ಸಿಎಂ-ಡಿಸಿಎಂ ಮಧ್ಯೆ ದೋಸ್ತಿ-ಕುಸ್ತಿ..! ಮಿನಿಸ್ಟರ್ಸ್ ಬ್ರೇಕ್‌ಫಾಸ್ಟ್ ಮೀಟಿಂಗ್ ಕರೆದಿದ್ದೇಕೆ ಸಿದ್ದು..?

ಸಿಎಂ-ಡಿಸಿಎಂ ಮಧ್ಯೆ ದೋಸ್ತಿ-ಕುಸ್ತಿ..! ಮಿನಿಸ್ಟರ್ಸ್ ಬ್ರೇಕ್‌ಫಾಸ್ಟ್ ಮೀಟಿಂಗ್ ಕರೆದಿದ್ದೇಕೆ ಸಿದ್ದು..?

Published : Nov 05, 2023, 12:03 PM IST

ಒಂದೇ ವೇದಿಕೆಯಲ್ಲಿದ್ದರೂ ಮಾತನಾಡದ ಸಿಎಂ-ಡಿಸಿಎಂ..!
ಕ್ರಾಂತಿ ಕಹಳೆ ಊದಿದ್ದವರು ಶಾಂತಿ ಮಂತ್ರ ಜಪಿಸಿದ್ದೇಕೆ..?
ಮಿನಿಸ್ಟರ್ಸ್ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದಿದ್ದೇಕೆ ಸಿದ್ದು ?


ಅಧಿಕಾರ ಇಲ್ಲದಿದ್ರೂ ಕುಸ್ತಿ, ಅಧಿಕಾರ ಬಂದ್ರೂ ಜಂಗೀಕುಸ್ತಿ. ಇದು ಕರ್ನಾಟಕ ಕಾಂಗ್ರೆಸ್(Congress) ಸ್ಪೆಷಾಲಿಟಿ. ತಾರಕಕ್ಕೇರಿದ್ದ ಅಂತರ್ಯುದ್ಧ, ಮಂತ್ರಿ ಮಂತ್ರಿಗಳ ಮಧ್ಯೆ, ಶಾಸಕ-ಶಾಸಕರ ಮಧ್ಯೆಯೇ ಜಟಾಪಟಿ. ಅವ್ರು ಕೌಂಟರ್ ಕೊಟ್ರು, ಇವ್ರು ಟಕ್ಕರ್ ಕೊಟ್ರು. ಅವ್ರು ಪಟ್ಟು ಹಾಕಿದ್ರು, ಇವ್ರು ದಾಳ ಉರುಳಿಸಿದ್ರು. ಪರಿಸ್ಥಿತಿ ಕೈ ಮೀರಿ ಹೋಗ್ತಿದ್ದಂತೆ ಅಖಾಡಕ್ಕಿಳಿದು ಕದನ ವಿರಾಮ ಘೋಷಿಸಿದ್ರಾ ಸಿಎಂ ಸಿದ್ದರಾಮಯ್ಯ(Siddaramaiah). ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್( Dk shivakumar) ಕಾಂಗ್ರೆಸ್"ನ ಜೋಡೆತ್ತುಗಳಾದ್ರೂ, ಈ ಜೋಡೆತ್ತುಗಳ ಮಧ್ಯೆ ಸ್ಪರ್ಧೆ ಇರೋ ವಿಷ್ಯ ನಿಮ್ಗೆ ಗೊತ್ತೇ ಇದೆ. ಚುನಾವಣೆಗೂ ಮೊದ್ಲು ಸಿಎಂ ಕುರ್ಚಿಗಾಗಿ ಸ್ಪರ್ಧೆ. ಚುನಾವಣೆ ಗೆದ್ದು ಸಿದ್ದರಾಮಯ್ಯ ಸಿಎಂ ಆದ್ಮೇಲೂ ಖಾಲಿಯಿಲ್ಲದ ಸಿಎಂ ಕುರ್ಚಿಗಾಗಿ ಮತ್ತೆ ಪೈಪೋಟಿ. ಸಿದ್ದರಾಮಯ್ಯ ಪರ ಒಂದಷ್ಟು ಶಾಸಕರು, ಮಂತ್ರಿಗಳು. ಡಿಕೆ ಶಿವಕುಮಾರ್ ಪರ ಮತ್ತೊಂದಷ್ಟು ಶಾಸಕರಿಂದ ವಕಾಲತ್ತು. ಇದು ಕಾಂಗ್ರೆಸ್ ಪಾಳೆಯದಲ್ಲಿ ದೊಡ್ಡ ಅಂತರ್ಯುದ್ಧಕ್ಕೆ ಕಾರಣವಾಗಿತ್ತು. ಆದ್ರೀಗ ಕ್ರಾಂತಿಯ ಕಹಳೆ ಊದಿದ್ದವರು ಶಾಂತಿ ಮಂತ್ರ ಜಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಧ್ಯೆ ನೇರವಾಗಿ ಪೈಪೋಟಿ ನಡೀತಾ ಇದ್ಯೋ ಇಲ್ವೋ ಗೊತ್ತಿಲ್ಲ. ಆದರೆ ಇಬ್ಬರ ಬೆಂಬಲಿಗರು ಮಾತ್ರ ಕತ್ತಿ ಗುರಾಣಿ ಹಿಡಿದು ಯುದ್ಧಕ್ಕಿಳಿದಿರೋದಂತೂ ಸತ್ಯ. ಇದ್ರ ಮಧ್ಯೆ ಆ ಎರಡು ವೀಡಿಯೊಗಳು ಕೈ ಕೋಟೆಯೊಳಗೆ ಭರ್ಜರಿ ಸದ್ದು ಮಾಡ್ತಿವೆ. ಯಾಕಂದ್ರೆ 3 ವೀಡಿಯೋಗಳು ಒಂದೊಂದು ಕಥೆ ಹೇಳ್ತೀವಿ.

ಇದನ್ನೂ ವೀಕ್ಷಿಸಿ:  ಪತ್ರಕರ್ತರ ಮೇಲೆ ದೌರ್ಜನ್ಯ ತಡೆಯಲು ಟ್ರೈನಿಂಗ್: ಸರ್ಕಾರಿ ಅಭಿಯೋಜಕರು, ಜರ್ನಲಿಸ್ಟ್‌ಗೆ ತರಬೇತಿ

22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
Read more