ಡಿಸಿಎಂ ದಂಗಲ್: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ದಾಯಾದಿ ಯುದ್ಧ, "ಲಕ್ಷ್ಮೀ" ಪಟಾಕಿ, ಸೀಕ್ರೆಟ್ ಆಪರೇಷನ್..!

Jan 11, 2024, 10:36 AM IST

ಬೆಂಗಳೂರು(ಜ.11):  ಕಾಂಗ್ರೆಸ್ ಕೋಟೆಯೊಳಗೆ ಮತ್ತೆ ಭುಗಿಲೆದ್ದ ದಾಯಾದಿ ಕಾಳಗ, ಯಾದವೀ ಕಲಹ..! ಅಂತರ್ಯುದ್ಧದಲ್ಲಿ 3 ಅಧ್ಯಾಯಗಳು, ಆರು ರಹಸ್ಯಗಳು. ಡಿಸಿಎಂ ಪಟ್ಟದ ಚದುರಂಗದಾಟ, ಢಮ್ ಢಮಾರ್ ಅಂದ ಲಕ್ಷ್ಮೀ ಪಟಾಕಿ.. ಬಂಡೆಗೆ ಸಡ್ಡು ಹೊಡೆಯಲು ಸಿದ್ದು ಬಣದ ಸೀಕ್ರೆಟ್ ಆಪರೇಷನ್.. ಬಂದೂಕಿಗೆ ಹೆಗಲು ಕೊಟ್ಟವರು ಯಾರೋ, ಬಂದೂಕು ಇನ್ಯಾರದ್ದೋ..? ದಂಡು ಕಟ್ಟಿದ ದಳವಾಯಿಗಳ ಟಾರ್ಗೆಟ್ ಮಾತ್ರ ಡಿಸಿಎಂ ಡಿಕೆ ಶಿವಕುಮಾರ್. ಅಷ್ಟಕ್ಕೂ ಏನಿದು ಕೈ ಸಾಮ್ರಾಜ್ಯದಲ್ಲಿ ಧಗಧಗಿಸ್ತಾ ಇರೋ ಅಂತರ್ಯುದ್ಧ ಜ್ವಾಲೆ..? ಈ ಪ್ರಶ್ನೆಗೆ ಉತ್ತರವೇ ಇವತ್ತಿನ ಸುವರ್ಣ ಸ್ಪೆಷಲ್, ಕೈ ದಾಯಾದಿ ದಂಗಲ್.

ಕೈ ದಾಯಾದಿ ದಂಗಲ್'ನಲ್ಲಿ ಡಿಸಿಎಂ ಚದುರಂಗ ಮೊದಲ ಅಧ್ಯಾಯ. ಡಿಕೆಶಿ ವಿರುದ್ಧ ಅಬ್ಬರಿಸಿದ್ದವರ ಆಪರೇಷನ್'ಗೆ ಸ್ಕೆಚ್ ಹಾಕಿರೋದು 2ನೇ ಅಧ್ಯಾಯ.. ಹಾಗಾದ್ರೆ 3ನೇ ಅಧ್ಯಾಯ ಯಾವುದು..? ಅಲ್ಲೂ ಟಾರ್ಗೆಟ್ ಡಿಕೆನೇನಾ..? ಉತ್ತರ ಕೊಡ್ತೀವಿ. 

ಶ್ರೀರಾಮನನ್ನೇ ಕಕ್ಷಿದಾರನನ್ನಾಗಿಸಿ ಗೆದ್ದ ವಕೀಲ: ಇವರು ಕೋಟು ತೊಟ್ಟು ಕೋರ್ಟಿಗೆ ಹೋಗಿದ್ದೇ ರಾಮನಿಗಾಗಿ

ಇದು ಕಳೆದ 24 ಗಂಟೆಗಳೊಳಗೆ ಭುಗಿಲೆದ್ದ ಕೈ ದಾಯಾದಿ ದಂಗಲ್. ಈ ದಂಗಲ್'ನಲ್ಲಿರೋದು ಒಟ್ಟು ಮೂರು ಅಧ್ಯಾಯಗಳು. ಒಂದು ತ್ರಿವಳಿ ಡಿಸಿಎಂ ರಣರಂಗ, ಮತ್ತೊಂದು ಸಿದ್ದು ಆಪ್ತನ ಚದುರಂಗ. ಹಾಗಾದ್ರೆ 3ನೇ ಅಧ್ಯಾಯ ಯಾವುದು..? ಅಲ್ಲೂ ಡಿಸಿಎಂ ಡಿಕೆಶಿಯವ್ರೇ ಟಾರ್ಗೆಟ್ ಆಗಿದ್ದು ಹೇಗೆ..? ಇಲ್ಲಿದೆ ನೋಡಿ ಆ ಇಂಟ್ರೆಸ್ಟಿಂಗ್ ಸ್ಟೋರಿ.

ಕೈ ದಾಯಾದಿ ದಂಗಲ್'ನಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಡಿಸಿಎಂ ಜಟಾಪಟಿ. ಸಿದ್ದರಾಮಯ್ಯ ಬಣ ಆರಂಭಿಸಿದ ಚದುರಂಗದಾಟಕ್ಕೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಕಾಂಗ್ರೆಸ್‌ನಲ್ಲಿ ದಾಯಾದಿ ಕಲಹ, ಅಂತರ್ಯುದ್ಧ, ಅಂತಃಕಲಹ ಹೊಸತೇನಲ್ಲ. ಈಗ ಸಣ್ಣ ಕಿಡಿಕಿಚ್ಚಿನಂತೆ ಕಾಣ್ತಿರೋ ಅಂತರ್ಯುದ್ಧ ಬೆಂಕಿಯ ಜ್ವಾಲೆಯಾಗದಂತೆ ತಡೆಯೋದೇ ಕೈ ನಾಯಕರ ಮುಂದಿರೋ ಸವಾಲು.