ಕುಟುಂಬ ರಾಜಕಾರಣ ಕಳಂಕ ಮುಕ್ತಿಗೆ ಮುಂದಾದ ದಳಪತಿ: ನಮ್ಮ ಕುಟುಂಬದಿಂದ ಯಾರು ನಿಲ್ಲಲ್ಲ ಎಂದ ಹೆಚ್‌ಡಿಕೆ

Jul 16, 2023, 11:58 AM IST

ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣವಿದೆ(family politics) ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಈ ಆರೋಪದಿಂದ ಮುಕ್ತರಾಗಲು ಈಗ ದಳಪತಿ ಮುಂದಾಗಿದ್ದಾರೆ. ಹಾಲಿ ಸಂಸದ ಪ್ರಜ್ವಲ್‌ ರೇವಣ್ಣಗೆ( Prajwal Revanna) ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗ್ತಿದೆ. ಅಷ್ಟೇ ಅಲ್ಲದೇ ನಿಖಿಲ್‌ ಕುಮಾರಸ್ವಾಮಿ, ಭವಾನಿಗೂ ಟಿಕೆಟ್‌ ಇಲ್ಲ ಎನ್ನಲಾಗ್ತಿದೆ. ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟು ಅವರನ್ನೇ ಗೆಲ್ಲಿಸಲು ಜೆಡಿಎಸ್‌ (JDS)ತೀರ್ಮಾನಿಸಿದೆ. ಪಕ್ಷದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ. ನಾನು ಕೂಡ ಸ್ಪರ್ಧೆ ಮಾಡಲ್ಲ ಎಂದು ಅವರು ಹೇಳಿದ್ದಾರೆ. ಈ ಮೂಲಕ ಲೋಕ ಸಮರಕ್ಕೆ ಕುಮಾರಸ್ವಾಮಿ ಹೊಸ ಸೂತ್ರವೊಂದನ್ನು ಹೆಣೆದಿದ್ದಾರೆ.

ಇದನ್ನೂ ವೀಕ್ಷಿಸಿ:  ಬಸ್‌ ಸರಿಯಿಲ್ಲ.. ರಿಪೇರಿ ಮಾಡಿ ಕೊಡಿ ಎಂದ ಚಾಲಕ: ಇದಕ್ಕೆ ಮ್ಯಾನೇಜರ್ ಹೇಳಿದ್ದೇನು ..?