ಸಿಎಂ ಹುಕುಂ.. ಡಿಸಿಎಂ ಡಿಶುಂ ಡಿಶುಂ.. ಕಾಂಗ್ರೆಸ್‌ನಲ್ಲಿ ಏನಾಗ್ತಿದೆ..?

ಸಿಎಂ ಹುಕುಂ.. ಡಿಸಿಎಂ ಡಿಶುಂ ಡಿಶುಂ.. ಕಾಂಗ್ರೆಸ್‌ನಲ್ಲಿ ಏನಾಗ್ತಿದೆ..?

Published : Sep 24, 2023, 03:50 PM IST

ಕೈ ಕೋಟೆಯಲ್ಲಿ ಬಣ ಯುದ್ಧ..ಬಲ ಯುದ್ಧ..!
3 ಡಿಸಿಎಂ ಆಯ್ತು.. ಈಗ 6 ಡಿಸಿಎಂ ಕಿಚ್ಚು..!
ಡಿಸಿಎಂ ಡಿಕೆಶಿ ಸಿಎಂ ಆಗ್ಬೇಕು ಎಂದ ಕೈ ಶಾಸಕ..!
 

ಸಿದ್ದರಾಮಯ್ಯ ಸರ್ಕಾರಕ್ಕೆ ಇನ್ನೂ ಮೂವರು ಡಿಸಿಎಂಗಳು  ಬೇಕು ಅಂದ್ರು ಸಚಿವ ಕೆ.ಎನ್ ರಾಜಣ್ಣ, ಮೂರೇಕೆ ಆರು ಡಿಸಿಎಂಗಳಿರಲಿ ಅಂದ್ರು ರೆಬೆಲ್ ರಾಯರೆಡ್ಡಿ. ಡಿಕೆಶಿ ಮುಖ್ಯಮಂತ್ರಿಯಾಗ್ಲಿ ಅಂದ್ರು ಡಿಕೆ ಆಪ್ತ ಶಾಸಕ. ಕಾಂಗ್ರೆಸ್‌ನಲ್ಲಿ(Congress) ಜೋರಾಯ್ತು ಬಣ ರಾಜಕೀಯ. ಸಿದ್ದರಾಮಯ್ಯ(Siddaramaiah) ಬಣದ ವಿರುದ್ಧ ಸಿಡಿದೆದ್ದ ಡಿಕೆ ಟೀಮ್. ಅಧಿಕಾರದಲ್ಲಿರ್ಲಿ, ಇಲ್ದೇ ಇರ್ಲಿ.. ಕಾಂಗ್ರೆಸ್‌ನಲ್ಲಿ ಒಂದು ವಿಷ್ಯ ತುಂಬಾ ಕಾಮನ್. ಅದೇ ಬಣಯುದ್ಧ, ಅಂತರ್ಯುದ್ಧ. ಬಣ ರಾಜಕಾರಣಕ್ಕೂ ಕಾಂಗ್ರೆಸ್‌ಗೂ ಬಿಡದ ನಂಟು. ಕೈ ಪಾಳೆಯದಲ್ಲಿ ಬಣ ಬಡಿದಾಟ ಶುರುವಾಗೋಕೆ ಒಂದು ಸಣ್ಣ ಕಿಡಿ ಸಾಕು. ಅಂಥದ್ದೇ ಒಂದು ಕಿಡಿ ಹೊತ್ತಿಕೊಂಡದ್ದೇ ತಡ.. ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಹೊಸ ತಿಕ್ಕಾಟ ಶುರುವಾಗಿದೆ. ಅದು ಎಲ್ಲಿಗೆ ಬಂದು ನಿಂತಿದೆ ಗೊತ್ತಾ ವೀಕ್ಷಕರೇ.. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಪಟ್ಟದಲ್ಲಿ ಕೂತಿರೋವಾಗ್ಲೇ, ಡಿಕೆ ಶಿವಕುಮಾರ್(DK Shivakumar) ಸಿಎಂ ಆಗ್ಲೇಬೇಕು ಅಂತ ಸ್ವತಃ ಕಾಂಗ್ರೆಸ್ ಶಾಸಕರೊಬ್ಬರು ಹಕ್ಕೊತ್ತಾಯ ಮಾಡೋವರೆಗೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಅಂದಿರೋರು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್(MLA Shivaganga Basavaraj). ಕೆ.ಎನ್ ರಾಜಣ್ಣನವರ ಈ ವೈಯಕ್ತಿಕ ಅಭಿಪ್ರಾಯವೇ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯಕ್ಕೆ ನಾಂದಿ ಹಾಡಿರೋದು. ಸಿದ್ದರಾಮಯ್ಯ ಬಣದವರು ಸ್ಫೋಟಿಸಿದ ಈ ಡಿಸಿಎಂ (DCM)ಬಾಂಬ್, ಕಾಂಗ್ರೆಸ್ ಪಾಳೆಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಠಿಸಿ ಬಿಟ್ಟಿದೆ.

ಇದನ್ನೂ ವೀಕ್ಷಿಸಿ:  ಹಾಲಾಶ್ರೀ ಮೇಲೆ ಮತ್ತೊಂದು ಕೋಟಿ ಆರೋಪ..! ಮೂರುವರೆ ಕೋಟಿಯಲ್ಲಿ ಏನೇನು ಮಾಡಿದ್ಲು ಚೈತ್ರಾ..?

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more