ಲೋಕಸಭೆ ಗೆಲ್ಲೋಕೆ ಜೆಡಿಎಸ್ ಶಕ್ತಿಪ್ರದರ್ಶನ: ವಿಜಯಪುರದಲ್ಲಿ ‘ಪುನರ್‌ಚೇತನ ಪರ್ವ’ ಸಂಭ್ರಮ

ಲೋಕಸಭೆ ಗೆಲ್ಲೋಕೆ ಜೆಡಿಎಸ್ ಶಕ್ತಿಪ್ರದರ್ಶನ: ವಿಜಯಪುರದಲ್ಲಿ ‘ಪುನರ್‌ಚೇತನ ಪರ್ವ’ ಸಂಭ್ರಮ

Published : Oct 12, 2023, 10:40 AM IST

ವಿಜಯಪುರದಲ್ಲಿ ಲೋಕಸಭೆ ಫೈಟ್ ಜೋರಾಗಿದೆ. ಬಿಜೆಪಿ,ಜೆಡಿಎಸ್‌ನಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ ಎಂಬ ಕುತೂಹಲ ಹೆಚ್ಚಾಗಿದೆ. ಇದರ ಭಾಗವಾಗಿಯೇ ಜೆಡಿಎಸ್ ನಾಯಕರು ಅದ್ಧೂರಿ ಕಾರ್ಯಕ್ರಮದ ಮೂಲಕ ಕಾರ್ಯಕರ್ತರ ಹುರಿದುಂಬಿಸಿದ್ರೆ..ಇತ್ತ ಹಾಲಿ ಸಂಸದರು ಸೇರಿ ಬಿಜೆಪಿ ನಾಯಕರಿಗೆ ಢವಢವ ಶುರುವಾಗಿದೆ.

ಲೋಕಸಭಾ ಎಲೆಕ್ಷನ್‌ಗೆ ಕೆಲವೇ ತಿಂಗಳು ಬಾಕಿ ಇದೆ. ಈಗಾಗಲೇ ಬಿಜೆಪಿ(BJP), ಜೆಡಿಎಸ್(JDS) ದೋಸ್ತಿನೂ ಆಗೋಗಿದೆ. ಇದರ ಭಾಗವಾಗಿ ವಿಜಯಪುರದಲ್ಲಿ(Vijayapura) ಪುನರ್‌ಚೇತನ ಕಾರ್ಯಕ್ರಮದ ಮೂಲಕ  ಜೆಡಿಎಸ್ ನಾಯಕರು ಶಕ್ತಿಪ್ರದರ್ಶನ ಮಾಡಿದ್ದಾರೆ. ನಗರದ ಸಿದ್ದೇಶ್ವರ ದೇಗುಲದಿಂದ ರಾಣಿಚೆನ್ನಮ್ಮ ಹಾಲ್‌ವರೆಗೂ ಜೆಡಿಎಸ್‌ ಕಾರ್ಯಕರ್ತರು ಮೆರವಣಿಗೆ ಮಾಡಿ ಬೃಹತ್ ಸಮಾವೇಶ ನಡೆಸಿದ್ರು. ಶಾಸಕ ಜಿ.ಟಿ. ದೇವೇಗೌಡ, ಮಾಜಿ ಶಾಸಕ ವೈಎಸ್‌ವಿ ದತ್ತ, ಬಂಡೆಪ್ಪ ಕಾಶಂಪೂರ್ ಸೇರಿ ಹಲವರು ಭಾಗಿಯಾಗಿದ್ರು. ಈ ವೇಳೆ ಜೆಡಿಎಸ್ ನಾಯಕರು ಲೋಕಸಭೆ ಎಲೆಕ್ಷನ್‌ಗೆ ಸಿದ್ಧರಾಗಿ ಅಂತಾ ಕಾರ್ಯಕರ್ತರ ಹುರಿದುಂಬಿಸೋ ಜೊತೆಗೆ ವಿಜಯಪುರದಲ್ಲಿ ಯಾರಿಗೆ ಟಿಕೆಟ್(Ticket) ಕೊಟ್ರು ಕೆಲಸ ಮಾಡುವಂತೆ ಮನವಿ ಮಾಡಿದ್ರು. ಲೋಕಸಭೆ ಎಲೆಕ್ಷನ್‌ ಹತ್ತಿರ ಇರುವಾಗ್ಲೆ ಜೆಡಿಎಸ್ ಶಕ್ತಿಪ್ರದರ್ಶನ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಲ್ಲಿ ನಡುಕ ಹುಟ್ಟಿಸಿದೆ. ಅದರಲ್ಲೂ ಹಾಲಿ ಸಂಸದ ಜಿಗಜಿಣಗಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ರೆ..ಇತ್ತ ಮಾಜಿ ಇನ್ಸ್ಪೆಕ್ಟರ್‌ ಮಹೇಂದ್ರ ನಾಯಕ್‌, ವೈದ್ಯ ಬಾಬುರಾಜೇಂದ್ರ ನಾಯಕ್‌ ಸಹ ಬಿಜೆಪಿ ಟಿಕೆಟ್‌ ರೇಸ್ನಲ್ಲಿದ್ದಾರೆ. ಇದರ ಮಧ್ಯೆ ದೇವರಹಿಪ್ಪರಗಿ ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ್ ನಾವೂ ಟಿಕೆಟ್ ಕೇಳ್ತೀವಿ ಎನ್ನುವ ಮೂಲಕ ಕದನ ಕಣ ಕಿಕ್ಕೇರಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಕಿಚ್ಚನ 'ಮ್ಯಾಕ್ಸ್' ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್: ಸಿನಿಮಾ ರಿಲೀಸ್‌ಗೆ ನಡೆದಿದೆ ದೊಡ್ಡ ಪ್ಲ್ಯಾನ್ !

22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
Read more