ಕಮಲ ಚಿಹ್ನೆಯೂ ಇಲ್ಲ, ನಾಯಕರ ಫೋಟೋಗಳೂ ಇಲ್ಲ! ಬಿಜೆಪಿಗೆ ಗುಡ್‌ಬೈ ಹೇಳ್ತಾರಾ ಆಯನೂರು ಮಂಜುನಾಥ್..?

Mar 23, 2023, 9:30 AM IST

ಶಿವಮೊಗ್ಗದಲ್ಲಿ ಈಶ್ವರಪ್ಪ ವರ್ಸಸ್‌ ಆಯನೂರು ಮಂಜುನಾಥ್‌ ಟಿಕೆಟ್‌ ಫೈಟ್‌ ಜೋರಾಗಿದ್ದು, ಆಯನೂರು ಮಮಜುನಾಥ್‌ ಈಸ್ವರಪ್ಪ ವಿರುದ್ಧ ಫ್ಲೆಕ್ಸ್ ವಾರ್‌ ಶುರು ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇನ್ನು, ಮೊದಲ ಫ್ಲೆಕ್ಸ್‌ನಲ್ಲಿ ಬಿಜೆಪಿ ಚಿಹ್ನೆ, ನಾಯಕರ ಭಾವಚಿತ್ರ ಅಳವಡಿಕೆ ಮಾಡಿದ್ದವರು, ಆದರೆ, 2ನೇ ಫ್ಲೆಕ್ಸ್‌ನಲ್ಲಿ ಬಿಜೆಪಿ ಚಿಹ್ನೆಯೂ ಇಲ್ಲ, ನಾಯಕರ ಚಿತ್ರವನ್ನೂ ಹಾಕಿಲ್ಲ. ಈ ಹಿನ್ನೆಲೆ ಆಯನೂರು ಮಂಜುನಾಥ್‌ ಫ್ಲೆಕ್ಸ್‌ ಸ್ಟ್ರಾಟಜಿ ಏನಿರಬಹುದು.. ಅವರು ಬಿಜೆಪಿಯನ್ನು ಬಿಡುವ ಮುನ್ಸೂಚನೆಯಾ ಎಂಬ ಚರ್ಚೆಗಳು ಸಹ ಶುರುವಾಗಿವೆ.