ್ ಮಿಸ್..? ಲೋಕಸಭೆ ಟಿಕೆಟ್ ಟಕ್ಕರ್'ನಲ್ಲಿ ಶಿಕಾರಿವೀರನ ರೋಚಕ ಲೆಕ್ಕಾಚಾರ..! 4 ಕ್ಷೇತ್ರಗಳಿಗೆ 4 ತಂತ್ರ, ಇದುವೇ ರಾಜಾಹುಲಿಯ ಟಿಕೆಟ್ ಮಂತ್ರ..!   ಆ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಯಡಿಯೂರಪ್ಪನವರ ಕ್ಯಾಂಡಿಡೇಟ್ಸ್ ಯಾರು..? ಹಳೇ ಹುಲಿಗಳ ಪರ ನಿಂತಿದ್ದೇಕೆ ರಾಜಾಹುಲಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, 4 ಟಿಕೆಟ್ ಕಥೆ..! 4 ಲೋಕಸಭಾ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಯಾಗ್ಬೇಕು ಅನ್ನೋದ್ರ ಬಗ್ಗೆ ಯಡಿಯೂರಪ್ಪನವರು ಸ್ಪಷ್ಟ ನಿಲುವು ತಳೆದಿದ್ದಾರೆ. 

ಅದ್ರಲ್ಲಿ ಎರಡು ಬೆಂಗಳೂರು ಉತ್ತರ ಮತ್ತು ಉತ್ತರ ಕನ್ನಡದಲ್ಲಿ ಬಿಎಸ್ವೈ ಬೆಂಬಲ ಯಾರಿಗೆ ಅನ್ನೋದನ್ನು ನೋಡಿದ್ದಾಯ್ತು. ಉಳಿದೆರಡು ಕ್ಷೇತ್ರಗಳಾದ ಹಾವೇರಿ ಮತ್ತು ಬೆಳಗಾವಿಯಲ್ಲಿ ಶಿಕಾರಿವೀರನ ಶ್ರೀರಕ್ಷೆ ಯಾರಿಗೆ ಅನ್ನೋದನ್ನು ತೋರಿಸ್ತೀವಿ, ಬೆಂಗಳೂರು ಉತ್ತರ, ಉತ್ತರ ಕನ್ನಡ, ಹಾವೇರಿ ಮತ್ತು ಬೆಳಗಾವಿ.. ಈ 4 ಲೋಕಸಭಾ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಯಾಗ್ಬೇಕು ಅನ್ನೋದ್ರ ಬಗ್ಗೆ ಯಡಿಯೂರಪ್ಪನವರು ಸ್ಪಷ್ಟ ನಿಲುವು ತಳೆದಿದ್ದಾರೆ. ಬೆಂಗಳೂರು ಉತ್ತರದಲ್ಲಿ ಸದಾನಂದ ಗೌಡ ಮತ್ತು ಉತ್ತರ ಕನ್ನಡದಲ್ಲಿ ಅನಂತ ಕುಮಾರ್ ಹೆಗಡೆಗೆ ಬಿಎಸ್ವೈ ಬೆಂಬಲ.

ಹಾಗಾದ್ರೆ ಹಾವೇರಿ ಮತ್ತು ಬೆಳಗಾವಿಯಲ್ಲಿ ಶಿಕಾರಿವೀರನ ಶ್ರೀರಕ್ಷೆ ಯಾರಿಗೆ..? ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಕಾರಣ ಒಂದಷ್ಟು ಸ್ವಯಂಕೃತ ಅಪರಾಧಗಳು. ಆ ತಪ್ಪುಗಳನ್ನು ಲೋಕಸಭಾ ಚುನಾವಣೆಯಲ್ಲಿ ಸರಿ ಪಡಿಸಲು ಯಡಿಯೂರಪ್ಪ ಮುಂದಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಒಂದಷ್ಟು ಸ್ವಯಂಕೃತ ಅಪರಾಧಗಳೇ ಕಾರಣ. ಲೋಕಸಭಾ ಚುನಾವಣೆಯಲ್ಲಿ ಆ ಪ್ರಮಾದಗಳು ಮರುಕಳಿಸಲೇಬಾರದು ಅಂತ ಎಚ್ಚರ ವಹಿಸಲು ಮುಂದಾಗಿದ್ದಾರೆ ಮಾಜಿ ಸಿಎಂ ಯಡಿಯೂರಪ್ಪ. ಇದನ್ನು ಪಕ್ಷದ ಹೈಕಮಾಂಡ್ ಗಮನಕ್ಕೂ ತಂದಿರುವ ಬಿಎಸ್ವೈ, ಟಿಕೆಟ್ ಹಂಚಿಕೆಯ ಸೂತ್ರವನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ.

21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
Read more