'ಗೌಡರ' ಪಾಳೇಪಟ್ಟು ಗೆಲ್ಲಲು ಕೇಸರಿ ರೋಚಕವ್ಯೂಹ: ಚಾಣಕ್ಯನ ದಂಡಯಾತ್ರೆಯ ತಂತ್ರವೇನು?

Dec 31, 2022, 4:36 PM IST

ಕಬ್ಬಿಣದ ಕಡಲೆ, ಕೆಡವಲಾಗದ ಕೋಟೆ, ಭೇದಿಸಲಾಗದ ಚಕ್ರವ್ಯೂಹ. ಇಂಡಿಯಾ ಗೆದ್ದ ಬಿಜೆಪಿಗೆ ಗೌಡರ ಪಾಳೇಪಟ್ಟು ಮಂಡ್ಯ ಇನ್ನೂ ಒಗಟಾಗಿಯೇ ಇದೆ. ಇಡೀ ಇಂಡಿಯಾದಲ್ಲೇ ವಿಜಯ ಪತಾಕೆ ಹಾರಿಸಿರೋ ಕೇಸರಿ ಪಕ್ಷಕ್ಕೆ ಮಂಡ್ಯವನ್ನು ಗೆಲ್ಲಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಆದ್ರೆ ಈ ಬಾರಿ ಚರಿತ್ರೆ ಬರೆದೇ ಸಿದ್ಧ ಅಂತ ಸಕ್ಕರೆ ನಾಡಿಗೆ ಎಂಟ್ರಿ ಕೊಟ್ಟಿದೆ ಕೇಸರಿ ಸೈನೆ. ಸ್ವತಃ ಚಾಣಕ್ಯ ಅಮಿತ್ ಶಾ ಅವರೇ ಗೌಡರ ಕೋಟೆಯಲ್ಲಿ ಕೇಸರಿ ರಣಕಹಳೆ ಮೊಳಗಿಸಿದ್ದಾರೆ. ಅಷ್ಟಕ್ಕೂ ಒಕ್ಕಲಿಗ ಕೋಟೆಯ ಬೇಟೆಗೆ ಹೇಗಿದೆ ಕೇಸರಿ ಚಾಣಕ್ಯನ ರಣವ್ಯೂಹ...? ಗೌಡರ ಒಡ್ಡೋಲಗದಲ್ಲಿ ನಿಂತು ಬಿಜೆಪಿಗೆ ಅಮಿತ್ ಶಾ ಹೇಳಿದ ವಿಜಯಮಂತ್ರದ ರಹಸ್ಯದ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಅಮಿತ್‌ ಶಾ ಭೇಟಿಯಾಗಲು ಸಿಎಂ ಜೊತೆ ಜಾರಕಿಹೊಳಿ: ಸಂಪುಟ ಸೇರಲು ಕಸರತ್ತು