ಅಜಿತ್ ಪವಾರ್ ಎಂಟ್ರಿ..ಶಿಂಧೆ ಬಣಕ್ಕೆ ಭೀತಿ: ಮೋದಿ ಭೇಟಿ ಮಾಡಿದ ಏಕನಾಥ್‌ ಶಿಂಧೆ !

ಅಜಿತ್ ಪವಾರ್ ಎಂಟ್ರಿ..ಶಿಂಧೆ ಬಣಕ್ಕೆ ಭೀತಿ: ಮೋದಿ ಭೇಟಿ ಮಾಡಿದ ಏಕನಾಥ್‌ ಶಿಂಧೆ !

Published : Aug 14, 2023, 12:01 PM IST

ಗೆಲ್ಲುವವರಿಗೆ ಮಾತ್ರ ಟಿಕೆಟ್ ಕೊಡುತ್ತೇವೆ ಅಂದರೆ ಏನು ಮಾಡುವುದು? 
ವಾಪಸ್ ಉದ್ಧವ್ ಠಾಕ್ರೆ ಬಳಿ ಹೋಗುವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ
ರಾಜಕೀಯ ತೊಳಲಾಟದ ನಡುವೆ ಪ್ರಧಾನಿಯನ್ನೇ ಭೇಟಿ ಮಾಡಿದ ಶಿಂಧೆ

ಅಜಿತ್ ಪವಾರ್ ಡಿಸಿಎಂ ಹುದ್ದೆ ಏರಿದ ಬಳಿಕ ಶಿಂಧೆ ಬಣಕ್ಕೆ ಟೆನ್ಷನ್ ಶುರುವಾದಂತೆ ಕಾಣುತ್ತಿದೆ. ಹೀಗಾಗಿ ಏಕನಾಥ್‌ ಶಿಂಧೆ(Eknath Shinde) ನೇರವಾಗಿ ಪ್ರಧಾನಿ ಮೋದಿಯನ್ನೇ(Modi) ಭೇಟಿ ಮಾಡಿದ್ದಾರೆ. ಫಡ್ನವೀಸ್, ಅಮಿತ್ ಶಾ(Amit Shah) ಬಿಟ್ಟು ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮೋದಿ ಮುಂದೆ ತಮ್ಮ ಮನದ ಬೇಗುದಿಯನ್ನು ಏಕನಾಥ್ ಶಿಂಧೆ ಹೇಳಿಕೊಂಡಿದ್ದಾರೆ. ಶಿಂಧೆ ಬಣ ಶಿವಸೇನೆ ತೊರೆಯಲು ಕಾರಣವಾಗಿದ್ದೇ ಅಜಿತ್ ಪವಾರ್ ಎನ್ನಲಾಗ್ತಿದೆ. ಅಘಾಡಿ ಸರ್ಕಾರದಲ್ಲಿ ಅಜಿತ್ ಪವಾರ್‌ ಶಿವಸೇನೆಗೆ ಕ್ಯಾರೇ ಎನ್ನುತ್ತಿರಲಿಲ್ಲ. ಇದೇ ಕಾರಣಕ್ಕೆ ಸರ್ಕಾರ, ಪಕ್ಷ ತೊರೆದು ಬಂದಿದ್ದ ಏಕನಾಥ್ ಶಿಂಧೆ ಟೀಂ, ಈಗ ಅದೇ ಅಜಿತ್ ದಾದಾ ಪವಾರ್ ಕರೆತಂದು ಡಿಸಿಎಂ ಮಾಡಿದೆ. ಮುಂದೆ ಚುನಾವಣೆ ಹೊತ್ತಲ್ಲಿ ತಮ್ಮನ್ನೇ ದೂರ ಮಾಡಿದ್ರೆ ಎನ್ನುವ ಆತಂಕ ಹಾಗೂ ಕೊನೆಯ 6 ತಿಂಗಳು ಅಜಿತ್‌ ಪವಾರ್‌ರನ್ನು ಸಿಎಂ ಮಾಡಿದ್ರೆ ಎನ್ನುವ ಟೆನ್ಷನ್ ಶುರುವಾದಂತೆ ಕಾಣುತ್ತಿದೆ. 2024ರಲ್ಲಿ ಅಜಿತ್ ಪವಾರ್ ಜೊತೆ ಸೇರಿ ಬಿಜೆಪಿ ತಮ್ಮನ್ನು ದೂರ ಇಟ್ಟರೆ ಎಂಬ ಆತಂಕ ಸಹ ಶಿಂಧೆ ಬಣಕ್ಕೆ ಕಾಡತೊಡಗಿದೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಉದ್ಯಮಿ ಮನೆಯಲ್ಲಿ ಶರದ್-ಅಜಿತ್ ಪವಾರ್ ಸಭೆ: ಈ ಭೇಟಿ ಹಿಂದಿನ ರಹಸ್ಯವೇನು..?

23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
23:52ಪದಗ್ರಹಣಕ್ಕೂ ಮುನ್ನ ಮೂರು ಹೆಜ್ಜೆ, 3 ಸಂದೇಶ; ಡಿಕೆ ಮಾಸ್ಟರ್ ಪ್ಲಾನ್‌ ರಹಸ್ಯವೇನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?
Read more