Watch Video: ಹೇಗಿರಲಿದೆ ಮೋದಿ ರಾಜ್ಯ ಪ್ರವಾಸದ ಇಂಪ್ಯಾಕ್ಟ್..? ದಕ್ಷಿಣ ಭದ್ರಕೋಟೆಯ ಮೇಲೆ ಪ್ರಧಾನಿ ಕಣ್ಣು!

Watch Video: ಹೇಗಿರಲಿದೆ ಮೋದಿ ರಾಜ್ಯ ಪ್ರವಾಸದ ಇಂಪ್ಯಾಕ್ಟ್..? ದಕ್ಷಿಣ ಭದ್ರಕೋಟೆಯ ಮೇಲೆ ಪ್ರಧಾನಿ ಕಣ್ಣು!

Published : Apr 08, 2024, 05:40 PM ISTUpdated : Apr 08, 2024, 05:42 PM IST

ಟಾರ್ಗೆಟ್ 28 ತಲುಪೋಕೆ ಕೇಸರಿಪಡೆಯ ನಿಗೂಢ ವ್ಯೂಹ!
ಲೋಕ ಸಂಗ್ರಾಮದಲ್ಲಿ ಗೇಮ್ ಚೇಂಜರ್ ಆಗ್ತಾರಾ ಮೋದಿ?
ಕೇಸರಿ ಸೇನೆಯ ನಾಗಾಲೋಟಕ್ಕೆ ಅಡ್ಡಿಯಾಗುತ್ತಾ ಕೈಪಡೆ?

ದಿನಗಳುರುಳಿದ ಹಾಗೆಲ್ಲಾ ಲೋಕಸಮರ ಸಮೀಪಿಸ್ತಾ ಇದೆ. ಆ ಲೋಕಸಂಗ್ರಾಮದಲ್ಲಿ ಗೆಲ್ಲೋಕೆ, ಕಾಂಗ್ರೆಸ್(Congress) ಬಿಜೆಪಿ ಮಾತ್ರವೇ ಅಲ್ಲ, ಸರ್ವಪಕ್ಷಗಳೂ ಶತ ಪ್ರಯತ್ನ ಮಾಡ್ತಾ ಇದಾವೆ. ಈಗಾಗ್ಲೇ, ಆಲ್ ಮೋಸ್ಟ್ ಎಲ್ಲಾ ಕ್ಷೇತ್ರಗಳ ರಣಕಲಿಗಳೂ ಆಯ್ಕೆಯಾಗಿದ್ದಾಗಿದೆ. ಇನ್ನೇನಿದ್ರೂ ಮತಸಂಗ್ರಾಮ ನಡೆದು, ಗೆದ್ದ ಅಭ್ಯರ್ಥಿ ಯಾರು ಅನ್ನೋದು ಡಿಸೈಡ್ ಆಗೋದಷ್ಟೇ ಬಾಕಿ ಇರೋದು. ಈ ಬಾರಿ ಲೋಕಸಭಾ ಚುನಾವಣೆ(Loksabha Election) ಹತ್ತಾರು ಕುತೂಹಲಕ್ಕೆ ಕಾರಣವಾಗಿದೆ. ಒಂದೆಡೆ, ಪ್ರಧಾನಿ ಮೋದಿ(Narendra Modi) ಬಿಜೆಪಿ(BJP) 370 ಕ್ಷೇತ್ರಗಳಲ್ಲಿ ಗೆಲ್ಲಬೇಕು, ಎನ್‌ಡಿಎ ಶತಾಯಗತಾಯ 400 ಸ್ಥಾನಗಳನ್ನ ತನ್ನದಾಗಿಸಿಕೊಳ್ಳಬೇಕು ಅಂತ ಕಂಕಣ ತೊಟ್ಟಿದ್ದಾರೆ. ಮೋದಿ ಅವರ ಟಾರ್ಗೆಟ್ 400 ಸೀಟುಗಳು. ಅಂದ್ರೆ ದೇಶದಲ್ಲಿರೋ 543 ಸ್ಥಾನಗಳ ಪೈಕಿ, ಬರೋಬ್ಬರಿ 400 ಸೀಟುಗಳನ್ನ ಗೆಲ್ಲೋದು ಅಂದ್ರೆ, ಅದು ಹೇಳಿದಷ್ಟು ಸುಲಭದ ಮಾತಲ್ಲ. ಒಂದ್ ವೇಳೆ, ಮೋದಿ ಸೇನೆ 400ರ ಗಡಿ ಸಮೀಪಿಸಿದರೆ, ಅದೊಂದು ರೆಕಾರ್ಡ್ ಆಗೋದ್ರಲ್ಲಿ ಸಂದೇಹವಂತೂ ಇಲ್ಲ. ಮೋದಿ ಅವರು ತಾವೇ ಮತ್ತೆ ಅಧಿಕಾರದ ಗದ್ದುಗೆ ಹಿಡಿಯೋದು ಅನ್ನೋ ವಿಶ್ವಾಸದಲ್ಲಿದ್ದಾರೆ. ಅಷ್ಟೇ ಅಲ್ಲ, ಈ ಬಾರಿ ಶತಾಯಗತಾಯ 370 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಅನ್ನೋ ನಿರ್ಣಯವನ್ನೂ ಮಾಡ್ಕೊಂಡಿದಾರೆ. ಆದ್ರೆ ಅದು ಅಂದುಕೊಂಡಷ್ಟು ಸುಲಭವಲ್ಲ. ಆ ಕಠಿಣ ಕಾರ್ಯವನ್ನೂ ಸುಲಭಸಾಧ್ಯ ಮಾಡಿಕೊಳ್ಳೋಕೆ ಮೋದಿ ಪಡೆ ಚಿತ್ರ ವಿಚಿತ್ರ ವ್ಯೂಹ ಹೆಣೆದು ಅಖಾಡಕ್ಕೆ ಧುಮುಕ್ತಾ ಇದೆ.

ಇದನ್ನೂ ವೀಕ್ಷಿಸಿ:  ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more