ಕಮಲ ತೊರೆದು ಕೈ ಹಿಡಿಯುತ್ತಿರುವುದಕ್ಕೆ ಕಾರಣ ಬಿಚ್ಚಿಟ್ಟ ಮಾಜಿ ಸಚಿವ!

Mar 26, 2023, 12:38 PM IST

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್‌ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದಕ್ಕೆ ಕಾರಣ ತಿಳಿಸಿದ್ದಾರೆ.  ಅಂದು ಕೋಲಿ ಸಮಾಜವನ್ನು ಎಸ್.ಟಿಗೆ ಸೇರಿಸುವುದಕ್ಕಾಗಿ  ಬಿಜೆಪಿ ಸೇರಿದ್ದೆ, ಆದರೆ ಬಿಜೆಪಿ ಕೋಲಿ ಸಮಾಜವನ್ನು ಎಸ್‌ಟಿ ಪ್ರವರ್ಗಕ್ಕೆ ಸೇರಿಸುವುದಕ್ಕೆ ಇವತ್ತು ನಾಳೆ ಎಂದು ಹೇಳುತ್ತಲೇ ನಾಲ್ಕು ವರ್ಷಗಳೇ ಕಳೆದಿದೆ. ಹೀಗಾಗಿ ಅಂದು ನಾ ಬಿಜೆಪಿ ಸೇರಿದರೂ ಯಾವುದೇ ಪ್ರಯೋಜನವಾಗಿಲ್ಲ.  ಹಾಗಾಗಿ ಮತ್ತೆ ಕಾಂಗ್ರೆಸ್ ಸೇರುತ್ತಿರುವುದಾಗಿ ಬಾಬುರಾವ್‌ ಚಿಂಚನಸೂರು ಹೇಳಿಕೊಂಡಿದ್ದಾರೆ.