Dhruva Narayan: ಭಾರೀ ರೋಚಕವಾಗಿದ್ದ ಧ್ರುವನಾರಾಯಣ ರಾಜಕೀಯ ಜರ್ನಿ..!

Dhruva Narayan: ಭಾರೀ ರೋಚಕವಾಗಿದ್ದ ಧ್ರುವನಾರಾಯಣ ರಾಜಕೀಯ ಜರ್ನಿ..!

Published : Mar 12, 2023, 05:42 PM IST

ಎಲ್ಲ ಪಕ್ಷದ ನಾಯಕರಿಗೆ ಅಚ್ಚುಮೆಚ್ಚಿನ ಲೀಡರ್..!
ಬಿಜೆಪಿ- ಜೆಡಿಎಸ್ ನಾಯಕರಿಂದಲೂ ಸಂತಾಪ..!
ಧ್ರುವನಾರಾಯಣ ನೆನೆದು ಡಿಕೆಶಿ ಭಾವುಕ..!

ಬೆಂಗಳೂರು (ಮಾ.12): ಒಂದು ದಿನದ ಮುಂಚೆ ಬಿಡುವಿಲ್ಲದ ಪ್ರಚಾರ ಮಾಡಿ ಪಕ್ಷಕ್ಕಾಗಿ ಬೆವರಿಳಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ್‌ ಬೆಳಗ್ಗೆ ಏಳುತ್ತಲೇ ವಿಧಿವಶ ಆಗಿದ್ದಾರೆ. ಒಂದು ವೋಟಿನ ಗೆಲುವಿನ ದಾಖಲೆ ಬರೆದಿದ್ದ ಹಸನ್ಮುಖಿ ನಾಯಕ ಕಣ್ಮರೆ ಆಗಿದ್ದು, ಅವರ ರಾಜಕೀಯ ಜರ್ನಿ ಭಾರೀ ರೋಚಕವಾಗಿದೆ.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕಾರ್ಯಾಧ್ಯಕ್ಷ ಧ್ರುವಾನಾರಯಣ ಅವರ ಕಾರ್ಯವೈಖರಿಗೆ ಮೆಚ್ಚಿದ್ದರು. ಹಳೇ ಮೈಸೂರು ಪ್ರಾಂತ್ಯದ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಧ್ರುವ ನಾರಾಯಣ ಅವರ ಕಾರ್ಯವೈಖರಿಯನ್ನು ನೆನೆದು ಡಿ.ಕೆ ಶಿವಕುಮಾರ್‌ ಗಳಗಳನೆ ಕಣ್ಣೀರು ಸುರಿಸಿ ಅತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ‘ಧ್ರುವ’ತಾರೆ ಧ್ರುವನಾರಾಯಣ್‌ ಮರೆಯಾಗಿದ್ದಾರೆ ಎಂಬ ಕಂಬನಿ ಎಲ್ಲ ಪಕ್ಷಗಳ ನಾಯಕರಿಂದಲೂ ಕೇಳಿಬಂದಿದೆ.

ಧ್ರುವನಾರಾಯಣ ಅಂತ್ಯಕ್ರಿಯೆ ಮುನ್ನ ಪುತ್ರನಿಗೆ ಕೈ ಟಿಕೆಟ್‌ ಘೋಷಿಸಿ: ಕಾಂಗ್ರೆಸ್‌ಗೆ ಪೀಕಲಾಟ

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಮಾಜಿ ಸಂಸದ ಧ್ರವ ನಾರಾಯಣ್‌ ಇನ್ನು ನೆನಪು ಮಾತ್ರ. ಹಠಾತ್ ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ರಾಜಕಾರಣದಲ್ಲಿ ಅತ್ಯಂತ ಸಜ್ಜನ ಹಾಗೂ ಸರಳ ರಾಜಕಾರಣಿ ಅಂತಲೇ ಗುರುತಿಸಿಕೊಂಡಿದ್ದ ಧ್ರುವನಾರಾಯಣ್ ಅಕಾಲಿಕ ನಿಧನ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಆಘಾತ ತಂದಿದೆ. ಮರೆಯಾದ ಧೃವ ತಾರೆಯನ್ನು ನೆನೆದು ಎಲ್ಲಾ ಪಕ್ಷದ ನಾಯರು ಕಂಬನಿ ಮಿಡಿದಿದ್ದಾರೆ. ಹಾಗಾದ್ರೆ ಬನ್ನಿ ಅಗಲಿದ ಧೃವ ತಾರೆಯ ರಾಜಕೀಯ ಹಾದಿ ಹೇಗಿತ್ತು ಎನ್ನುವ ಮಾಹಿತಿ ಇಲ್ಲಿದೆ. ಧೃವ ನಾರಾಯಣ್ ಅವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದರು. ಕೇವಲ ಒಂದೇ ಒಂದು ಮತದಿಂದ ರೋಚಕವಾಗಿ ಗೆದ್ದು, ದೇಶದಾದ್ಯಂತ  ಸುದ್ದಿಯಾಗಿದ್ದರು. 

22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
Read more