ಇಲ್ಲಿ ಶಾಂತಿ ಸಂಧಾನ..ಅಲ್ಲಿ ಕ್ರಾಂತಿ ಸಂಘರ್ಷ..! ತೊಡೆ ತಟ್ಟಿದ ಹರಿಪ್ರಸಾದ್‌ಗೆ ಆಪ್ತನ ಮೂಲಕ ಟಕ್ಕರ್..!

ಇಲ್ಲಿ ಶಾಂತಿ ಸಂಧಾನ..ಅಲ್ಲಿ ಕ್ರಾಂತಿ ಸಂಘರ್ಷ..! ತೊಡೆ ತಟ್ಟಿದ ಹರಿಪ್ರಸಾದ್‌ಗೆ ಆಪ್ತನ ಮೂಲಕ ಟಕ್ಕರ್..!

Published : Oct 07, 2023, 02:44 PM IST

ಕಾಂಗ್ರೆಸ್‌ನಲ್ಲಿ ಇಬ್ಬರು ನಾಯಕರ ದಂಗೆ..ದಂಗಲ್..!
ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದಾರೆ ಶಾಮನೂರು..!
ಸಿದ್ದರಾಮಯ್ಯ ವಿರುದ್ಧ ಬಂಡೆದ್ದಿದ್ದಾರೆ ಹರಿಪ್ರಸಾದ್..!
ಸಿಡಿದೆದ್ದ ಶಾಮನೂರು ಕ್ರಾಂತಿಗೆ ಶಾಂತಿಯ ಮದ್ದು..!
ಬಂಡೆದ್ದ ಹರಿಪ್ರಸಾದ್ ಉರಿಗೆ  ಕ್ರಾಂತಿಯೇ ಗುದ್ದು..!

ಸಿದ್ದರಾಮಯ್ಯ ವಿರುದ್ಧ ದಂಗೆ ಎದ್ದಿದ್ದಾರೆ ಕಾಂಗ್ರೆಸ್‌ನ ಇಬ್ಬರು ನಾಯಕರು. ಬಂಡಾಯದ ಬೆಂಕಿ ಆರಿಸಲು ಸಿದ್ದು ಹೆಣೆದರು ಶಾಂತಿ-ಕ್ರಾಂತಿ ಮಂತ್ರ. ಒಬ್ಬರ ಜೊತೆ ಶಾಂತಿ, ಮತ್ತೊಬ್ಬರ ಜೊತೆ ಕ್ರಾಂತಿ. ಒಂದ್ಕಡೆ ಸಂಧಾನ, ಮತ್ತೊಂದು ಕಡೆ ಸಂಘರ್ಷ. ಕಾಂಗ್ರೆಸ್‌ನಲ್ಲಿ(Congress) ಇಬ್ಬರು ಹಿರಿಯ ನಾಯಕರ ದಂಗೆ.. ಬಂಡಾಯದ ದಂಗಲ್. ಅದೂ ಯಾರ ವಿರುದ್ಧ.. ಪ್ರಚಂಡ ಬಹುಮತದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ. ಅವರಲ್ಲಿ ಒಬ್ಬರು ದಾವಣಗೆರೆಯ ಧಣಿ ಬಿರುದಾಂಕಿತ ಶಾಮನೂರು ಶಿವಶಂಕರಪ್ಪ(Shamanur Shivashankarappa), ಇನ್ನೊಬ್ಬರು ಕಾಂಗ್ರೆಸ್'ನ ಸೀನಿಯರ್ ಲೀಡರ್ ಬಿ.ಕೆ ಹರಿಪ್ರಸಾದ್. ಈ ದಂಗೆಯನ್ನು ಮಟ್ಟ ಹಾಕೋದಕ್ಕೆ ಸಿದ್ದರಾಮಯ್ಯನವರು(Siddaramaiah) ಚಾಣಕ್ಯ ತಂತ್ರ ಹೆಣೆದಿದ್ದಾರೆ. ಆ ತಂತ್ರದ ಹೆಸರು ಶಾಂತಿ-ಕ್ರಾಂತಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಸ್ ಲೀಡರೂ ಹೌದು, ಖಡಕ್ ಅಡ್ಮಿನಿಸ್ಟ್ರೇಟರೂ ಹೌದು.. ಅದೇ ರೀತಿ ರಾಜಕೀಯ ಚಾಣಕ್ಯನೂ ಹೌದು. ಅವ್ರಿಗೆ ಯಾರನ್ನು ಹೇಗೆ ಸಂಭಾಳಿಸ್ಬೇಕು, ಯಾರನ್ನು ಹೇಗೆ ಮಟ್ಟ ಹಾಕ್ಬೇಕು ಅನ್ನೋದು ಚೆನ್ನಾಗಿ ಗೊತ್ತು. ಅದ್ರಲ್ಲಿ ಪಂಟರ್ ಆಗಿರೋದ್ರಿಂದ್ಲೇ ಸಿದ್ದರಾಮಯ್ಯ ಎರಡೆರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು. ಸಿದ್ದರಾಮಯ್ಯ ಬುದ್ಧಿರಾಮಯ್ಯನೂ ಹೌದು, ತಂತ್ರರಾಮಯ್ಯನೂ ಹೌದು. ಅವ್ರ ರಾಜಕೀಯದಾಟ, ಆ ಆಟದಲ್ಲಿ ಉರುಳಿಸೋ ದಾಳಗಳು ಹೇಗಿರ್ತವೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಈ ಶಾಂತಿ-ಕ್ರಾಂತಿ ಮಂತ್ರ.

ಇದನ್ನೂ ವೀಕ್ಷಿಸಿ:  ನೇಪಾಳದಲ್ಲಿ ಭೂಕಂಪ! ಸಿಕ್ಕಿಂನಲ್ಲಿ ಪ್ರವಾಹ? ಜೀವ ಉಳಿಸೋರ ಪ್ರಾಣವೇ ಅಪಾಯದಲ್ಲಿ!

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more