ಆ ಅಯೋಧ್ಯೆಗೂ.. ಈ ಗುಜರಾತ್‌ಗೂ ಏನು ನಂಟು..? ರಾಹುಲ್ ಗಾಂಧಿ ವಿಶ್ವಾಸದ ಹಿಂದಿದೆ ನಿಗೂಢ ರಹಸ್ಯ..!

ಆ ಅಯೋಧ್ಯೆಗೂ.. ಈ ಗುಜರಾತ್‌ಗೂ ಏನು ನಂಟು..? ರಾಹುಲ್ ಗಾಂಧಿ ವಿಶ್ವಾಸದ ಹಿಂದಿದೆ ನಿಗೂಢ ರಹಸ್ಯ..!

Published : Jul 08, 2024, 05:33 PM IST

ಗುಜರಾತ್ ಗೆಲುವು..ಮೋದಿ ಸೋಲು..ಇದು ರಾಹುಲ್ ಶಪಥ..!
ಅಯೋಧ್ಯೆಯಲ್ಲಿ ಆಗಿದ್ದೇನು..?ಗುಜರಾತ್‌ನಲ್ಲಿ ಆಗೋದೇನು..?
ಗುಜರಾತ್ ಕಾಂಗ್ರೆಸ್‌ ವಶಕ್ಕೆ ಸಿದ್ಧವಾಗಿದೆಯಾ ನಿಗೂಢ ವ್ಯೂಹ..?

ಗುಜರಾತ್  ಗೆದ್ದೇ ಗೆಲ್ತೀವಿ..ಬಿಜೆಪಿ (BJP)ಹಾಗೂ ಮೋದಿನಾ ಸೋಲಿಸೇ ಸೋಲುಸ್ತೀವಿ. ಇದು ಕಾಂಗ್ರೆಸ್(Congress) ಯುವರಾಜ ರಾಹುಲ್ ಗಾಂಧಿ (Rahul Gandhi) ಮಾಡಿರೋ ಶಪಥ. ಅಯೋಧ್ಯೆಲಿ ಏನಾಗಿತ್ತೋ, ಅದೇ ಗುಜರಾತ್‌ನಲ್ಲಿ ರಿಪೀಟ್ ಆಗತ್ತೆ ಅಂತಿದ್ದಾರೆ ರಾಹುಲ್ ಗಾಂಧಿ. ರಾಷ್ಟ್ರ ರಾಜಕಾರಣ ಈಗ ಬದಲಾಗಿದೆ. ಕಳೆದ 10 ವರ್ಷಗಳ ತನಕ ಇದ್ದ ವಾತಾವರಣಕ್ಕೂ ಈಗಿರೋ ಪರಿಸ್ಥಿತಿಗೂ ವ್ಯತ್ಯಾಸ ಸುಸ್ಪಷ್ಟವಾಗಿ ಎದ್ದು ಕಾಣ್ತಾ ಇದೆ. ಮತ್ತೆ ಮೋದಿಯೇ (Narendra Modi)ಪ್ರಧಾನಿಯಾಗಿದ್ದಾರೆ. ಮತ್ತೆ ಎನ್‌ಡಿಎನೇ(NDA) ಅಧಿಕಾರ ಹಿಡಿದಿದೆ. ಆದ್ರೆ ಬದಲಾಗಿರೋದು, ಆಡಳಿತಾರೂಢ ಪಕ್ಷಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷ ಕಾಂಗ್ರೆಸ್‌ನಲ್ಲಿ. ಈ ಬಾರಿ ನಮ್ಮ ಕಣ್ಣಿಗೆ ಕಾಣ್ತಾ ಇರೋ ಕಾಂಗ್ರೆಸ್ ತೀರಾ ಭಿನ್ನವಾಗಿದೆ. ಈ ಸಲವೂ ರಾಷ್ಟ್ರದ ಹಿರಿಯ ಪಕ್ಷ ಅಂತ ಗುರ್ತಿಸಿಕೊಳ್ಳೋ ಕಾಂಗ್ರೆಸ್, 100 ಗಡಿ ದಾಟೋಕೆ ಸಾಧ್ಯವಾಗದ ಹಾಗೆ ಕೂತಿದೆ. ಹಾಗಿದ್ದೂ, ಈ ಬಾರಿ ಲೋಕಸಭಾ ಚುನಾವಣಾ ರಣಕಣದಲ್ಲಿ ತನಗೆ ನೈತಿಕ ಗೆಲುವು ದಕ್ಕಿದೆ ಅಂತ ಹೇಳ್ಕೊಳ್ತಾ ಇದೆ. ಇದೇ ಕಾರಣಕ್ಕಾಗಿಯೇ, ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ದೊಡ್ಡ ದನಿಯಲ್ಲಿ ಮಾತಾಡುವಂತಾಗಿದೆ. ಕಾಂಗ್ರೆಸ್ ಆಡಳಿತಾರೂಢ ಸರ್ಕಾರದ ವಿರುದ್ಧ ಗುಡುಗ್ತಾ ಇದೆ. ಆ ಗುಡುಗು ಅಡಗಿಸೋಕೆ, ಪ್ರಧಾನಿ ಮೋದಿ ಕೂಡ ತಯಾರಾಗಿದ್ದಾರೆ. ಗುಜರಾತ್‌ನಲ್ಲಿ ಮೋದಿ ಹಾಗೂ ಬಿಜೆಪಿನಾ ಸೋಲಿಸಿಯೇ ಸೋಲಿಸ್ತೀವಿ. ಇದು ರಾಹುಲ್ ಗಾಂಧಿ ಶಪಥ. ಶತಾಯ ಗತಾಯ ಗುಜರಾತ್ ಗೆಲ್ಲೋ ಕನಸು ಕಾಣ್ತಾ ಇರೋ ಕಾಂಗ್ರೆಸ್ ರಣಘೋಷ ಇದು.

ಇದನ್ನೂ ವೀಕ್ಷಿಸಿ:  ಪತಿಗಾಗಿ ಬಂಡೆ ಮಹಾಕಾಳಿ ಮೊರೆ ಹೋದ ವಿಜಯಲಕ್ಷ್ಮೀ! ಸಾಕ್ಷಿ ನಾಶಕ್ಕೆ ಕರೆಸಿದ ಆ ಮೂವರೇ ಈಗ ದರ್ಶನ್ ಪಾಲಿಗೆ ವಿಲನ್?

24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more