ಬಿಗಿದಪ್ಪಿಕೊಂಡವರಲ್ಲಿ ಮತ್ತೆ ಶೀತಲ ಸಮರ: ಸಿದ್ದರಾಮೋತ್ಸವಕ್ಕೆ ಟಾಂಗ್ ಕೊಟ್ಟ ಡಿಕೆ ಶಿವಕುಮಾರ!

Sep 16, 2022, 7:04 PM IST

ಬೆಂಗಳೂರು, (ಸೆಪ್ಟೆಂಬರ್.16): ಸಿದ್ದರಾಮೋತ್ಸವದಲ್ಲಿ ತಾವು ಒಂದಾಗಿದ್ದೇವೆ ಎಂದು ಬಿಗಿದಪ್ಪಿಕೊಂಡಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಮತ್ತೆ ಶೀತಲ ಸಮರ ಆರಂಭವಾದಂತೆ ಕಾಣುತ್ತಿದೆ.

ಗೌಪ್ಯ ಪತ್ರದ ಬಗ್ಗೆ ಅಚ್ಚರಿ ಹೇಳಿಕೆ: ಟಿಕೆಟ್‌ ಹಂಚಿಕೆಯಲ್ಲಿ ಸಿದ್ದರಾಮಯ್ಯರನ್ನ ಹೊರಗಿಡ್ತಾರಾ ಡಿಕೆಶಿ?

ಹೌದು....ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಇತ್ತ ಸಿದ್ದರಾಮಯ್ಯ ಮಾತ್ರ ಇದಕ್ಕೂ ನನಗೂ ಸಂಬಂಧವಿಲ್ಲದಂತೆ ಆರಾಮಗಿ ಇದ್ದಾರೆ. ಇನ್ನು ಮತ್ತೊಂದೆಡೆ ಡಿಕೆ ಶಿವಕುಮಾರ್ ಅವರು ಸಿದ್ದರಮೋತ್ಸವಕ್ಕೆ ಟಾಂಗ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ನಡೆಗೆಗೆ ಸಿದ್ದರಾಮೋತ್ಸವ ಹೋಲಿಕೆ ಮಾಡಿ ತಿವಿರಿದ್ದಾರೆ.