ಇಲ್ಲಿ ಶಾಂತಿ ಸಂಧಾನ..ಅಲ್ಲಿ ಕ್ರಾಂತಿ ಸಂಘರ್ಷ..! ತೊಡೆ ತಟ್ಟಿದ ಹರಿಪ್ರಸಾದ್‌ಗೆ ಆಪ್ತನ ಮೂಲಕ ಟಕ್ಕರ್..!

ಇಲ್ಲಿ ಶಾಂತಿ ಸಂಧಾನ..ಅಲ್ಲಿ ಕ್ರಾಂತಿ ಸಂಘರ್ಷ..! ತೊಡೆ ತಟ್ಟಿದ ಹರಿಪ್ರಸಾದ್‌ಗೆ ಆಪ್ತನ ಮೂಲಕ ಟಕ್ಕರ್..!

Published : Oct 07, 2023, 02:44 PM IST

ಕಾಂಗ್ರೆಸ್‌ನಲ್ಲಿ ಇಬ್ಬರು ನಾಯಕರ ದಂಗೆ..ದಂಗಲ್..!
ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದಾರೆ ಶಾಮನೂರು..!
ಸಿದ್ದರಾಮಯ್ಯ ವಿರುದ್ಧ ಬಂಡೆದ್ದಿದ್ದಾರೆ ಹರಿಪ್ರಸಾದ್..!
ಸಿಡಿದೆದ್ದ ಶಾಮನೂರು ಕ್ರಾಂತಿಗೆ ಶಾಂತಿಯ ಮದ್ದು..!
ಬಂಡೆದ್ದ ಹರಿಪ್ರಸಾದ್ ಉರಿಗೆ  ಕ್ರಾಂತಿಯೇ ಗುದ್ದು..!

ಸಿದ್ದರಾಮಯ್ಯ ವಿರುದ್ಧ ದಂಗೆ ಎದ್ದಿದ್ದಾರೆ ಕಾಂಗ್ರೆಸ್‌ನ ಇಬ್ಬರು ನಾಯಕರು. ಬಂಡಾಯದ ಬೆಂಕಿ ಆರಿಸಲು ಸಿದ್ದು ಹೆಣೆದರು ಶಾಂತಿ-ಕ್ರಾಂತಿ ಮಂತ್ರ. ಒಬ್ಬರ ಜೊತೆ ಶಾಂತಿ, ಮತ್ತೊಬ್ಬರ ಜೊತೆ ಕ್ರಾಂತಿ. ಒಂದ್ಕಡೆ ಸಂಧಾನ, ಮತ್ತೊಂದು ಕಡೆ ಸಂಘರ್ಷ. ಕಾಂಗ್ರೆಸ್‌ನಲ್ಲಿ(Congress) ಇಬ್ಬರು ಹಿರಿಯ ನಾಯಕರ ದಂಗೆ.. ಬಂಡಾಯದ ದಂಗಲ್. ಅದೂ ಯಾರ ವಿರುದ್ಧ.. ಪ್ರಚಂಡ ಬಹುಮತದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ. ಅವರಲ್ಲಿ ಒಬ್ಬರು ದಾವಣಗೆರೆಯ ಧಣಿ ಬಿರುದಾಂಕಿತ ಶಾಮನೂರು ಶಿವಶಂಕರಪ್ಪ(Shamanur Shivashankarappa), ಇನ್ನೊಬ್ಬರು ಕಾಂಗ್ರೆಸ್'ನ ಸೀನಿಯರ್ ಲೀಡರ್ ಬಿ.ಕೆ ಹರಿಪ್ರಸಾದ್. ಈ ದಂಗೆಯನ್ನು ಮಟ್ಟ ಹಾಕೋದಕ್ಕೆ ಸಿದ್ದರಾಮಯ್ಯನವರು(Siddaramaiah) ಚಾಣಕ್ಯ ತಂತ್ರ ಹೆಣೆದಿದ್ದಾರೆ. ಆ ತಂತ್ರದ ಹೆಸರು ಶಾಂತಿ-ಕ್ರಾಂತಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಸ್ ಲೀಡರೂ ಹೌದು, ಖಡಕ್ ಅಡ್ಮಿನಿಸ್ಟ್ರೇಟರೂ ಹೌದು.. ಅದೇ ರೀತಿ ರಾಜಕೀಯ ಚಾಣಕ್ಯನೂ ಹೌದು. ಅವ್ರಿಗೆ ಯಾರನ್ನು ಹೇಗೆ ಸಂಭಾಳಿಸ್ಬೇಕು, ಯಾರನ್ನು ಹೇಗೆ ಮಟ್ಟ ಹಾಕ್ಬೇಕು ಅನ್ನೋದು ಚೆನ್ನಾಗಿ ಗೊತ್ತು. ಅದ್ರಲ್ಲಿ ಪಂಟರ್ ಆಗಿರೋದ್ರಿಂದ್ಲೇ ಸಿದ್ದರಾಮಯ್ಯ ಎರಡೆರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು. ಸಿದ್ದರಾಮಯ್ಯ ಬುದ್ಧಿರಾಮಯ್ಯನೂ ಹೌದು, ತಂತ್ರರಾಮಯ್ಯನೂ ಹೌದು. ಅವ್ರ ರಾಜಕೀಯದಾಟ, ಆ ಆಟದಲ್ಲಿ ಉರುಳಿಸೋ ದಾಳಗಳು ಹೇಗಿರ್ತವೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಈ ಶಾಂತಿ-ಕ್ರಾಂತಿ ಮಂತ್ರ.

ಇದನ್ನೂ ವೀಕ್ಷಿಸಿ:  ನೇಪಾಳದಲ್ಲಿ ಭೂಕಂಪ! ಸಿಕ್ಕಿಂನಲ್ಲಿ ಪ್ರವಾಹ? ಜೀವ ಉಳಿಸೋರ ಪ್ರಾಣವೇ ಅಪಾಯದಲ್ಲಿ!

20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more