ಸಿಂ'ಹಾಸನ'ಕಗ್ಗಂಟು.. ಮೂವರ ನಡುವೆ ಕಿತ್ತಾಟ,ದೊಡ್ಡಗೌಡ್ರ ಒಲವು ಯಾರ ಪರ...?

Mar 29, 2023, 9:57 AM IST

ರಾಜ್ಯ ವಿಧಾನಸಭಾ ಚುನಾವಣೆಗೆ  ಭರ್ಜರಿ ತಯಾರಿ ನಡೆಸುತ್ತಿರುವ ದಳಪತಿಗಳು ಈಗಾಗಲೇ 93 ಅಭ್ಯರ್ಥಿಗಳನ್ನ ಅಂತಿಮಗೊಳಿಸಿದ್ದಾರೆ. ಆದರೆ ಹಾಸನ ವಿಧಾನಸಭಾ ಕ್ಷೇತ್ರವೇ ದೊಡ್ಡ ಕಗ್ಗಂಟಾಗಿದೆ.  ಈ ಕುರಿತು  ಸ್ವರೂಪ್‌ ಮಾತನಾಡಿದ್ದು  ಹಾಸನ ಟಿಕೆಟ್‌ ವಿಚಾರದಲ್ಲಿ ಯಾವ ಗೊಂದಲ ಇಲ್ಲವಾಗಿದ್ದು, ಭವಾನಿ ರೇವಣ್ಣ ಅಲ್ಲ ಯಾರಿಗೆ ಟಿಕೆಟ್‌ ಕೊಟ್ರೂ ಓಕೆ  ಎಂದಿದ್ದಾರೆ. ಇನ್ನು ಹಾಸನದಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು  ಗೆಲ್ಲಿಸಿಕೊಂಡು ಬರುತ್ತೇವೆ.  ರೇವಣ್ಣ, ಕುಮರಸ್ವಾಮಿ ಅವರನ್ನು ಬೇಟಿ ಮಾಡಿದ್ದೇನೆ ಎಂದು ಹೇಳಿದರು.ಇನ್ನು  ಟಿಕೆಟ್‌ ನನಗೆ ಸಿಗುತ್ತೆ ಎಂದು ಹೇಳಲ್ಲ ಯಾರಿಗೇ ಕೊಟ್ಟರು ಓಕೆ  ಎಂದು ತಿಳಿಸಿದ್ದಾರೆ.