ಆ ಅಯೋಧ್ಯೆಗೂ.. ಈ ಗುಜರಾತ್‌ಗೂ ಏನು ನಂಟು..? ರಾಹುಲ್ ಗಾಂಧಿ ವಿಶ್ವಾಸದ ಹಿಂದಿದೆ ನಿಗೂಢ ರಹಸ್ಯ..!

ಆ ಅಯೋಧ್ಯೆಗೂ.. ಈ ಗುಜರಾತ್‌ಗೂ ಏನು ನಂಟು..? ರಾಹುಲ್ ಗಾಂಧಿ ವಿಶ್ವಾಸದ ಹಿಂದಿದೆ ನಿಗೂಢ ರಹಸ್ಯ..!

Published : Jul 08, 2024, 05:33 PM IST

ಗುಜರಾತ್ ಗೆಲುವು..ಮೋದಿ ಸೋಲು..ಇದು ರಾಹುಲ್ ಶಪಥ..!
ಅಯೋಧ್ಯೆಯಲ್ಲಿ ಆಗಿದ್ದೇನು..?ಗುಜರಾತ್‌ನಲ್ಲಿ ಆಗೋದೇನು..?
ಗುಜರಾತ್ ಕಾಂಗ್ರೆಸ್‌ ವಶಕ್ಕೆ ಸಿದ್ಧವಾಗಿದೆಯಾ ನಿಗೂಢ ವ್ಯೂಹ..?

ಗುಜರಾತ್  ಗೆದ್ದೇ ಗೆಲ್ತೀವಿ..ಬಿಜೆಪಿ (BJP)ಹಾಗೂ ಮೋದಿನಾ ಸೋಲಿಸೇ ಸೋಲುಸ್ತೀವಿ. ಇದು ಕಾಂಗ್ರೆಸ್(Congress) ಯುವರಾಜ ರಾಹುಲ್ ಗಾಂಧಿ (Rahul Gandhi) ಮಾಡಿರೋ ಶಪಥ. ಅಯೋಧ್ಯೆಲಿ ಏನಾಗಿತ್ತೋ, ಅದೇ ಗುಜರಾತ್‌ನಲ್ಲಿ ರಿಪೀಟ್ ಆಗತ್ತೆ ಅಂತಿದ್ದಾರೆ ರಾಹುಲ್ ಗಾಂಧಿ. ರಾಷ್ಟ್ರ ರಾಜಕಾರಣ ಈಗ ಬದಲಾಗಿದೆ. ಕಳೆದ 10 ವರ್ಷಗಳ ತನಕ ಇದ್ದ ವಾತಾವರಣಕ್ಕೂ ಈಗಿರೋ ಪರಿಸ್ಥಿತಿಗೂ ವ್ಯತ್ಯಾಸ ಸುಸ್ಪಷ್ಟವಾಗಿ ಎದ್ದು ಕಾಣ್ತಾ ಇದೆ. ಮತ್ತೆ ಮೋದಿಯೇ (Narendra Modi)ಪ್ರಧಾನಿಯಾಗಿದ್ದಾರೆ. ಮತ್ತೆ ಎನ್‌ಡಿಎನೇ(NDA) ಅಧಿಕಾರ ಹಿಡಿದಿದೆ. ಆದ್ರೆ ಬದಲಾಗಿರೋದು, ಆಡಳಿತಾರೂಢ ಪಕ್ಷಕ್ಕಿಂತ ಹೆಚ್ಚಾಗಿ ವಿರೋಧ ಪಕ್ಷ ಕಾಂಗ್ರೆಸ್‌ನಲ್ಲಿ. ಈ ಬಾರಿ ನಮ್ಮ ಕಣ್ಣಿಗೆ ಕಾಣ್ತಾ ಇರೋ ಕಾಂಗ್ರೆಸ್ ತೀರಾ ಭಿನ್ನವಾಗಿದೆ. ಈ ಸಲವೂ ರಾಷ್ಟ್ರದ ಹಿರಿಯ ಪಕ್ಷ ಅಂತ ಗುರ್ತಿಸಿಕೊಳ್ಳೋ ಕಾಂಗ್ರೆಸ್, 100 ಗಡಿ ದಾಟೋಕೆ ಸಾಧ್ಯವಾಗದ ಹಾಗೆ ಕೂತಿದೆ. ಹಾಗಿದ್ದೂ, ಈ ಬಾರಿ ಲೋಕಸಭಾ ಚುನಾವಣಾ ರಣಕಣದಲ್ಲಿ ತನಗೆ ನೈತಿಕ ಗೆಲುವು ದಕ್ಕಿದೆ ಅಂತ ಹೇಳ್ಕೊಳ್ತಾ ಇದೆ. ಇದೇ ಕಾರಣಕ್ಕಾಗಿಯೇ, ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ದೊಡ್ಡ ದನಿಯಲ್ಲಿ ಮಾತಾಡುವಂತಾಗಿದೆ. ಕಾಂಗ್ರೆಸ್ ಆಡಳಿತಾರೂಢ ಸರ್ಕಾರದ ವಿರುದ್ಧ ಗುಡುಗ್ತಾ ಇದೆ. ಆ ಗುಡುಗು ಅಡಗಿಸೋಕೆ, ಪ್ರಧಾನಿ ಮೋದಿ ಕೂಡ ತಯಾರಾಗಿದ್ದಾರೆ. ಗುಜರಾತ್‌ನಲ್ಲಿ ಮೋದಿ ಹಾಗೂ ಬಿಜೆಪಿನಾ ಸೋಲಿಸಿಯೇ ಸೋಲಿಸ್ತೀವಿ. ಇದು ರಾಹುಲ್ ಗಾಂಧಿ ಶಪಥ. ಶತಾಯ ಗತಾಯ ಗುಜರಾತ್ ಗೆಲ್ಲೋ ಕನಸು ಕಾಣ್ತಾ ಇರೋ ಕಾಂಗ್ರೆಸ್ ರಣಘೋಷ ಇದು.

ಇದನ್ನೂ ವೀಕ್ಷಿಸಿ:  ಪತಿಗಾಗಿ ಬಂಡೆ ಮಹಾಕಾಳಿ ಮೊರೆ ಹೋದ ವಿಜಯಲಕ್ಷ್ಮೀ! ಸಾಕ್ಷಿ ನಾಶಕ್ಕೆ ಕರೆಸಿದ ಆ ಮೂವರೇ ಈಗ ದರ್ಶನ್ ಪಾಲಿಗೆ ವಿಲನ್?

24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
Read more