Reservation Politics: ರಾಜ್ಯದಲ್ಲಿ ಮೀಸಲಾತಿ ಸಮರ: ಸ್ವಾಮೀಜಿಗಳ ನಡುವೆ ಜಿದ್ದಾಜಿದ್ದಿ

Dec 25, 2022, 5:16 PM IST

ಕರ್ನಾಟಕದಲ್ಲಿ ಮೀಸಲಾತಿ ಹೋರಾಟದ ಕಾವು ಜೋರಾಗಿದ್ದು, ಮೀಸಲಾತಿ ಸಮರದಲ್ಲಿ ಸ್ವಾಮೀಜಿಗಳ ಜಿದ್ದಾಜಿದ್ದಿ ನಡೆದಿದೆ. ರಾಜ್ಯದ ದೊಡ್ಡ ದೊಡ್ಡ ಸಮುದಾಯದವರು ಹಾಗೂ ದೊಡ್ಡ ನಾಯಕರು ಮೀಸಲಾತಿ ವಿಚಾರಕ್ಕೆ ಇಳಿದಿದ್ದಾರೆ. ಒಂದು ಕಡೆ ಪಂಚಮಸಾಲಿ ಮೀಸಲಾತಿ ಮತ್ತು ಒಕ್ಕಲಿಗ ಸಮುದಾಯದ ಹೋರಾಟ ಮಗದೊಂದು ಕಡೆ ಕುರುಬ ಸಮುದಾಯದ ಮೀಸಲಾತಿ ಯುದ್ದ ಇನ್ನೊಂದು ಕಡೆ ಎಸ್‌.ಸಿ ಹಾಗೂ ಎಸ್‌.ಟಿ ಮೀಸಲಾತಿ ಯುದ್ಧ ನಡೆದಿದೆ. ಪಂಚಮಸಾಲಿಗಳ ಮೀಸಲಾತಿ ಯುದ್ಧದ ಮಧ್ಯೆ ಸ್ವಾಮೀಜಿ Vs ಮಿನಿಸ್ಟರ್ ಸದ್ದು ಮಾಡ್ತಿದೆ. ಈ ಸಮರದಲ್ಲಿ ಗೆಲ್ಲೋದ್ಯಾರು?ಮೀಸಲಾತಿ ಬಿಕ್ಕಟ್ಟಿನ ಪಟ್ಟು, ಪ್ರತಿಪಟ್ಟಿನ ಮಧ್ಯೆ ಸರ್ಕಾರಕ್ಕೆ ಇಕ್ಕಟ್ಟು, ಅಷ್ಟಕ್ಕೂ ಸ್ವಾಮೀಜಿಗಳ ಮೀಸಲಾತಿ ಸಮರ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಫಾರ್ಮ್‌ಹೌಸ್‌ ನಲ್ಲಿ ಜಿಂಕೆ ಪ್ರಕರಣ, ಕಾಂಗ್ರೆಸ್ ಮುಖಂಡ ಎಸ್ ಎಸ್ ಮಲ ...