ರಾಹುಲ್ ಸಲಹೆಯಂತೆ ಕೋಲಾರದಿಂದ ಹಿಂದೆ ಸರಿದ ಸಿದ್ದು,ಇಂದು ಮಹತ್ವದ ಸಭೆ

Mar 18, 2023, 12:36 PM IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಸದ್ಯಕ್ಕೆ  ಬಹುಚರ್ಚಿತ ವಿಷಯವಾಗಿದ್ದು, ಕ್ಷೇತ್ರ ಆಯ್ಕೆ ಗೊಂದಲ ಮುಂದುವರಿದಿದೆ.ಸಿದ್ದರಾಮಯ್ಯ ನಿವಾಸದಲ್ಲಿ ಇಂದು ಕೋಲಾರ ನಾಯಕರ ಸಭೆ ನಡೆಯಲಿದ್ದು, ಮಧ್ಯಾಹ್ನ 1.30  ಮೀಟಿಂಗ್‌ ಮಾಡಲಿದ್ದಾರೆ.  ಕೊಲಾರ ಸ್ಪರ್ಧೇ ಬೇಡ ಎಂದು ಹೈಕಮಾಂಡ್‌ ಸೂಚನೆ ಬೆನ್ನಲ್ಲೇ ಸಭೆಯನ್ನು ಕರೆಯಲಾಗಿದ್ದು, ಪೂರ್ವಭಾವಿಯಾಗಿ ಸಭೆಯನ್ನು ಸಿದ್ದರಾಮಯ್ಯ ನಡೆಸಲಿದ್ದಾರೆ. ಸ್ಪರ್ಧೆ ವಿಚಾರದ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡಲಿದ್ದಾರೆ. ನಾಳೆ ಕೋಲಾರ ಪ್ರವಾಸವನ್ನು ಸಿದ್ದು ಕೈಗೊಳ್ಳಲಿದ್ದಾರೆ.