Narendra Modi: ಕರ್ನಾಟಕಕ್ಕೆ ಈಗಾಗಲೇ 900 ಕೋಟಿ ಹಣ ನೀಡಲಾಗಿದ್ದು, ಇದು ರಾಜಕೀಯ ಮಾಡೋ ವಿಷಯವಲ್ಲ: ಮೋದಿ

Apr 22, 2024, 12:11 PM IST

ಕನ್ನಡ ಪತ್ರಿಕೋದ್ಯಮದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ಇತಿಹಾಸ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ(Narendra Modi) ಜೊತೆ EXCLUSIVE ಸಂದರ್ಶನ(Interview) ಮಾಡಲಾಗಿದೆ. ಬರ ಪರಿಹಾರ, ತೆರಿಗೆ ಸಮರದ ಬಗ್ಗೆ ‘ನಮೋ’ ಇಲ್ಲಿ ಖಡಕ್ ಮಾತುಗಳನ್ನು ಆಡಿದ್ದಾರೆ. ಕೇಂದ್ರ ಸರ್ಕಾರವಾಗಲಿ(Central government), ರಾಜ್ಯ ಸರ್ಕಾರವಾಗಲಿ, ನಾವೆಲ್ಲಾ ಇರೋದು ಭಾರತ ಮಾತೆಯ ಸೇವೆಗಾಗಿ. 140 ಕೋಟಿ ಜನರ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬರಗಾಲ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯ ಸರ್ಕಾರ ನೋಡಿಕೊಳ್ಳುತ್ತೆ ಅಂತ ಇರಲೇಬಾರದು. ಇದರಿಂದ ಸಮಸ್ಯೆಯಾಗೋದು ಜನಸಾಮಾನ್ಯರಿಗೆ. ಕರ್ನಾಟಕಕ್ಕೆ(Karnataka) ಈಗಾಗಲೇ 900 ಕೋಟಿ ಹಣ ನೀಡಲಾಗಿದೆ. ಈ ರೀತಿ ಸಂದರ್ಭಕ್ಕಾಗಿ ಸಮಯಕ್ಕೆ ಸರಿಯಾಗಿ ನೀಡಲಾಗಿದೆ. ಇದು ರಾಜಕೀಯ ಮಾಡೋ ವಿಷಯವಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Mahesh Babu-Rajamouli: ಹೊರ ಬಂತು ರಾಜಮೌಳಿ-ಮಹೇಶ್ ಬಾಬು ಸಿನಿಮಾ ಸೀಕ್ರೆಟ್! ಸಿನಿಮಾದ ಮಹೇಶ್ ಬಾಬು ಗೆಟಪ್ ರಿವೀಲ್!