ಚುನಾವಣೆ ಸೋಲಿನ ಬಳಿಕ ಪುಟಿದೇಳಲು ಬಿಜೆಪಿ ಹರಸಾಹಸ: ತಳಮಟ್ಟದಿಂದ ಪಕ್ಷ ಸಂಘಟನೆಯೇ ದೊಡ್ಡ ಸವಾಲ್‌

Jun 2, 2023, 12:42 PM IST

ಬೆಂಗಳೂರು(ಜೂ.02):  ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಪುಟಿದೇಳುವುದಕ್ಕೆ ಬಿಜೆಪಿ ಹರಸಾಹಸ ಪಡುತ್ತಿದೆ. ತಳಮಟ್ಟದಿಂದ ಪಕ್ಷ ಸಂಘಟನೆಯೇ ಬಿಜೆಪಿಗೆ ದೊಡ್ಡ ಸವಾಲ್‌ ಆಗಿದೆ. ರಾಜ್ಯಾಧ್ಯಕ್ಷ ಬದಲಾವಣೆ, ಪ್ರತಿಪಕ್ಷ ನಾಯಕನ ನೇಮಕವೂ ಕೂಡ ಸವಾಲ್‌ ಆಗಿ ಪರಿಣಮಿಸಿದೆ. ಬಜೆಟ್‌ ಅಧಿವೇಶನದವರೆಗೆ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕನ ನೇಮಕವಾಗುವುದು ಅನುಮಾನ ವ್ಯಕ್ತವಾಗಿದೆ. ಯಾರನ್ನ ಆಯ್ಕೆ ಮಾಡುವುದು ಎಂಬ ಗೊಂದಲದಲ್ಲೇ ಇದ್ದಾರೆ ಬಿಜೆಪಿ ನಾಯಕರು. ಜಾತಿ ಲೆಕ್ಕಾಚಾರ, ನಾಯಕರ ವರ್ಚಸ್ಸು ನೋಡಿಕೊಂಡು ನೇಮಕ ಮಾಡುವುದು ಅನಿವಾರ್ಯವಾಗಿದೆ. ಸದ್ಯ ಯಾರನ್ನು ನೇಮಿಸುವುದು ಎಂಬ ಗೊಂದಲದಲ್ಲಿದ್ದಾರೆ ಬಿಜೆಪಿ ನಾಯಕರು. 

ಕಾಂಗ್ರೆಸ್‌ ವಿರುದ್ಧ ಗ್ಯಾರಂಟಿ ಹೋರಾಟಕ್ಕೆ ಜೆಡಿಎಸ್‌ ಸಜ್ಜು: ಲೋಕಸಭೆ ಗೆಲ್ಲಲು ದಳಪತಿಗಳ ಹೊಸ ಅಸ್ತ್ರ