ಬಿಜೆಪಿ ಗೆಲ್ಲೋಕೆ..ಎದುರಾಳಿ ಸೋಲೋಕೆ..3 ಕಾರಣ?! ರಾಜಕೀಯ ಚಾಣಾಕ್ಷ ನುಡಿದ ಭವಿಷ್ಯವೇನು ..?

ಬಿಜೆಪಿ ಗೆಲ್ಲೋಕೆ..ಎದುರಾಳಿ ಸೋಲೋಕೆ..3 ಕಾರಣ?! ರಾಜಕೀಯ ಚಾಣಾಕ್ಷ ನುಡಿದ ಭವಿಷ್ಯವೇನು ..?

Published : May 20, 2024, 04:07 PM ISTUpdated : May 20, 2024, 04:08 PM IST

ಮೋದಿ ಸೆಟ್ ಮಾಡಿದ ಟಾರ್ಗೆಟ್ 400ರ ರಹಸ್ಯವೇನು..?
ರಾಜಕೀಯ ತಂತ್ರಜ್ಞ ಹೇಳಿದ ಸಿಂಹಾಸನ ರಹಸ್ಯ ಏನು..?
ಬ್ರಾಂಡ್ ಮೋದಿಗೆ ಬಿಗ್ ಚಾಲೆಂಜ್ ಯಾರು ಗೊತ್ತಾ..?

ಬಿಜೆಪಿ(BJP) ಗೆಲ್ಲೋಕೆ.. ಎದುರಾಳಿ ಸೋಲೋಕೆ.. ಆ ಮೂರು ಅಂಶಗಳೇ ಪ್ರಮುಖ ಕಾರಣವಂತೆ. ಈ ಮಾತನ್ನ ಹೇಳಿರೋದು ಮತ್ಯಾರೋ ಅಲ್ಲ, ದೇಶದ ರಾಜಕೀಯ ಚಾಣಾಕ್ಷ ಅಂತ ಕರೆಸಿಕೊಳ್ಳೋ, ಪ್ರಶಾಂತ್ ಕಿಶೋರ್ (Prashant Kishor). ಕೇಸರಿ ಪಾಳಯದ ಟಾರ್ಗೆಟ್ 400ರ ಬಗ್ಗೆ, ಸಂಚಲನ ಸೃಷ್ಟಿಸಿರೋ ಕಾಂಗ್ರೆಸ್(Congress) ಗ್ಯಾರಂಟಿ ಬಗ್ಗೆ, ಕಾಂಗ್ರೆಸ್ ಮುಂದಾಳ್ತನದ ಇಂಡಿ ಮೈತ್ರಿಕೂಟದ ಬಗ್ಗೆನೂ ಇವರು ಮಾತಾಡಿದ್ದಾರೆ. ದೇಶದಲ್ಲೆಡೆ ಚುನಾವಣೆ ಕಾವು ತೀವ್ರವಾಗ್ತಾ ಇದೆ. ಒಂದೊಂದು ಹಂತದ ಚುನಾವಣೆ(Lok Sabha elections 2024) ಮುಗಿದ ಮೇಲೂ ಒಂದೊಂದು ಲೆಕ್ಕಾಚಾರ ಬಯಲಾಗ್ತಾ ಇದೆ. ಹಲವಾರು ಸಮೀಕ್ಷೆಗಳು ಒಂದೊಂದು ಲೆಕ್ಕವನ್ನು ಬರೆದಿಟ್ಟುಕೊಂಡಿದ್ದಾವೆ. ಪ್ರಶಾಂತ್ ಕಿಶೋರ್.. ಎಲೆಕ್ಷನ್ ಸ್ಪೆಷಲಿಸ್ಟ್.. ಮತಸಂಗ್ರಾಮದಲ್ಲಿ ಈತ ಸಾರಥಿಯಾದ್ರೆ, ಗೆಲುವು ದಕ್ಕಿಸಿಕೊಳ್ಳೋದು ಕಷ್ಟದ ಮಾತಲ್ಲ. ದೇಶದ ಮೂಲೆಮೂಲೆಯ ಜನಾಭಿಪ್ರಾಯ ಸಂಗ್ರಹ ಮಾಡಿ, ಅದನ್ನ ಲೆಕ್ಕ ಹಾಕಿ, ಅಂತಿಮ ಫಲಿತಾಂಶ ಏನು ಅಂತ ಹೇಳಬಲ್ಲ ಜಾಣ್ಮೆ ಇವರಿಗಿದೆ. ನರೇಂದ್ರ ಮೋದಿ(Narendra Modi), ಬಂಗಾಳದ ದೀದಿ, ನಿತೀಶ್ ಕುಮಾರ್, ಜಗನ್ ಮೋಹನ್ ರೆಡ್ಡಿ, ಇವರೆಲ್ಲರ ಹಿಂದಿದ್ದ ಗೆಲುವಿನ ಶಕ್ತಿಯಂತಿದ್ದವರು ಪ್ರಶಾಂತ್ ಕಿಶೋರ್.2014ರಲ್ಲಿ ಮೋದಿ ಪರವಾಗಿ ಗಟ್ಟಿಯಾಗಿ ನಿಂತಿದ್ದ ಈ ರಾಜಕೀಯ ನಿಪುಣ, ಈಗ 2024ರ ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗೆ ರಾಜಕೀಯ ಪ್ರಚಾರದಿಂದ, ಲೆಕ್ಕಾಚಾರದಿಂದ ವಿಮುಖರಾದಂತೆ ಕಾಣ್ತಾ ಇದ್ದ ಪ್ರಶಾಂತ್ ಕಿಶೋರ್, ತಮ್ಮ ನಿಗೂಢ ಲೆಕ್ಕಾಚಾರವನ್ನು ಈಗ ಬಯಲಾಗಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ದೇವರಾಜೇಗೌಡ-ಶಿವರಾಮೇಗೌಡ ಸಂಭಾಷಣೆ ಆಡಿಯೋ ವೈರಲ್‌! ರೇವಣ್ಣಗೆ ಇಂದು ಜಾಮೀನಾ? ಜೈಲಾ?

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
Read more