ಸದ್ಯದಲ್ಲೇ ಯಾವುದಾದ್ರೂ ದೇವಸ್ಥಾನ ಮಲಿನವಾಗ್ಬಹುದು! ಆಯನೂರು ಮಂಜುನಾಥ್‌ ಬಾಂಬ್!

Apr 3, 2023, 4:21 PM IST

ಶಿವಮೊಗ್ಗ (ಏ.03):  ಶಿವಮೊಗ್ಗದಲ್ಲಿ ಚುನಾವಣೆ ಸಂದರ್ಭದಲ್ಲಿ ಈಶ್ವರಪ್ಪ ಸೀತಾವರಣಯಿಂದ ಬೆಂಬಲಿಗರು ಗಲಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಸದ್ಯದಲ್ಲೇ ಯಾವುದಾದರೂ ದೇವಸ್ಥಾನ ಮಲಿನವಾಗಬಹುದು ಈ ಬಗ್ಗೆ ಪೊಲೀಸರು ಇಲಾಖೆ ಮುಂಜಾಗ್ರತೆ ವಹಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಶಾಂಥಿ ಭಂಗ ತರಲು ಪ್ರಯತ್ನ ನಡೆಯುತ್ತಿದೆ. ಹಿಂದೂ - ಮುಸ್ಲಿಮರು ಎಚ್ಚರದಿಂದ ಇರಬೇಕು. ಸಂಬಂಧಪಟ್ಟ ಇಲಾಖೆಗಳು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ನಿಗಾವಹಿಸಬೇಕು. ಅಶಾಂತಿ ಉಂಟುಮಾಡಿದಲ್ಲಿ ಕೊಲೆಗಳು ಕೂಡ ಆಗಬಹುದು. ರಾಜ್ಯದಲ್ಲಿ ಕೇವಲ ಪ್ರಚೋದನೆ ಮಾಡಿ ಮಾತನಾಡುವುದೇ ಈಶ್ವರಪ್ಪ ಸಾಧನೆಯಾಗಿದೆ. ಶಿವಮೊಗ್ಗದಲ್ಲಿ ಒಂದೇ ಒಂದು ಯೋಜನೆಯನ್ನೂ ಈವರೆಗೂ ತಂದಿಲ್ಲ. ಒಂದೇ ಒಂದು ಯೋಜನೆ ತಾರದ ಇವರು, ಕೇವಲ ಪ್ರಚೋದನೆ ಮಾಡಿಕೊಂಡು ಓಡಾಡುತ್ತಾರೆ. ಪ್ರಚೋದನಾ ಭಾಷಣ ಮಾಡುವುದಷ್ಟೇ ಇವರ ಬಂಡವಾಳವಾಗಿದೆ. ಕ್ಷೇತ್ರದ ಸಮಸ್ಯೆ ಬಗ್ಗೆ ಈವರೆಗೆ ಸದನದಲ್ಲಿ ಈವರೆಗೂ ಚರ್ಚೆ ಮಾಡಿಲ್ಲ ಎಂದು ಹೇಳಿದರು.