ಅಜಿತ್ ಪವಾರ್ ಎಂಟ್ರಿ..ಶಿಂಧೆ ಬಣಕ್ಕೆ ಭೀತಿ: ಮೋದಿ ಭೇಟಿ ಮಾಡಿದ ಏಕನಾಥ್‌ ಶಿಂಧೆ !

ಅಜಿತ್ ಪವಾರ್ ಎಂಟ್ರಿ..ಶಿಂಧೆ ಬಣಕ್ಕೆ ಭೀತಿ: ಮೋದಿ ಭೇಟಿ ಮಾಡಿದ ಏಕನಾಥ್‌ ಶಿಂಧೆ !

Published : Aug 14, 2023, 12:01 PM IST

ಗೆಲ್ಲುವವರಿಗೆ ಮಾತ್ರ ಟಿಕೆಟ್ ಕೊಡುತ್ತೇವೆ ಅಂದರೆ ಏನು ಮಾಡುವುದು? 
ವಾಪಸ್ ಉದ್ಧವ್ ಠಾಕ್ರೆ ಬಳಿ ಹೋಗುವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ
ರಾಜಕೀಯ ತೊಳಲಾಟದ ನಡುವೆ ಪ್ರಧಾನಿಯನ್ನೇ ಭೇಟಿ ಮಾಡಿದ ಶಿಂಧೆ

ಅಜಿತ್ ಪವಾರ್ ಡಿಸಿಎಂ ಹುದ್ದೆ ಏರಿದ ಬಳಿಕ ಶಿಂಧೆ ಬಣಕ್ಕೆ ಟೆನ್ಷನ್ ಶುರುವಾದಂತೆ ಕಾಣುತ್ತಿದೆ. ಹೀಗಾಗಿ ಏಕನಾಥ್‌ ಶಿಂಧೆ(Eknath Shinde) ನೇರವಾಗಿ ಪ್ರಧಾನಿ ಮೋದಿಯನ್ನೇ(Modi) ಭೇಟಿ ಮಾಡಿದ್ದಾರೆ. ಫಡ್ನವೀಸ್, ಅಮಿತ್ ಶಾ(Amit Shah) ಬಿಟ್ಟು ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮೋದಿ ಮುಂದೆ ತಮ್ಮ ಮನದ ಬೇಗುದಿಯನ್ನು ಏಕನಾಥ್ ಶಿಂಧೆ ಹೇಳಿಕೊಂಡಿದ್ದಾರೆ. ಶಿಂಧೆ ಬಣ ಶಿವಸೇನೆ ತೊರೆಯಲು ಕಾರಣವಾಗಿದ್ದೇ ಅಜಿತ್ ಪವಾರ್ ಎನ್ನಲಾಗ್ತಿದೆ. ಅಘಾಡಿ ಸರ್ಕಾರದಲ್ಲಿ ಅಜಿತ್ ಪವಾರ್‌ ಶಿವಸೇನೆಗೆ ಕ್ಯಾರೇ ಎನ್ನುತ್ತಿರಲಿಲ್ಲ. ಇದೇ ಕಾರಣಕ್ಕೆ ಸರ್ಕಾರ, ಪಕ್ಷ ತೊರೆದು ಬಂದಿದ್ದ ಏಕನಾಥ್ ಶಿಂಧೆ ಟೀಂ, ಈಗ ಅದೇ ಅಜಿತ್ ದಾದಾ ಪವಾರ್ ಕರೆತಂದು ಡಿಸಿಎಂ ಮಾಡಿದೆ. ಮುಂದೆ ಚುನಾವಣೆ ಹೊತ್ತಲ್ಲಿ ತಮ್ಮನ್ನೇ ದೂರ ಮಾಡಿದ್ರೆ ಎನ್ನುವ ಆತಂಕ ಹಾಗೂ ಕೊನೆಯ 6 ತಿಂಗಳು ಅಜಿತ್‌ ಪವಾರ್‌ರನ್ನು ಸಿಎಂ ಮಾಡಿದ್ರೆ ಎನ್ನುವ ಟೆನ್ಷನ್ ಶುರುವಾದಂತೆ ಕಾಣುತ್ತಿದೆ. 2024ರಲ್ಲಿ ಅಜಿತ್ ಪವಾರ್ ಜೊತೆ ಸೇರಿ ಬಿಜೆಪಿ ತಮ್ಮನ್ನು ದೂರ ಇಟ್ಟರೆ ಎಂಬ ಆತಂಕ ಸಹ ಶಿಂಧೆ ಬಣಕ್ಕೆ ಕಾಡತೊಡಗಿದೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಉದ್ಯಮಿ ಮನೆಯಲ್ಲಿ ಶರದ್-ಅಜಿತ್ ಪವಾರ್ ಸಭೆ: ಈ ಭೇಟಿ ಹಿಂದಿನ ರಹಸ್ಯವೇನು..?

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more