ಬಿಜೆಪಿಯಲ್ಲಿ ಗಟ್ಟಿ ನಿರ್ಧಾರದ ನಾಯಕರು ಇಲ್ಲ, ಸ್ಥಳೀಯವಾಗಿ ಗ್ರೌಂಡ್ ರಿಪೋರ್ಟ್‌ ತಗೊಳ್ತಾಯಿಲ್ಲ: ಕರಡಿ ಸಂಗಣ್ಣ

ಬಿಜೆಪಿಯಲ್ಲಿ ಗಟ್ಟಿ ನಿರ್ಧಾರದ ನಾಯಕರು ಇಲ್ಲ, ಸ್ಥಳೀಯವಾಗಿ ಗ್ರೌಂಡ್ ರಿಪೋರ್ಟ್‌ ತಗೊಳ್ತಾಯಿಲ್ಲ: ಕರಡಿ ಸಂಗಣ್ಣ

Published : Jun 05, 2024, 03:40 PM IST

ಹೈಕಮಾಂಡ್ ನಾಯಕರ ತೀರ್ಮಾನ ಮತ್ತು ಟಿಕೆಟ್ ಬದಲಾವಣೆ ಬಗ್ಗೆ ವಿಶ್ಲೇಷಣೆಗೆ ಹೋಗಲ್ಲ ಎಂದು ಕೊಪ್ಪಳದಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ ಹೇಳಿದ್ದಾರೆ.  

ಕೊಪ್ಪಳ: ಬಿಜೆಪಿಯಲ್ಲಿ ಗಟ್ಟಿ ನಿರ್ಧಾರದ ನಾಯಕರು ಇಲ್ಲ. ಸ್ಥಳೀಯವಾಗಿ ಗ್ರೌಂಡ್ ರಿಪೋರ್ಟ್‌ ತಗೊಳ್ತಾಯಿಲ್ಲ. ಎಲ್ಲವನ್ನೂ ಹೈಕಮಾಂಡ್‌ಗೆ ಬಿಡ್ತಾಯಿದ್ದಾರೆ. ನನಗೆ ಟಿಕೆಟ್ ಬದಲಾವಣೆ ಮಾಡಿದವರಿಗೆ ಇದು ಅರ್ಥವಾಗಿದೆ ಎಂದು ಕೊಪ್ಪಳದಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ(Karadi Sanganna) ಹೇಳಿದ್ದಾರೆ. ಕೊಪ್ಪಳದಲ್ಲಿ(Koppal) ಬಿಜೆಪಿ(BJP) ಸೋಲಿನಿಂದ ಅವರಿಗೆ ಏನು ಅರ್ಥವಾಗಬೇಕು ಅದು ಅರ್ಥವಾಗಿದೆ. ಮತದಾರರ ತೀರ್ಪಿಗೆ ತಲೆಬಾಗಲೇಬೇಕು. ಹೈಕಮಾಂಡ್ ನಾಯಕರ ತೀರ್ಮಾನ ಮತ್ತು ಟಿಕೆಟ್(Ticket) ಬದಲಾವಣೆ ಬಗ್ಗೆ ವಿಶ್ಲೇಷಣೆಗೆ ಹೋಗಲ್ಲ. ಮೊದಲಿನಂತೆ ಮೋದಿ ಅವರು ಈ ಬಾರಿ ಅಧಿಕಾರ ನಡೆಸಲು ಆಗಲ್ಲ. ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡುರನ್ನು ಕಟ್ಟಿಕೊಂಡೇ ಹೋಗಬೇಕು. ಸಾರ್ವಭೌಮತ್ವ ಅಧಿಕಾರ ನಡೆಸಲು ಆಗಲ್ಲ. ಏನು ಮಾಡಿದ್ರು ನಡೆಯುತ್ತೆ ಅನ್ನೋದು ಈ ಬಾರಿ ನಡೆಯಲ್ಲ. ರಾಜ್ಯದಲ್ಲಿ ಮತದಾರರ ತೀರ್ಪಿನ ಮೇಲೆ ಫಲಿತಾಂಶವಿದೆ. ನಾನು ಯಾವುದೇ ಸ್ಥಾನದ ಬೇಡಿಕೆ ಇಟ್ಟು ಕಾಂಗ್ರೆಸ್ ಸೇರಿಲ್ಲ. ಆದ್ರೆ ಸ್ಥಾನಮಾನ ನೀಡೋದು ಹೈಕಮಾಂಡ್ ನಾಯಕರಿಗೆ ಬಿಟ್ಟದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ನನ್ನು ಕರಡಿ ಸಂಗಣ್ಣ ಸೇರಿದ್ದರು. 

ಇದನ್ನೂ ವೀಕ್ಷಿಸಿ:  ಜೂ. 8ಕ್ಕೆ ಮೋದಿ ಪ್ರಮಾಣವಚನ ? ಎನ್‌ಡಿಎಗೆ ನಮ್ಮ ಬೆಂಬಲ ಎಂದ ಚಿರಾಗ್ ಪಾಸ್ವಾನ್

21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more