ಬಿಜೆಪಿ ಗೆಲ್ಲೋಕೆ..ಎದುರಾಳಿ ಸೋಲೋಕೆ..3 ಕಾರಣ?! ರಾಜಕೀಯ ಚಾಣಾಕ್ಷ ನುಡಿದ ಭವಿಷ್ಯವೇನು ..?

ಬಿಜೆಪಿ ಗೆಲ್ಲೋಕೆ..ಎದುರಾಳಿ ಸೋಲೋಕೆ..3 ಕಾರಣ?! ರಾಜಕೀಯ ಚಾಣಾಕ್ಷ ನುಡಿದ ಭವಿಷ್ಯವೇನು ..?

Published : May 20, 2024, 04:07 PM ISTUpdated : May 20, 2024, 04:08 PM IST

ಮೋದಿ ಸೆಟ್ ಮಾಡಿದ ಟಾರ್ಗೆಟ್ 400ರ ರಹಸ್ಯವೇನು..?
ರಾಜಕೀಯ ತಂತ್ರಜ್ಞ ಹೇಳಿದ ಸಿಂಹಾಸನ ರಹಸ್ಯ ಏನು..?
ಬ್ರಾಂಡ್ ಮೋದಿಗೆ ಬಿಗ್ ಚಾಲೆಂಜ್ ಯಾರು ಗೊತ್ತಾ..?

ಬಿಜೆಪಿ(BJP) ಗೆಲ್ಲೋಕೆ.. ಎದುರಾಳಿ ಸೋಲೋಕೆ.. ಆ ಮೂರು ಅಂಶಗಳೇ ಪ್ರಮುಖ ಕಾರಣವಂತೆ. ಈ ಮಾತನ್ನ ಹೇಳಿರೋದು ಮತ್ಯಾರೋ ಅಲ್ಲ, ದೇಶದ ರಾಜಕೀಯ ಚಾಣಾಕ್ಷ ಅಂತ ಕರೆಸಿಕೊಳ್ಳೋ, ಪ್ರಶಾಂತ್ ಕಿಶೋರ್ (Prashant Kishor). ಕೇಸರಿ ಪಾಳಯದ ಟಾರ್ಗೆಟ್ 400ರ ಬಗ್ಗೆ, ಸಂಚಲನ ಸೃಷ್ಟಿಸಿರೋ ಕಾಂಗ್ರೆಸ್(Congress) ಗ್ಯಾರಂಟಿ ಬಗ್ಗೆ, ಕಾಂಗ್ರೆಸ್ ಮುಂದಾಳ್ತನದ ಇಂಡಿ ಮೈತ್ರಿಕೂಟದ ಬಗ್ಗೆನೂ ಇವರು ಮಾತಾಡಿದ್ದಾರೆ. ದೇಶದಲ್ಲೆಡೆ ಚುನಾವಣೆ ಕಾವು ತೀವ್ರವಾಗ್ತಾ ಇದೆ. ಒಂದೊಂದು ಹಂತದ ಚುನಾವಣೆ(Lok Sabha elections 2024) ಮುಗಿದ ಮೇಲೂ ಒಂದೊಂದು ಲೆಕ್ಕಾಚಾರ ಬಯಲಾಗ್ತಾ ಇದೆ. ಹಲವಾರು ಸಮೀಕ್ಷೆಗಳು ಒಂದೊಂದು ಲೆಕ್ಕವನ್ನು ಬರೆದಿಟ್ಟುಕೊಂಡಿದ್ದಾವೆ. ಪ್ರಶಾಂತ್ ಕಿಶೋರ್.. ಎಲೆಕ್ಷನ್ ಸ್ಪೆಷಲಿಸ್ಟ್.. ಮತಸಂಗ್ರಾಮದಲ್ಲಿ ಈತ ಸಾರಥಿಯಾದ್ರೆ, ಗೆಲುವು ದಕ್ಕಿಸಿಕೊಳ್ಳೋದು ಕಷ್ಟದ ಮಾತಲ್ಲ. ದೇಶದ ಮೂಲೆಮೂಲೆಯ ಜನಾಭಿಪ್ರಾಯ ಸಂಗ್ರಹ ಮಾಡಿ, ಅದನ್ನ ಲೆಕ್ಕ ಹಾಕಿ, ಅಂತಿಮ ಫಲಿತಾಂಶ ಏನು ಅಂತ ಹೇಳಬಲ್ಲ ಜಾಣ್ಮೆ ಇವರಿಗಿದೆ. ನರೇಂದ್ರ ಮೋದಿ(Narendra Modi), ಬಂಗಾಳದ ದೀದಿ, ನಿತೀಶ್ ಕುಮಾರ್, ಜಗನ್ ಮೋಹನ್ ರೆಡ್ಡಿ, ಇವರೆಲ್ಲರ ಹಿಂದಿದ್ದ ಗೆಲುವಿನ ಶಕ್ತಿಯಂತಿದ್ದವರು ಪ್ರಶಾಂತ್ ಕಿಶೋರ್.2014ರಲ್ಲಿ ಮೋದಿ ಪರವಾಗಿ ಗಟ್ಟಿಯಾಗಿ ನಿಂತಿದ್ದ ಈ ರಾಜಕೀಯ ನಿಪುಣ, ಈಗ 2024ರ ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗೆ ರಾಜಕೀಯ ಪ್ರಚಾರದಿಂದ, ಲೆಕ್ಕಾಚಾರದಿಂದ ವಿಮುಖರಾದಂತೆ ಕಾಣ್ತಾ ಇದ್ದ ಪ್ರಶಾಂತ್ ಕಿಶೋರ್, ತಮ್ಮ ನಿಗೂಢ ಲೆಕ್ಕಾಚಾರವನ್ನು ಈಗ ಬಯಲಾಗಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ದೇವರಾಜೇಗೌಡ-ಶಿವರಾಮೇಗೌಡ ಸಂಭಾಷಣೆ ಆಡಿಯೋ ವೈರಲ್‌! ರೇವಣ್ಣಗೆ ಇಂದು ಜಾಮೀನಾ? ಜೈಲಾ?

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more