ಲೋಕಸಭೆ ಗೆಲ್ಲೋಕೆ ಜೆಡಿಎಸ್ ಶಕ್ತಿಪ್ರದರ್ಶನ: ವಿಜಯಪುರದಲ್ಲಿ ‘ಪುನರ್‌ಚೇತನ ಪರ್ವ’ ಸಂಭ್ರಮ

ಲೋಕಸಭೆ ಗೆಲ್ಲೋಕೆ ಜೆಡಿಎಸ್ ಶಕ್ತಿಪ್ರದರ್ಶನ: ವಿಜಯಪುರದಲ್ಲಿ ‘ಪುನರ್‌ಚೇತನ ಪರ್ವ’ ಸಂಭ್ರಮ

Published : Oct 12, 2023, 10:40 AM IST

ವಿಜಯಪುರದಲ್ಲಿ ಲೋಕಸಭೆ ಫೈಟ್ ಜೋರಾಗಿದೆ. ಬಿಜೆಪಿ,ಜೆಡಿಎಸ್‌ನಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ ಎಂಬ ಕುತೂಹಲ ಹೆಚ್ಚಾಗಿದೆ. ಇದರ ಭಾಗವಾಗಿಯೇ ಜೆಡಿಎಸ್ ನಾಯಕರು ಅದ್ಧೂರಿ ಕಾರ್ಯಕ್ರಮದ ಮೂಲಕ ಕಾರ್ಯಕರ್ತರ ಹುರಿದುಂಬಿಸಿದ್ರೆ..ಇತ್ತ ಹಾಲಿ ಸಂಸದರು ಸೇರಿ ಬಿಜೆಪಿ ನಾಯಕರಿಗೆ ಢವಢವ ಶುರುವಾಗಿದೆ.

ಲೋಕಸಭಾ ಎಲೆಕ್ಷನ್‌ಗೆ ಕೆಲವೇ ತಿಂಗಳು ಬಾಕಿ ಇದೆ. ಈಗಾಗಲೇ ಬಿಜೆಪಿ(BJP), ಜೆಡಿಎಸ್(JDS) ದೋಸ್ತಿನೂ ಆಗೋಗಿದೆ. ಇದರ ಭಾಗವಾಗಿ ವಿಜಯಪುರದಲ್ಲಿ(Vijayapura) ಪುನರ್‌ಚೇತನ ಕಾರ್ಯಕ್ರಮದ ಮೂಲಕ  ಜೆಡಿಎಸ್ ನಾಯಕರು ಶಕ್ತಿಪ್ರದರ್ಶನ ಮಾಡಿದ್ದಾರೆ. ನಗರದ ಸಿದ್ದೇಶ್ವರ ದೇಗುಲದಿಂದ ರಾಣಿಚೆನ್ನಮ್ಮ ಹಾಲ್‌ವರೆಗೂ ಜೆಡಿಎಸ್‌ ಕಾರ್ಯಕರ್ತರು ಮೆರವಣಿಗೆ ಮಾಡಿ ಬೃಹತ್ ಸಮಾವೇಶ ನಡೆಸಿದ್ರು. ಶಾಸಕ ಜಿ.ಟಿ. ದೇವೇಗೌಡ, ಮಾಜಿ ಶಾಸಕ ವೈಎಸ್‌ವಿ ದತ್ತ, ಬಂಡೆಪ್ಪ ಕಾಶಂಪೂರ್ ಸೇರಿ ಹಲವರು ಭಾಗಿಯಾಗಿದ್ರು. ಈ ವೇಳೆ ಜೆಡಿಎಸ್ ನಾಯಕರು ಲೋಕಸಭೆ ಎಲೆಕ್ಷನ್‌ಗೆ ಸಿದ್ಧರಾಗಿ ಅಂತಾ ಕಾರ್ಯಕರ್ತರ ಹುರಿದುಂಬಿಸೋ ಜೊತೆಗೆ ವಿಜಯಪುರದಲ್ಲಿ ಯಾರಿಗೆ ಟಿಕೆಟ್(Ticket) ಕೊಟ್ರು ಕೆಲಸ ಮಾಡುವಂತೆ ಮನವಿ ಮಾಡಿದ್ರು. ಲೋಕಸಭೆ ಎಲೆಕ್ಷನ್‌ ಹತ್ತಿರ ಇರುವಾಗ್ಲೆ ಜೆಡಿಎಸ್ ಶಕ್ತಿಪ್ರದರ್ಶನ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಲ್ಲಿ ನಡುಕ ಹುಟ್ಟಿಸಿದೆ. ಅದರಲ್ಲೂ ಹಾಲಿ ಸಂಸದ ಜಿಗಜಿಣಗಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ರೆ..ಇತ್ತ ಮಾಜಿ ಇನ್ಸ್ಪೆಕ್ಟರ್‌ ಮಹೇಂದ್ರ ನಾಯಕ್‌, ವೈದ್ಯ ಬಾಬುರಾಜೇಂದ್ರ ನಾಯಕ್‌ ಸಹ ಬಿಜೆಪಿ ಟಿಕೆಟ್‌ ರೇಸ್ನಲ್ಲಿದ್ದಾರೆ. ಇದರ ಮಧ್ಯೆ ದೇವರಹಿಪ್ಪರಗಿ ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ್ ನಾವೂ ಟಿಕೆಟ್ ಕೇಳ್ತೀವಿ ಎನ್ನುವ ಮೂಲಕ ಕದನ ಕಣ ಕಿಕ್ಕೇರಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಕಿಚ್ಚನ 'ಮ್ಯಾಕ್ಸ್' ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್: ಸಿನಿಮಾ ರಿಲೀಸ್‌ಗೆ ನಡೆದಿದೆ ದೊಡ್ಡ ಪ್ಲ್ಯಾನ್ !

21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more