ಒಕ್ಕಲಿಗರ ಪ್ರಬಲ ನಾಯಕನಾಗಲು ಡಿಕೆಶಿ ಪ್ಲಾನ್: ಕನಕಪುರ ತೊರೆದು ಮದ್ದೂರಿನಿಂದ ಸ್ಪರ್ಧೆ?

Jan 23, 2023, 11:21 AM IST

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಬಾರಿಯ ಎಲೆಕ್ಷನ್'ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕನಕಪುರದಿಂದ ಸ್ಪರ್ಧಿಸೋದಿಲ್ವಾ ಎಂಬ ಪ್ರಶ್ನೆ ಮೂಡಿದೆ. ಕನಕಪುರವನ್ನು ಕುಟುಂಬದವರಿಗೆ ಬಿಟ್ಟುಕೊಟ್ಟು ಮಂಡ್ಯ ಜಿಲ್ಲೆ ಮದ್ದೂರಿನಿಂದ ಡಿಕೆಶಿ ಸ್ಪರ್ಧೆ ಮಾಡ್ತಾರಾ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಮದ್ದೂರಿನಿಂದ ಸ್ಪರ್ಧೆ ಮಾಡುವ ಮೂಲಕ ಒಕ್ಕಲಿಗರ ಪ್ರಬಲ ನಾಯಕರಾಗೋದಕ್ಕೆ ಪ್ಲಾನ್ ಮಾಡಿದ್ದಾರಾ ಡಿಕೆಶಿ ?. ಅವರು ಕನಕಪುರ ಬಿಟ್ಟು ಮದ್ದೂರಿಗೆ ಹೋಗಿ ಸ್ಪರ್ಧಿಸಿದ್ದೇ ಆದ್ರೆ, ಅದರಿಂದ ಡಿಕೆಶಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಯಾವೆಲ್ಲ ಲಾಭ-ನಷ್ಟಗಳು ಆಗಲಿವೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.