ಉತ್ತರದಿಂದ ದಕ್ಷಿಣಕ್ಕೆ ಬಂದ ಗಾಂಧಿ ಕುಟುಂಬದ ಕುಡಿ! ಛಿದ್ರವಾಗಿದ್ದು ಹೇಗೆ ಕಾಂಗ್ರೆಸ್ ಭದ್ರಕೋಟೆ ಅಮೇಥಿ..?

Apr 20, 2024, 4:50 PM IST

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಉತ್ತರದಿಂದ ದಕ್ಷಿಣದತ್ತ ಮುಖ ಮಾಡಿದ್ದು, ಅಮೇಥಿ ಬಿಟ್ಟು ಇದೀಗ ಕೇರಳದ ವಯನಾಡಿನಲ್ಲಿ(Wayanad) ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದಾರೆ. 2004ರಲ್ಲಿ ಇವರು ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳ ಮೇಲೆ ಬಿಜೆಪಿ(BJP), ಆರ್‌ಎಸ್‌ಎಸ್‌ನಿಂದ ದಾಳಿಯಾಗುತ್ತಿದೆ. ಹಾಗಾಗಿ ಈ ಭಾಗದ ಜನರಿಗೆ ನಾನಿದಿದ್ದೀನಿ ಎಂಬ ಸಂದೇಶ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ರಾಹುಲ್‌ ಗಾಂಧಿ(Rahul Gandhi) ಹೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ(Narendra Modi), ಕಾಂಗ್ರೆಸ್‌ಗೆ ಗೊತ್ತಿದೆ ತನ್ನ ಪಾಪಗಳಿಗೆ ಪ್ರಾಯಶ್ಚಿತವಿಲ್ಲ ಅಂತ. ದೇಶದ ಜನ ತಕ್ಕ ಶಾಸ್ತಿ ಮಾಡಲು ಕಾಯುತ್ತಿದ್ದಾರೆ ಎಂದು ಮೋದಿ ಹೇಳಿದ್ದರು.   

ಇದನ್ನೂ ವೀಕ್ಷಿಸಿ:  Niranjan Hiremath: ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ