ಸಿಎಂ-ಡಿಸಿಎಂ ಮಧ್ಯೆ ದೋಸ್ತಿ-ಕುಸ್ತಿ..! ಮಿನಿಸ್ಟರ್ಸ್ ಬ್ರೇಕ್‌ಫಾಸ್ಟ್ ಮೀಟಿಂಗ್ ಕರೆದಿದ್ದೇಕೆ ಸಿದ್ದು..?

ಸಿಎಂ-ಡಿಸಿಎಂ ಮಧ್ಯೆ ದೋಸ್ತಿ-ಕುಸ್ತಿ..! ಮಿನಿಸ್ಟರ್ಸ್ ಬ್ರೇಕ್‌ಫಾಸ್ಟ್ ಮೀಟಿಂಗ್ ಕರೆದಿದ್ದೇಕೆ ಸಿದ್ದು..?

Published : Nov 05, 2023, 12:03 PM IST

ಒಂದೇ ವೇದಿಕೆಯಲ್ಲಿದ್ದರೂ ಮಾತನಾಡದ ಸಿಎಂ-ಡಿಸಿಎಂ..!
ಕ್ರಾಂತಿ ಕಹಳೆ ಊದಿದ್ದವರು ಶಾಂತಿ ಮಂತ್ರ ಜಪಿಸಿದ್ದೇಕೆ..?
ಮಿನಿಸ್ಟರ್ಸ್ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದಿದ್ದೇಕೆ ಸಿದ್ದು ?


ಅಧಿಕಾರ ಇಲ್ಲದಿದ್ರೂ ಕುಸ್ತಿ, ಅಧಿಕಾರ ಬಂದ್ರೂ ಜಂಗೀಕುಸ್ತಿ. ಇದು ಕರ್ನಾಟಕ ಕಾಂಗ್ರೆಸ್(Congress) ಸ್ಪೆಷಾಲಿಟಿ. ತಾರಕಕ್ಕೇರಿದ್ದ ಅಂತರ್ಯುದ್ಧ, ಮಂತ್ರಿ ಮಂತ್ರಿಗಳ ಮಧ್ಯೆ, ಶಾಸಕ-ಶಾಸಕರ ಮಧ್ಯೆಯೇ ಜಟಾಪಟಿ. ಅವ್ರು ಕೌಂಟರ್ ಕೊಟ್ರು, ಇವ್ರು ಟಕ್ಕರ್ ಕೊಟ್ರು. ಅವ್ರು ಪಟ್ಟು ಹಾಕಿದ್ರು, ಇವ್ರು ದಾಳ ಉರುಳಿಸಿದ್ರು. ಪರಿಸ್ಥಿತಿ ಕೈ ಮೀರಿ ಹೋಗ್ತಿದ್ದಂತೆ ಅಖಾಡಕ್ಕಿಳಿದು ಕದನ ವಿರಾಮ ಘೋಷಿಸಿದ್ರಾ ಸಿಎಂ ಸಿದ್ದರಾಮಯ್ಯ(Siddaramaiah). ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್( Dk shivakumar) ಕಾಂಗ್ರೆಸ್"ನ ಜೋಡೆತ್ತುಗಳಾದ್ರೂ, ಈ ಜೋಡೆತ್ತುಗಳ ಮಧ್ಯೆ ಸ್ಪರ್ಧೆ ಇರೋ ವಿಷ್ಯ ನಿಮ್ಗೆ ಗೊತ್ತೇ ಇದೆ. ಚುನಾವಣೆಗೂ ಮೊದ್ಲು ಸಿಎಂ ಕುರ್ಚಿಗಾಗಿ ಸ್ಪರ್ಧೆ. ಚುನಾವಣೆ ಗೆದ್ದು ಸಿದ್ದರಾಮಯ್ಯ ಸಿಎಂ ಆದ್ಮೇಲೂ ಖಾಲಿಯಿಲ್ಲದ ಸಿಎಂ ಕುರ್ಚಿಗಾಗಿ ಮತ್ತೆ ಪೈಪೋಟಿ. ಸಿದ್ದರಾಮಯ್ಯ ಪರ ಒಂದಷ್ಟು ಶಾಸಕರು, ಮಂತ್ರಿಗಳು. ಡಿಕೆ ಶಿವಕುಮಾರ್ ಪರ ಮತ್ತೊಂದಷ್ಟು ಶಾಸಕರಿಂದ ವಕಾಲತ್ತು. ಇದು ಕಾಂಗ್ರೆಸ್ ಪಾಳೆಯದಲ್ಲಿ ದೊಡ್ಡ ಅಂತರ್ಯುದ್ಧಕ್ಕೆ ಕಾರಣವಾಗಿತ್ತು. ಆದ್ರೀಗ ಕ್ರಾಂತಿಯ ಕಹಳೆ ಊದಿದ್ದವರು ಶಾಂತಿ ಮಂತ್ರ ಜಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಧ್ಯೆ ನೇರವಾಗಿ ಪೈಪೋಟಿ ನಡೀತಾ ಇದ್ಯೋ ಇಲ್ವೋ ಗೊತ್ತಿಲ್ಲ. ಆದರೆ ಇಬ್ಬರ ಬೆಂಬಲಿಗರು ಮಾತ್ರ ಕತ್ತಿ ಗುರಾಣಿ ಹಿಡಿದು ಯುದ್ಧಕ್ಕಿಳಿದಿರೋದಂತೂ ಸತ್ಯ. ಇದ್ರ ಮಧ್ಯೆ ಆ ಎರಡು ವೀಡಿಯೊಗಳು ಕೈ ಕೋಟೆಯೊಳಗೆ ಭರ್ಜರಿ ಸದ್ದು ಮಾಡ್ತಿವೆ. ಯಾಕಂದ್ರೆ 3 ವೀಡಿಯೋಗಳು ಒಂದೊಂದು ಕಥೆ ಹೇಳ್ತೀವಿ.

ಇದನ್ನೂ ವೀಕ್ಷಿಸಿ:  ಪತ್ರಕರ್ತರ ಮೇಲೆ ದೌರ್ಜನ್ಯ ತಡೆಯಲು ಟ್ರೈನಿಂಗ್: ಸರ್ಕಾರಿ ಅಭಿಯೋಜಕರು, ಜರ್ನಲಿಸ್ಟ್‌ಗೆ ತರಬೇತಿ

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more