ಆ ಅಯೋಧ್ಯೆಗೂ.. ಈ ಗುಜರಾತ್‌ಗೂ ಏನು ನಂಟು..? ರಾಹುಲ್ ಗಾಂಧಿ ವಿಶ್ವಾಸದ ಹಿಂದಿದೆ ನಿಗೂಢ ರಹಸ್ಯ..!

ಆ ಅಯೋಧ್ಯೆಗೂ.. ಈ ಗುಜರಾತ್‌ಗೂ ಏನು ನಂಟು..? ರಾಹುಲ್ ಗಾಂಧಿ ವಿಶ್ವಾಸದ ಹಿಂದಿದೆ ನಿಗೂಢ ರಹಸ್ಯ..!

Published : Jul 08, 2024, 05:33 PM IST

ಗುಜರಾತ್ ಗೆಲುವು..ಮೋದಿ ಸೋಲು..ಇದು ರಾಹುಲ್ ಶಪಥ..!
ಅಯೋಧ್ಯೆಯಲ್ಲಿ ಆಗಿದ್ದೇನು..?ಗುಜರಾತ್‌ನಲ್ಲಿ ಆಗೋದೇನು..?
ಗುಜರಾತ್ ಕಾಂಗ್ರೆಸ್‌ ವಶಕ್ಕೆ ಸಿದ್ಧವಾಗಿದೆಯಾ ನಿಗೂಢ ವ್ಯೂಹ..?

ಗುಜರಾತ್  ಗೆದ್ದೇ ಗೆಲ್ತೀವಿ..ಬಿಜೆಪಿ (BJP)ಹಾಗೂ ಮೋದಿನಾ ಸೋಲಿಸೇ ಸೋಲುಸ್ತೀವಿ. ಇದು ಕಾಂಗ್ರೆಸ್(Congress) ಯುವರಾಜ ರಾಹುಲ್ ಗಾಂಧಿ (Rahul Gandhi) ಮಾಡಿರೋ ಶಪಥ. ಅಯೋಧ್ಯೆಲಿ ಏನಾಗಿತ್ತೋ, ಅದೇ ಗುಜರಾತ್‌ನಲ್ಲಿ ರಿಪೀಟ್ ಆಗತ್ತೆ ಅಂತಿದ್ದಾರೆ ರಾಹುಲ್ ಗಾಂಧಿ. ರಾಷ್ಟ್ರ ರಾಜಕಾರಣ ಈಗ ಬದಲಾಗಿದೆ. ಕಳೆದ 10 ವರ್ಷಗಳ ತನಕ ಇದ್ದ ವಾತಾವರಣಕ್ಕೂ ಈಗಿರೋ ಪರಿಸ್ಥಿತಿಗೂ ವ್ಯತ್ಯಾಸ ಸುಸ್ಪಷ್ಟವಾಗಿ ಎದ್ದು ಕಾಣ್ತಾ ಇದೆ. ಮತ್ತೆ ಮೋದಿಯೇ (Narendra Modi)ಪ್ರಧಾನಿಯಾಗಿದ್ದಾರೆ. ಮತ್ತೆ ಎನ್‌ಡಿಎನೇ(NDA) ಅಧಿಕಾರ ಹಿಡಿದಿದೆ. ಆದ್ರೆ ಬದಲಾಗಿರೋದು, ಆಡಳಿತಾರೂಢ ಪಕ್ಷಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷ ಕಾಂಗ್ರೆಸ್‌ನಲ್ಲಿ. ಈ ಬಾರಿ ನಮ್ಮ ಕಣ್ಣಿಗೆ ಕಾಣ್ತಾ ಇರೋ ಕಾಂಗ್ರೆಸ್ ತೀರಾ ಭಿನ್ನವಾಗಿದೆ. ಈ ಸಲವೂ ರಾಷ್ಟ್ರದ ಹಿರಿಯ ಪಕ್ಷ ಅಂತ ಗುರ್ತಿಸಿಕೊಳ್ಳೋ ಕಾಂಗ್ರೆಸ್, 100 ಗಡಿ ದಾಟೋಕೆ ಸಾಧ್ಯವಾಗದ ಹಾಗೆ ಕೂತಿದೆ. ಹಾಗಿದ್ದೂ, ಈ ಬಾರಿ ಲೋಕಸಭಾ ಚುನಾವಣಾ ರಣಕಣದಲ್ಲಿ ತನಗೆ ನೈತಿಕ ಗೆಲುವು ದಕ್ಕಿದೆ ಅಂತ ಹೇಳ್ಕೊಳ್ತಾ ಇದೆ. ಇದೇ ಕಾರಣಕ್ಕಾಗಿಯೇ, ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ದೊಡ್ಡ ದನಿಯಲ್ಲಿ ಮಾತಾಡುವಂತಾಗಿದೆ. ಕಾಂಗ್ರೆಸ್ ಆಡಳಿತಾರೂಢ ಸರ್ಕಾರದ ವಿರುದ್ಧ ಗುಡುಗ್ತಾ ಇದೆ. ಆ ಗುಡುಗು ಅಡಗಿಸೋಕೆ, ಪ್ರಧಾನಿ ಮೋದಿ ಕೂಡ ತಯಾರಾಗಿದ್ದಾರೆ. ಗುಜರಾತ್‌ನಲ್ಲಿ ಮೋದಿ ಹಾಗೂ ಬಿಜೆಪಿನಾ ಸೋಲಿಸಿಯೇ ಸೋಲಿಸ್ತೀವಿ. ಇದು ರಾಹುಲ್ ಗಾಂಧಿ ಶಪಥ. ಶತಾಯ ಗತಾಯ ಗುಜರಾತ್ ಗೆಲ್ಲೋ ಕನಸು ಕಾಣ್ತಾ ಇರೋ ಕಾಂಗ್ರೆಸ್ ರಣಘೋಷ ಇದು.

ಇದನ್ನೂ ವೀಕ್ಷಿಸಿ:  ಪತಿಗಾಗಿ ಬಂಡೆ ಮಹಾಕಾಳಿ ಮೊರೆ ಹೋದ ವಿಜಯಲಕ್ಷ್ಮೀ! ಸಾಕ್ಷಿ ನಾಶಕ್ಕೆ ಕರೆಸಿದ ಆ ಮೂವರೇ ಈಗ ದರ್ಶನ್ ಪಾಲಿಗೆ ವಿಲನ್?

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more