ಕರ್ನಾಟಕಕ್ಕೂ ಅನ್ವಯವಾಗುತ್ತಾ ಗುಜರಾತ್ ವಿಜಯ ಮಂತ್ರ?

ಕರ್ನಾಟಕಕ್ಕೂ ಅನ್ವಯವಾಗುತ್ತಾ ಗುಜರಾತ್ ವಿಜಯ ಮಂತ್ರ?

Published : Dec 09, 2022, 08:57 PM IST

ಗುಜರಾತ್‌ನಲ್ಲಿ ಬಿಜೆಪಿ ಸಾಧಿಸಿರುವ ವಿಜಯ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸಾಧಿಸಿದ ವಿಜಯ, ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲ, ರಾಜ್ಯದಲ್ಲಿನ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಲ್ಲೂ ತಲ್ಲಣ ಸೃಷ್ಟಿಸಿದೆ. ಮೋದಿ ಹಾಗೂ ಯೋಗಿ ನಾಡಲ್ಲಿ ಕೈಹಿಡಿದ ಟಿಕೆಟ್‌ ಸೂತ್ರ ರಾಜ್ಯದಲ್ಲೂ ಜಾರಿಯಾಗಬಹುದಾ ಎನ್ನುವ ಅಚ್ಚರಿಯಲ್ಲಿ ನಾಯಕರಿದ್ದಾರೆ.

ಬೆಂಗಳೂರು (ಡಿ.9): ಗುಜರಾತಲ್ಲಿ ಮೋದಿ ಸುನಾಮಿಗೆ ಕರ್ನಾಟಕದ ಕೇಸರಿ ಕೋಟೆಯಲ್ಲಿ ಮಹಾ ತಲ್ಲಣಗೊಂಡಿದೆ. ಇನ್ನೊಂದೆಡೆ ಹಿಮಾಚಲದಲ್ಲಿ ಕಾಂಗ್ರೆಸ್ ಕಮಾಲ್  ಮಾಡಿದ್ದು, ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನ ಸೃಷ್ಟಿಸಿದೆ.  ಉತ್ತರ, ಪಶ್ಚಿಮದಲ್ಲಿ ಬೀಸಿದ ಸುನಾಮಿಗೆ ಕರ್ನಾಟಕದ ಕೈ-ಕೇಸರಿ ಕಲಿಗಳು ಬೆಚ್ಚಿ ಬಿದ್ದಿದ್ದಾರೆ. ಬಿಜೆಪಿ, ಕಾಂಗ್ರೆಸ್‌ಗೆ ಗುಜರಾತ್, ಹಿಮಾಚಲದ ಫಲಿತಾಂಶ ಕಲಿಸಿದ ಪಾಠಗಳು ಹಾಗಿವೆ. ಯೋಗಿಗಳ ನಾಡು ಮೋದಿ ನಾಡಲ್ಲಿ ಕೈ ಹಿಡಿದ ಬಿಜೆಪಿ ಟಿಕೆಟ್ ಸೂತ್ರ, ಕರ್ನಾಟಕದಲ್ಲೂ ಜಾರಿಯಾಗುತ್ತಾ ಅನ್ನೋ ಕುತೂಹಲ ಎಲ್ಲರಲ್ಲಿದೆ.

ಗುಜರಾತ್'ನಲ್ಲಿ ಎದ್ದ ಮೋದಿ ಅಲೆಯಿಂದ ಕರ್ನಾಟಕವನ್ನು ಗೆಲ್ಲುತ್ತೇವೆ ಅಂತ ಹೊರಟಿರೋ ಕೇಸರಿ ಕಲಿಗಳಿಗೆ ಹಿಮಾಚಲ ಪ್ರದೇಶ ಫಲಿತಾಂಶ ಕಲಿಸಿದ ಪಾಠ ಎಂಥದ್ದು ಅನ್ನೋದನ್ನು ಅರ್ಥಮಾಡಿಕೊಳ್ಳಬೇಕು.  ಗುಜರಾತ್'ನಲ್ಲಿ 38 ಮಂದಿ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಇದೇ ವಿಚಾರ ಈಗ ರಾಜ್ಯ ತಾಯಕರ ತಲೆಬಿಸಿಕೆ ಕಾರಣವಾಗಿದೆ.

ಬಿಜೆಪಿಯ 'ಡಬಲ್ ಎಂಜಿನ್' ಮಂತ್ರ: ಇದು ಗುಜರಾತ್ ಗೆಲುವಿನ ರಹಸ್ಯ

ಅಲ್ಲಿಯ ವಿಕ್ಟರಿ, ಇಲ್ಲಿ ಗಾಬರಿ ಮೂಡಿಸಿದೆ. ಗುಜರಾತ್'ನಲ್ಲಿ ಬಿಜೆಪಿ ಗೆದ್ದದ್ದಕ್ಕೆ ಇಲ್ಲಿ ಸಂಭ್ರಮಿಸ್ತಾ ಇರೋ ಕೇಸರಿ ಕಲಿಗಳಿಗೆ ಇಲ್ಲೂ ಗುಜರಾತ್ ಸೂತ್ರ ಜಾರಿಯಾಗುವ ಆತಂಕ ಒಳಗೊಳಗೇ ಕಾಡುತ್ತಿದೆ.  ಗುಜರಾತ್'ನಲ್ಲಿ ಬಿಜೆಪಿ ಸಾಧಿಸಿದ ಪ್ರಚಂಡ ಗೆಲುವು ಕರ್ನಾಟಕದಲ್ಲಿ ಕಾಂಗ್ರೆಸ್'ಗೆ ಪಾಠವಾದ್ರೆ, ಕೆಲ ಬಿಜೆಪಿ ಶಾಸಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.

21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
Read more