ಸಕ್ಕರೆ ನಾಡಿನಿಂದ ಸ್ಪರ್ಧೆಗೆ ಎಚ್‌ಡಿಕೆಗೆ ಬಿಜೆಪಿ ಓಪನ್ ಆಫರ್..! ಪುತ್ರನ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಣ ತೊಟ್ಟರಾ ದಳಪತಿ..?

ಸಕ್ಕರೆ ನಾಡಿನಿಂದ ಸ್ಪರ್ಧೆಗೆ ಎಚ್‌ಡಿಕೆಗೆ ಬಿಜೆಪಿ ಓಪನ್ ಆಫರ್..! ಪುತ್ರನ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಣ ತೊಟ್ಟರಾ ದಳಪತಿ..?

Published : Dec 30, 2023, 09:07 AM IST

ಮಂಡ್ಯ ರಣರಂಗ ಗೆಲ್ಲಲು "ದಳಪತಿ ದಾಳ"ಉರುಳಿಸಿದ ಕೇಸರಿ ಪಡೆ..!
ಕುಮಾರಸ್ವಾಮಿ ಭೇಟಿಯಾದ ಮಂಡ್ಯ ಜಿಲ್ಲಾ ಬಿಜೆಪಿ ನಾಯಕರು..!
ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುವಂತೆ ಎಚ್‌ಡಿಕೆಗೆ ಆಹ್ವಾನ..!

ಮಂಡ್ಯ, ರಣರಣ ಮಂಡ್ಯ. ರಾಜಕಾರಣ ಅಂತ ಬಂದ್ರೆ ಇಡೀ ಇಂಡಿಯಾದ ಗಮನ ಸೆಳೆಯೋ ಮಂಡ್ಯ(Mandya). ಇದು ನಾಲ್ಕೂವರೆ ವರ್ಷಗಳ ಹಿಂದೆ.. ಅಂದ್ರೆ 2019ರ ಲೋಕಸಭಾ ಚುನಾವಣೆಯ(Loksabha election) ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು(HD Kumaraswamy) ಆಡಿದ್ದ ಮಾತು. ಮಂಡ್ಯ ಬಗ್ಗೆ ಗೊತ್ತು, ಮಂಡ್ಯ ಜನರ ಬಗ್ಗೆ ಗೊತ್ತು. ಮಂಡ್ಯ ಜಿಲ್ಲೆ ನಮ್ಮ ಹೃದಯ ಅಂದಿದ್ರು ಕುಮಾರಣ್ಣ. ಆದ್ರೆ ಅದೇ ಮಂಡ್ಯದಲ್ಲಿ ಜೆಡಿಎಸ್‌ಗೆ(JDS) ಹೃದಯಾಘಾತವಾಗಿದ್ದು, ಕುಮಾರಸ್ವಾಮಿಯವರ ಮಗ ಲೋಕಸಭಾ ಚುನಾವಣೆಯಲ್ಲಿ ಸೋತದ್ದು. ಎಲ್ಲಾ ಈಗ ಇತಿಹಾಸ. 2019ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ, ಮಂಡ್ಯದಿಂದ ಸ್ಪರ್ಧಿಸಿ ಸೋತ ನಂತ್ರ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ರಾಜಕೀಯ ಚಿತ್ರಣಗಳು, ಸಮೀಕರಣಗಳು, ಮೈತ್ರಿವ್ಯೂಹಗಳು ಬದಲಾಗಿವೆ. ಅವತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಮಾಡ್ಕೊಂಡು ಲೋಕಸಭಾ ಅಖಾಡಕ್ಕಿಳಿದಿದ್ರೆ, ಈ ಬಾರಿ ಜೆಡಿಎಸ್ ಜೊತೆ ಬಿಜೆಪಿ ದೋಸ್ತಿ ಮಾಡ್ಕೊಂಡಿದೆ. ದಳಪತಿಗಳೊಂದಿಗೆ ದೋಸ್ತಿ ಕುದುರಿದ್ದೇ ತಡ. ಮಂಡ್ಯದ ಬಿಜೆಪಿ ನಾಯಕರು ರಣರೋಚಕ ದಾಳವೊಂದನ್ನು ಉರುಳಿಸಿದ್ದಾರೆ. ಅದೇ ಮಂಡ್ಯ ಗೆಲ್ಲಲು ಕೇಸರಿ ಕಲಿಗಳು ಉರುಳಿಸಿರೋ ದಳಪತಿ ದಾಳ.

ಮಂಡ್ಯ ಅಂದ್ರೆ ರಾಜಕೀಯ ರಣರಂಗ. ರಾಜಕಾರಣ ಅಂತ ಬಂದ್ರೆ ಮಂಡ್ಯ ಇಡೀ ಇಂಡಿಯಾದ ಗಮನವನ್ನು ಸೆಳೆದು ಬಿಡೋ ಅಖಾಡ. ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರುವಾಸಿಯಾಗಿರೋ ಮಂಡ್ಯದಲ್ಲಿ ಮತ್ತೊಂದು ಮಹಾಯುದ್ಧಕ್ಕೆ ಸದ್ದಿಲ್ಲದೆ ತಯಾರಿ ನಡೀತಾ ಇದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರೇ ಸ್ಪರ್ಧಿಸ್ಬೇಕು ಅನ್ನೋ ಆಗ್ರಹ ಕೇಳಿ ಬಂದಿದೆ. ಅಂದ ಹಾಗೆ, ದಳಪತಿ ಮುಂದೆ ಈ ಆಫರ್ ಇಟ್ಟಿರೋದು ಜೆಡಿಎಸ್'ನವರಲ್ಲ, ಮೈತ್ರಿ ಪಕ್ಷ ಬಿಜೆಪಿ ನಾಯಕರು. ಯೆಸ್.. ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕರು ಜಿಲ್ಲಾಧ್ಯಕ್ಷ ಸಿ.ಪಿ ಉಮೇಶ್ ನೇತೃತ್ವದಲ್ಲಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಂಡ್ಯದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಈ ಭೇಟಿ ವೇಳೆ ಮಂಡ್ಯ ಬಿಜೆಪಿ ನಾಯಕರು ದಳಪತಿ ಮುಂದೆ ಮಾತನಾಡಿದ್ದೇನು ಅನ್ನೋದನ್ನು ಡೀಟೇಲ್ಲಾಗಿ ತೋರಿಸ್ತೀವಿ ನೋಡಿ.

ಇದನ್ನೂ ವೀಕ್ಷಿಸಿ:  Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ? ಇಂದು ಶನಿದೇವರ, ನಾಗನ ಆರಾಧನೆ ಮಾಡಿ..

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more