ಮೈಸೂರು ಮೇಯರ್ ವಿವಾದಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೂಚನೆಯಂತೆ ಮೈತ್ರಿ ನಡೆದಿದೆ ಎಂದು ಜೆಡಿಎಸ್ ಶಾಸಕ ಸಾರಾ ಮಹೇಶ್ ಹೇಳಿದ್ದಾರೆ.
ಬೆಂಗಳೂರು (ಫೆ. 28): ಮೈಸೂರು ಮೇಯರ್ ವಿವಾದಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೂಚನೆಯಂತೆ ಮೈತ್ರಿ ನಡೆದಿದೆ ಎಂದು ಜೆಡಿಎಸ್ ಶಾಸಕ ಸಾರಾ ಮಹೇಶ್ ಹೇಳಿದ್ದಾರೆ.
ನಾವು ಸ್ವಂತಂತ್ರವಾಗಿ ಗೆಲ್ಲುತ್ತೇವೆ ಅಂತಲೇ ರೆಡಿಯಾಗಿದ್ದೆವು. ಜಿಟಿಡಿ, ಸಂದೇಶ್ ನಾಗರಾಜ್ ಬರಲ್ಲ ಎಂದಿದ್ದರು. ಮೇಯರ್ ನಮಗೆ, ಉಪಮೇಯರ್ ಕಾಂಗ್ರೆಸ್ ಗೆ ಅಂತ ನಿರ್ಧರಿಸಿದೆವು. ಇದ್ಯಾವುದೂ ಪೂರ್ವ ನಿರ್ಧರಿತವಲ್ಲ' ಎಂದು ಸಾರಾ ಮಹೇಶ್ ಹೇಳಿದ್ದಾರೆ.